ಗಮನ
ಸಾವು
ಬಂಧನದ ಬಲೆಯಲ್ಲ
ಇಹದಾಚೆಯ
ಗಮನ
ಉಸಿರಾಚೆಗಿನ
ದಿನದ
ಅಂತಿಮ ನಮನ !
ಏನಿದೆ ಸಾಯಲು ?
ಅಸಲು
ಸವಾಲು
ಇರೋದೇ
ಬದುಕಲು
ಬದುಕಿ ಬಾಳಲು !
ಸಾವು
ಯಾರಿಗಿಲ್ಲ
ಬದುಕು ಹಾಗಲ್ಲ
ಬಲ್ಲವನ ಬಿಟ್ಟು
ಎಲ್ಲರೊಳಗಿಲ್ಲ !
ದಿನಾ
ಹೊಸತನ
ಸಿರಿತನ ಬಡತನ
ಸುಖ ಸಮ್ಮಾನ
ದುಃಖ ದುಮ್ಮಾನ
ದುಗುಡ !
ಬದುಕಲರಿಯದವರಿಗೆ
ಬದುಕು
ಸಾವಿಗಿಂತಲೂ
ನಿಗೂಢ !!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ