ಭಾನುವಾರ, ಆಗಸ್ಟ್ 20, 2017

ಬಾಂಧವ್ಯ!

ಬಾಂಧವ್ಯ!

ನೊಂದವರ
ನೋವಿಗೆ
ನೋಯುವವರಿಲ್ಲ
ಅನ್ನುವ
ನೋವು 😢
ನೋವಿಗೂ ಇದೆ!


ನೋವೂ
ನಮ್ಮೊಳಗಿನವನೇ
ಬಿಟ್ಟಿರಲಾಗದವ..,

ನಲಿವಿನಂತೆ😀
ನೋವಿಗೂ
ಬಂಧುಗಳು
ನಾವು-ನೀವು!!.

✍🏽ಶಾಂತಾರಾಮ್ ಶೆಟ್ಟಿ
➖➖➖➖➖🌹❣

ಉನ್ನತಿ!

ಉನ್ನತಿ!
➖➖➖➖

ಕಳೆದು
ಕಳೆದೂ
ಕಣ್ಣೆದುರೇ
ಬೆಳೆದವರಿದ್ದಾರೆ....,

ಮೋಡ
ಹನಿ-ಹನಿಯಾಗಿ
ಕಳೆದು
ಇಳೆಯೊಳಗೆ
ಇಳಿದು
ಪಚ್ಚೆಪೈರಾಗಿ
ಸೊಂಪಾಗಿ-
ತಂಪಾಗಿ
ಬೆಳೆದದ್ದು!

ಗಂಧ
ಅರೆದು-ಅರೆದೂ
ಸುತ್ತ ಮುತ್ತ
ಕಂಪು ಬೀರಿ
ನೊಸಲಿಗೇರಿದ್ದು!

ತುಳಿದು-ತುಳಿದೂ
ಮಣ್ಣು
ಮಡಕೆಯಾಗಿ
ಅನ್ನದ
ಅಕ್ಷಯದ
ಪಾತ್ರೆಯಾದದ್ದು!

ಯಾಕೆ
ಕಳೆದುದರ ಚಿಂತೆ?
ಕಳೆದೂ
ಬೆಳೆಯಬಹುದಂತೆ!!

✍🏽ಶಾಂತಾರಾಮ್ ಶೆಟ್ಟಿ➖
➖➖➖➖➖➖➖

ಧೈರ್ಯ!

ಧೈರ್ಯ!
➖➖➖➖
ಧೀರ
ಸಾವಿನ ಮನೆಯ
ಕದ ತಟ್ಟಿ
ಕೇಳಿದ
ನಿನಗೆ
ಬದುಕಲು
ಆಸೆಯಿದೆಯಾ?

✍🏽ಶಾಂತಾರಾಮ್ ಶೆಟ್ಟಿ
➖➖➖➖➖➖➖

ಮಂಗಳವಾರ, ಆಗಸ್ಟ್ 15, 2017

ಆತ್ಮಹತ್ಯೆ!

ಆತ್ಮಹತ್ಯೆ!
➖➖➖➖

ದಿನಾ
ಸೊಂಪಾಗಿ
ನೆರಳೀಯುತ್ತಿದ್ದ
ಆಲದ ಮರ
ಇಂದೇಕೋ
ಅವನ
ಜಾತಿ ಕೇಳಿತು!


ಧರ್ಮಾಂಧತೆ
ಮೇರೆ ಮೀರಿ
ಮರವೇರಿ
ಬಾಯಿಗೆ ಬೆರಳಿಟ್ಟು
ನಿಶ್ಯಬ್ಧವಾಗಿ
ರೆಂಬೆಯಲಿ
ನೆಲೆಸಿತ್ತು

ಮರದ
ಕೊಂಬೆ
ನಡುನೆತ್ತಿಗೆ ಬಿದ್ದು
ದೇಹ ಬಿಡಿ
ಆತ್ಮ
ಕೂಡಾ ಸತ್ತಿತು!!.

✍🏽ಶಾಂತಾರಾಮ್ ಶೆಟ್ಟಿ 😐
➖➖➖➖➖➖➖

ಸಮಾಧಿ!

ಸಮಾಧಿ!
➖➖➖➖💀

ಸತ್ಯ ಸತ್ತಿದ್ದೇ
ಬಾಯ್ಬಿಡದವರ
ಬಾಯೊಳಗೆ.. !

ನಾಲಗೆನೇ
ಸತ್ಯದ
ಹಾದಿ...
ನಾಲಗೆಯೇ
ಸತ್ಯದ
ಸಮಾಧಿ!.

✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖➖

ಬದ್ಧ!

ಬದ್ಧ!
☘☘☘☘

ಬುದ್ಧನ ಕುರಿತು
ಕೊರೆದವರೆಲ್ಲಾ
ಬುದ್ಧನಿಗೆ
ಬದ್ಧರಲ್ಲ......!

ಆಸೆ ದು:ಖದ ಮೂಲ
ಎಂದು
ಜರಿದ
ಪ್ರವಚನಕಾರರು
ಸಂಭಾವನೆ
ಕಡಿಮೆಯಾಯಿತೆಂದು
ಎತ್ತಿದರಂತೆ
ಸಂಘಟಕರಲ್ಲಿ
ತಕರಾರು!!

✍🏽ಶಾಂತಾರಾಮ್ ಶೆಟ್ಟಿ 😳
➖➖➖➖➖➖➖

ವರ್ತಮಾನ!

ವರ್ತಮಾನ!
➖➖➖➖➖➖
ಸಜ್ಜನ ಸಾತ್ವಿಕರಿಗೆ
ಭೂಮಿ ಮೇಲೆ
ಇಂದು
ಕಷ್ಟಗಳಿರಬಹುದು
ನಾಳೆ
ಮೇಲೆ
ಸ್ವರ್ಗ ಕಾದಿದೆ!

ಅನುಭೋಗಕ್ಕೆ
ಒಂದಿಷ್ಟು
ಪುಣ್ಯದ ಮಿತಿ....!

ವರ್ತಮಾನದಲ್ಲಿ
ಬದುಕುವ
ಸುಳ್ಳರಿಗೆ ಕಳ್ಳರಿಗೆ
ಲೂಟಿಗಾರರಿಗೆ
ನಾಳೆಗಳಲ್ಲಿ
ನಂಬಿಕೆಯಿಲ್ಲ....!

ಇಂದೇ
ಭೂಮಿಯಲ್ಲೆ
ಸ್ವರ್ಗಸೃಷ್ಟಿಯಾಗಿದೆ
ಉದ್ಘಾಟನೆಗೆ
ಇಂದ್ರನೇ
ಮುಖ್ಯ ಅತಿಥಿ!!.

✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖👻.

ಬದ್ಧತೆ!

ಬದ್ಧತೆ!
➖➖➖

ಬೀಜ
ನಾಶದಿಂದ
ಬೆಳೆದ ಹೆಮ್ಮರ...

ನಾಶದ
ಹೊಣೆ ಹೊತ್ತು
ಋಣ ತೀರಿಸಿತು....

ಕೊಟ್ಟು
ಸಾವಿರ ಪಟ್ಟು!

✍🏽ಶಾಂತಾರಾಮ್ ಶೆಟ್ಟಿ.
➖➖➖➖➖🌳

ತಾಕತ್ತು!

ತಾಕತ್ತು!
➖➖➖
ಭಾಷೆ
ಬರದವರ
ನಡುವೆಯೂ
ದುಡ್ಡು
ಮಾತಾಡಿತು!!.

✍ಶಾಂತಾರಾಮ್ ಶೆಟ್ಟಿ

ಹಾರೈಕೆ!💧

ಹಾರೈಕೆ!💧
➖➖➖➖
ನಿನ್ನ ನೋವಿನ
ಕೊನೆಯ
ಬಿಂದುವಾಗಲಿ
ನಾನು....
ಕೆನ್ನೆಯ
ಇಳಿಜಾರಿನಲ್ಲಿ
ಜಾರುವ
ಮುನ್ನ
ಹರಸಿತು
ಕಣ್ಣೀರ ಹನಿ!! 😢

✍ಶಾಂತಾರಾಮ್ ಶೆಟ್ಟಿ💧

ಸೋಮವಾರ, ಆಗಸ್ಟ್ 7, 2017

ಅನ್ಯಾಯ!

ಅನ್ಯಾಯ!
➖➖➖➖➖
ಸಂಕುಚಿತ
ಸಮಾಜದಲ್ಲಿ
ಸಾಮಾನ್ಯನ
ಬದುಕು
ಅಯೋಮಯ..,

ಜಾತಿ-ಧರ್ಮ
ಧನ ಬಲ
ಜನ ಬಲ
ಎಡ-ಬಲ
ರಾಜಕೀಯ!

ಅಯ್ಯಯ್ಯೋ...
ಎಂದು
ಬಾಯ್ ಬಾಯ್
ಬಡ್ಕೊಂಡು
ಎದೆಬಿರಿದು
ಪಾಪ....
ನಿನ್ನೆನೇ
ಸತ್ತೋಯ್ತಂತೆ
ನ್ಯಾಯ !!

✍🏽 ಶಾಂತಾರಾಮ್ ಶೆಟ್ಟಿ
➖➖➖➖➖😕😢

ಉನ್ಮಾದ!

ಉನ್ಮಾದ!
➖➖➖➖➖
ಈ ದೇಶ ನನ್ನದು
ನನ್ನ ದೇಹದೊಳು
ಹರಿಯುವ
ಹನಿ ಹನಿ
ರಕ್ತವೂ ನಿನ್ನದು !

ಕವಿ ಬರೆದ
ಗಾಯಕ ಹಾಡಿದ
ಜನ
ವೀರಾವೇಶದಿಂದ
ಕುಣಿದರು
ದಣಿದರು...!!

ಉನ್ಮತ್ತ ಮತಭಕ್ತ
ರಾಜಕಾರಣಿ
ಎದೆಸೀಳುವ
ತಲೆಕಡಿಯುವ
ಯುದ್ದೋನ್ಮಾದದ
ರಕ್ತಸಿಕ್ತ
ಪಂಥಾಹ್ವಾನ ನೀಡಿದ!

ಗಡಿಯಲ್ಲಿ
ಗುಂಡು ಎದೆಯೊಕ್ಕಿಸಿ
ರಕ್ತ ಬಸಿದುಕೊಂಡು
ವೈರಿಯ ಪ್ರಾಣ
ಕಸಿದುಕೊಂಡು
ತಣ್ಣಗೆ ಸತ್ತಿದ್ದು
ಸೈನಿಕ ಮಾತ್ರ!

ವೀರ ಸತ್ತಾಗ
ಹೆಂಡತಿ ಮಕ್ಕಳು
ಎದೆಬಿರಿದು ಅತ್ತಾಗ
ಲೆಕ್ಕಿಸಲಿಲ್ಲ-ಬಿಕ್ಕಿಸಲಿಲ್ಲ
ದು:ಖಿಸಲು
ಜನರೇ ಇಲ್ಲ !

ಉಗುರು ಕಚ್ಚುವ
ದೇಶಭಕ್ತರೆಲ್ಲರೂ
ಅತಂಕಿತರೇ
ದೇಶ ಗೆದ್ದರೆ ಸಾಕು
ಕೊನೆಯ ಬಾಲಲ್ಲಿ
ಗೆಲ್ಲಲು ಇನ್ನೂ
ಐದು ರನ್ನು ಬೇಕು!!.

✍🏽ಶಾಂತಾರಾಮ್ ಶೆಟ್ಟಿ 😕⁠⁠⁠⁠

ಆವಾಸ! .

ಆವಾಸ! .
➖➖➖➖😳

ಶಾರದೆ
ಬರೀ
ಜ್ನಾನಿ-ವಿಜ್ನಾನಿಗಳ
ಮನೆಯಂಗಳದ
ಮಹಾರಾಣಿ!

ಲಕ್ಷ್ಮೀ
ಹಾಗಲ್ಲ...
ಕಳ್ಳಕಾಕ
ಸುಳ್ಳ ಮಳ್ಳರ
ವ್ಯತ್ಯಾಸವಿಲ್ಲ!


ದಡ್ಡ ಕೂಡಾ
ದುಡ್ಡು
ಮಾಡಬಲ್ಲ !!.

✍🏽ಶಾಂತಾರಾಮ್ ಶೆಟ್ಟಿ
➖➖➖➖➖➖➖

ದಾರಿ ತಪ್ಪಿದ ಮಗ!

ದಾರಿ ತಪ್ಪಿದ ಮಗ!
➖➖➖➖➖➖

ಅವಳ ಮನೆಯಿದ್ದ
ಓಣಿ ಅವನ
ದಿನದ-ಅನುದಿನದ
ದಾರಿಯಲ್ಲ...!

ಪ್ರೀತಿ ತುಂಬಿದ
ಹೃದಯ
ಲಯ ತಪ್ಪಿದ್ದು!

ಕಾಡಿಬೇಡಿ
ಕಾಲನ್ನು ಕೇಳಿ
ಒಪ್ಪಿಸಿದ್ದು....

ಅವಳ
ಮೆಲುನಗು
ಅವನ
ದಾರಿ ತಪ್ಪಿಸಿದ್ದು!!.

✍🏽ಶಾಂತಾರಾಮ್ ಶೆಟ್ಟಿ

ಪರ್ಣಕುಟಿ!

ಪರ್ಣಕುಟಿ!
☘☘☘☘
ಜಾತಿ
ಸ್ವಾಮಿಗಳಿಗೊಂದು
ಸಣ್ಣ
ಆಶ್ರಮ ಬೇಕಂತೆ!
ಅವರೇ
ಹೆಸರಿಟ್ಟಿದ್ದಾರೆ
ನಮಗ್ಯಾಕೆ ಚಿಂತೆ?

ಪರ್ಣಕುಟಿ
ಅಂದಾಜು ವೆಚ್ಚ
ಸುಮಾರು
ಹತ್ತು ಕೋಟಿ !

ತಲೆಗೆ
ಹತ್ತೇ ರೂಪಾಯಿ
ಸಾಕೆನ್ನುತ್ತೆ
ಭಕ್ತಕೋಠಿ!!

✍🏽 ಶಾಂತಾರಾಮ್ ಶೆಟ್ಟಿ.
☘☘☘☘☘☘☘