ಸೋಮವಾರ, ಮೇ 16, 2016

ಗಮನ

ಗಮನ 
ಸಾವು 
ಬಂಧನದ ಬಲೆಯಲ್ಲ 
ಇಹದಾಚೆಯ 
ಗಮನ 
ಉಸಿರಾಚೆಗಿನ 
ದಿನದ 
ಅಂತಿಮ ನಮನ !

ಏನಿದೆ ಸಾಯಲು ?
ಅಸಲು 
ಸವಾಲು 
ಇರೋದೇ 
ಬದುಕಲು 
ಬದುಕಿ ಬಾಳಲು  ! 

ಸಾವು 
ಯಾರಿಗಿಲ್ಲ  
ಬದುಕು  ಹಾಗಲ್ಲ  
ಬಲ್ಲವನ ಬಿಟ್ಟು 
ಎಲ್ಲರೊಳಗಿಲ್ಲ !

 ದಿನಾ  
ಹೊಸತನ 
ಸಿರಿತನ ಬಡತನ 
ಸುಖ ಸಮ್ಮಾನ  
ದುಃಖ  ದುಮ್ಮಾನ 
ದುಗುಡ !

 ಬದುಕಲರಿಯದವರಿಗೆ  
ಬದುಕು 
ಸಾವಿಗಿಂತಲೂ 
ನಿಗೂಢ !!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ