ಬುಧವಾರ, ಜೂನ್ 28, 2017

ಪ್ರೇಮ ಬೃಂದಾವನ!

ಪ್ರೇಮ ಬೃಂದಾವನ!
💞💞💞💞💞
ನಿನ್ನೊಲುಮೆಗೆ
ಕಾದು
ಹೃದಯದೊಳಗೆ
ಪ್ರೀತಿ
ಗೂಡು ಕಟ್ಟಿದೆ    
ಇನಿಯಾ.....!

ಬಾ...
ಬಂದು...      
ಬೃಂದಾವನವಾಗಿಸು
ಮನೆಯಾ !!

✍🏽ಶಾಂತಾರಾಮ್ ಶೆಟ್ಟಿ .
♥♥♥♥♥♥♥

ಮಂಗಳವಾರ, ಜೂನ್ 27, 2017

ಆಲದ ಮರ!.

ಆಲದ ಮರ!.
➖➖➖➖➖

ಹುಟ್ಟಿದಾಕ್ಷಣ
ಹೃದಯ ತಟ್ಟಿದ
ಸುಂದರ ಕಾವ್ಯ
ಅಮ್ಮಾ....!

ನೀನು ಮಹಾಕಾವ್ಯ
ಅರಿಯಲು
ಸಮಯ ಕೊಟ್ಟವ !

ಅಪ್ಪಾ...
ನೀನು ಆಲದ ಮರ

ಅಳುವ
ಕಣ್ಣೀರಿಗೆ
ಬೆರಳಿಟ್ಟವ
ಸುಡುವ
ನೆತ್ತಿಗೆ
ನೆರಳಿಟ್ಟವ !!.

✍🏽ಶಾಂತಾರಾಮ್ ಶೆಟ್ಟಿ.

ಲಂಚಾವತಾರ!

ಲಂಚಾವತಾರ!
➖➖➖➖➖

ಸತ್ತವನು
ಸರಕಾರಿ
ಅಧಿಕಾರಿ
ಬಲಾ.....
ಭ್ರಷ್ಟಾಚಾರಿಯಂತೆ!

ಯಮ
ಬಂದು ಕರೆದಾಗ
ವಾರ ಬಿಟ್ಟು ಬಾ
ಅರ್ಜಂಟಿದ್ದರೆ
ಹತ್ತುಸಾವಿರ
ತಳ್ಳು
ಎಂದನಂತೆ !!.

ತೃಣ ಸಮಾನ! ➖➖➖➖➖➖

ತೃಣ ಸಮಾನ!
➖➖➖➖➖➖
ಗರಿಕೆಯ
ಹುಲ್ಲಿಲ್ಲದೆ
ಹೊಟ್ಟೆ ನೋವಿಂದ
ಬೊಬ್ಬಿಡುತ್ತಿತ್ತು
ಕಾಂಕ್ರೀಟ್
ಬೀದಿಯಲ್ಲಿ ನಾಯಿ!

ನಗರ
ಜೀವನ
ತೃಣ
ವಿಹೀನ !!

 ✍🏽ಶಾಂತಾರಾಮ್ ಶೆಟ್ಟಿ
➖➖➖➖➖➖➖

ಅಮ್ಮಾವ್ರು..!!

ಅಮ್ಮಾವ್ರು..!!
〰〰〰〰〰

ನಮ್ಮ
ಮನೆಯಲ್ಲಿ
ನನ್ನ
ಮಾತಿನಂತೆಯೇ
ಎಲ್ಲಾ
ನಡೀಬೇಕು...!

ಅದರೂ
ನನ್ನ ನಿರ್ಧಾರ
ನಾಳೆ
ಹೇಳ್ತೇನೆ...

ಹೆಂಡ್ತೀನ
ಒಂದು ಮಾತು
ಕೇಳ್ಬೇಕು!!.

✍🏽ಶಾಂತಾರಾಮ್ ಶೆಟ್ಟಿ🤡
➿➿➿➿➿➿➿➿

ಶನಿವಾರ, ಜೂನ್ 10, 2017

ಅಯ್ಯೋ... ಕೊಲೆ !!

ಅಯ್ಯೋ... ಕೊಲೆ !!
➖➖➖➖➖➖

ಖಣ್ಣಡಕ್ಕಾಗಿ
ಶಾಯಳೂ ಶಿದ್ದ
ಎಂದು ಬೊಬ್ಬಿರಿದಿದ್ದ
ಕನ್ನಡ
ಹೋರಾಟಗಾರ
ಕನ್ನಡವನ್ನೇ
ಕತ್ತು ಹಿಸುಕಿ
ಸಾಯಿಸಿದ್ದ !!

✍🏽ಶಾಂತಾರಾಮ್  ಶೆಟ್ಟಿ
😜😜😜😜😜😜😜

ದುರಾದೃಷ್ಟ!

ದುರಾದೃಷ್ಟ!
➖➖➖➖➖

ರೈತರ ಆತ್ಮಹತ್ಯೆ
ಸಂಬಂಧ
ವಿರೋಧ ಪಕ್ಷದ
ಶಾಸಕರೇನೂ
ಸುಮ್ಮನಿರಲಿಲ್ಲ !

ಸದನದ
ಬಾವಿಗಿಳಿದು
ಹೋರಾಡಿ
ಹೊರಳಾಡಿದರು..


ದುರಾದೃಷ್ಟಕ್ಕೆ
ಬಾವಿಯಲ್ಲಿ
ನೀರಿರಲಿಲ್ಲ !!.😢

✍🏽ಶಾಂತಾರಾಮ್ ಶೆಟ್ಟಿ

ಭಾನುವಾರ, ಜೂನ್ 4, 2017

ಆಮ್ಲೆಟ್

ಆಮ್ಲೆಟ್
➖➖➖➖
ಮೊಟ್ಟೆಯೊಳಗಿಂದ
ಕಾವಲಿಗೆ
ಬಿದ್ದಾಗಲೇ
ಗೊತ್ತಾದದ್ದು
ಕೋಳಿ ಮರಿಗೆ
I am late !!.
➖➖➖➖➖

ಚಿಂತೆ

ಚಿಂತೆ
➖➖➖➖
ಮದುವೆಯಾಗದವನ
ಚಿಂತೆ
ಹೆಂಡತಿ ಸಿಗುತ್ತಿಲ್ಲವಂತೆ
ಮದುವೆಯಾದವನ
ಚಿಂತೆ
ಹೆಂಡತಿ ಕೈಗೇ ಸಿಗುತ್ತಿಲ್ಲವಂತೆ !!.😜

ಇಲ್ಲಗಳ ಬದುಕು!.

ಇಲ್ಲಗಳ ಬದುಕು!.
➖➖➖➖➖➖

ಹಸಿರಿಲ್ಲ
ಉಸಿರು ಬೇಕು
ಮಳೆಯಿಲ್ಲ
ನೀರ
ಒಸರಿರಬೇಕು
ಮಣ್ಣಿಲ್ಲ
ಇಳೆ ಬೆಳೆ
ಬೆಳೀಬೇಕು!

ಬದುಕಿಲ್ಲ
ಜಗದೊಳಗೆ
ಜನರೊಳಗೆ
ಬದುಕಿದಂತೆ
ನಟಿಸಬೇಕು!

ಬೇಕುಗಳ
ಜಯಿಸೋ
ಭರದಲ್ಲಿ
ನರ
ವಾಸ್ತವ
ಮರೆಯುತ್ತಾನೆ
ಸಾವ
ಕರೆಯುತ್ತಾನೆ!

ಮನಸ್ಸಿಲ್ಲ......,
ಆದರೂ
ನಾಳೆ
ಸಾಯಬೇಕು!!

✍🏽ಶಾಂತಾರಾಮ್ ಶೆಟ್ಟಿ.
▪▪▪▪▪▪▪

ಜೀವನ!

ಜೀವನ!
➖➖➖➖➖
ಹುಟ್ಟಿನಿಂದ
ಈ ವರೆಗೆ
ನಾನು ನಡೆದದ್ದು
ಸಾವಿನ
ಮನೆಯ ದಾರಿ...!

ಮನೆ
ಸಿಕ್ಕರೆ
ವಿಶ್ರಾಂತಿ!!
✍🏽ಶಾಂತಾರಾಮ್ ಶೆಟ್ಟಿ