ಬುಧವಾರ, ನವೆಂಬರ್ 22, 2023

wilson Dsouza

                                                       ತುಳುಕೂಟ ಬೆಂಗಳೂರು (ರಿ)

ಸುವರ್ಣ ಮಹೋತ್ಸವದ  ಸಂದರ್ಭ  ತುಳುನಾಡಿನ ಸಾಧಕರಿಗೆ  ಗೌರವ ಪೂರ್ವಕ ಸನ್ಮಾನ 

                                         ಕುವೈಟ್ ರಾಷ್ಟ್ರದ  ಹೆಮ್ಮೆಯ ತುಳುವ  

                                                   ವಿಲ್ಸನ್  ಡಿಸೋಜಾ   

                                                            ಅವರಿಗೆ  

                                                 ಸುವರ್ಣ ಸನ್ಮಾನ  ಪತ್ರ. 

ತುಳುನಾಡಿನ ಆಯುರ್ವೇದ  ಮೂಲಿಕಾ ಭಂಢಾರ  ಮುಲ್ಕಿಯಲ್ಲಿ  22 ಆಗಸ್ಟ್  1970ರಲ್ಲಿ ಜನಿಸಿ  ನಿಟ್ಟೆ ರುಕ್ಮಿಣಿ  ಅಡ್ಯಂತಾಯ  ಪಾಲಿಟೆಕ್ನಿಕ್  ವಿದ್ಯಾಲಯದಲ್ಲಿ  ವಿದ್ಯಾಭ್ಯಾಸ ಮುಗಿಸಿ  ಕಡಲಾಚೆಯ ದೇಶ ಕುವೈಟಿನಲ್ಲಿ ನೆಲೆಸಿದ್ದರೂ  ತುಳು ಭಾಷೆಯ ಮೇಲಿನ ಅಪ್ರತಿಮ  ಮಮತೆಯಿಂದ  ತುಳುಕೂಟ ಕುವೈಟ್  ಜೊತೆಗೂಡಿ ಅವಿರತವಾಗಿ  ನಿಸ್ವಾರ್ಥ ಸೇವೆ ಗೈದಿರುವಿರಿ . 2009 ರಿಂದ  ಸಾಮಾನ್ಯ ಸದಸ್ಯತ್ವದಿಂದ ಆರಂಭಿಸಿ  ಪ್ರಧಾನ ಕಾರ್ಯದರ್ಶಿಯಾಗಿ , ಉಪಾಧ್ಯಕ್ಷರಾಗಿ  ಅಂತಿಮವಾಗಿ ಅಧ್ಯಕ್ಷರಾಗಿ  ತಾವು ತುಳುಕೂಟ ಕುವೈಟ್  ಮುಖಾಂತರ  ತುಳು ಭಾಷೆಗೆ ಸಲ್ಲಿಸಿದ  ಸೇವೆಯನ್ನು  ಮತ್ತು ಅಶಕ್ತ  ತುಳುನಾಡಿನ ಬಂಧುಗಳಿಗೆ ಗೃಹ ನಿರ್ಮಾಣ ಮಾಡುವಲ್ಲಿ    ಹಾಗೂ ತುಳು ಕಲಾವಿದರಿಗೆ ಬೆನ್ನೆಲಬಾಗಿ ನಿಂತಿರುವುದನ್ನು  ನಾವು  ಗೌರವಪೂರ್ವಕವಾಗಿ  ಸ್ಮರಿಸುತ್ತೇವೆ.  

ಭಾಷೆ ನೆಲ ಜಲ ಸಂಸ್ಕೃತಿಗೆ ಸದಾ  ಜಾಗ್ರತ ರೀತಿಯಲ್ಲಿ  ಕಳೆದ ಐವತ್ತು ವರ್ಷಗಳಿಂದ ದುಡಿಯುತ್ತಾ  ಬಂದ ತುಳುಕೂಟ ಬೆಂಗಳೂರಿಗೆ ಈಗ   ಸುವರ್ಣ ಮಹೋತ್ಸವದ ಸಂಭ್ರಮ . ಈ ''ಬಂಗಾರ್ದ ಪರ್ಬ'' ಸಂದರ್ಭದಲ್ಲಿ ತಮ್ಮ ಈ ಎಲ್ಲಾ ಸೇವೆಗಳನ್ನು  ಗಮನಿಸಿ  ತಮ್ಮನ್ನು  ಸನ್ಮಾನಿಸಲು   ತುಳುಕೂಟ ಬೆಂಗಳೂರು   ಹೃದಯಪೂರ್ವಕವಾಗಿ  ಸಂತೋಷಪಡುತ್ತದೆ . 

 ತಮ್ಮ ಸಾಧನೆ  ಹೀಗೆ  ಮುಂದುವರಿಯಲಿ , ತುಳುನಾಡಿಗೆ , ಕರ್ನಾಟಕಕ್ಕೆ ಹಾಗೂ ದೇಶಕ್ಕೆ  ವಿಶೇಷ ಕೊಡುಗೆ ನೀಡಿದ ತಾವು   ನೂರ್ಕಾಲ ಅರೋಗ್ಯ ಪೂರ್ಣರಾಗಿ ಬಾಳಿ  ನಮಗೆಲ್ಲ  ಆದರ್ಶರಾಗಿರಿ ಎಂದು ಆ ಭಗವಂತನಲ್ಲಿ  ಪ್ರಾರ್ಥಿಸುತ್ತಾ  ಈ  ''ಸುವರ್ಣ ಸನ್ಮಾನ'' ಪತ್ರವನ್ನು  ಸರ್ವ ಮಹನೀಯರ ಸಮ್ಮುಖದಲ್ಲಿ  ತಮಗೆ ಸಮರ್ಪಿಸುತ್ತಿದ್ದೇವೆ. 

ದಿನಾಂಕ : 24-11-2023.

ಸ್ಥಳ :ಅರಮನೆ  ಮೈದಾನ ಬೆಂಗಳೂರು 

ಕೆ ವಿ ರಾಜೇಂದ್ರ ಕುಮಾರ್                   ಸುಂದರ್ ರಾಜ್  ರೈ                              ಅಜಿತ್ ಹೆಗ್ಡೆ ಕೆ 

ಗೌರವ ಅಧ್ಯಕ್ಷರು                                           ಅಧ್ಯಕ್ಷರು                            ಪ್ರಧಾನ ಕಾರ್ಯದರ್ಶಿ 

veerappa maily

                                               ತುಳುಕೂಟ ಬೆಂಗಳೂರು (ರಿ)

          ಸುವರ್ಣ ಮಹೋತ್ಸವದ  ಸಂದರ್ಭ  ತುಳುನಾಡಿನ ಸಾಧಕರಿಗೆ  ಗೌರವ ಪೂರ್ವಕ ಸನ್ಮಾನ 

                                               ಕವಿ ಮನಸ್ಸಿನ  ಶ್ರೇಷ್ಠ ರಾಜಕಾರಣಿ 

                                             ಡಾ.  ಮಾರ್ಪಾಡಿ ವೀರಪ್ಪ ಮೊಯಿಲಿ 

                                                               ಅವರಿಗೆ  

                                                 ಸುವರ್ಣ ಸನ್ಮಾನ  ಪತ್ರ. 

ಮೂಡ ಬಿದ್ರಿಯ  ಮಾರ್ಪಾಡಿಯಲ್ಲಿ 12 ಜನವರಿ 1940 ರಂದು ಜನಿಸಿ  ಬೆಂಗಳೂರಿನಲ್ಲಿ ಕಾನೂನು ಪದವಿ ಪಡೆದು   ನಂತರ ವಕೀಲ  ವೃತ್ತಿಯನ್ನು ಆರಂಭಿಸಿದ ತಾವು 1972 ರಲ್ಲಿ  ಮೊದಲ ಬಾರಿಗೆ ಕಾರ್ಕಳ  ಶಾಸಕನಾಗಿ ರಾಜಕೀಯ ಜೀವನ ಆರಂಭಿಸಿ ನಂತರ ಯಶಸ್ಸಿನ ಉತ್ತುಂಗಕ್ಕೆ ಏರಿದ್ದು  ಇಂದಿಗೆ ಇತಿಹಾಸ.  ಶಾಸಕನಾಗಿ , ಸಂಸದೀಯನಾಗಿ,ಮುಖ್ಯಮಂತ್ರಿಯಾಗಿ  , ಕೇಂದ್ರದಲ್ಲಿ ಕಾನೂನು, ಶಿಕ್ಷಣ  ಸಚಿವನಾಗಿ  ಹೀಗೆ ಹಲವಾರು ಸಾಂವಿಧಾನಿಕ  ಹುದ್ದೆಗಳನ್ನು  ಅಲಂಕರಿಸಿ  ಆ  ಸ್ಥಾನಗಳಿಗೆ  ಅರ್ಹರೀತಿಯ  ನ್ಯಾಯ  ಒದಗಿಸಿದ್ದು  ನಮ್ಮೆಲ್ಲರಿಗೂ  ಹೆಮ್ಮೆಯ ವಿಷಯ . 

1992-1994 ಕರ್ನಾಟಕ  ರಾಜ್ಯದ    ಮುಖ್ಯಮಂತ್ರಿಯಾಗಿ  ತುಳು ಅಕಾಡಮಿ ಸ್ಥಾಪನೆಯಲ್ಲಿ   ತಮ್ಮ ಕೊಡುಗೆಯನ್ನು  ತುಳು ಭಾಷಿಗರು ಎಂದೂ ಮರೆಯದೆ ಸದಾ ಹೃದಯದಲ್ಲಿ  ಸ್ಥಾಪಿಸಿದ್ದಾರೆ . 

ಕವಿ ಹೃದಯದ  ರಾಜಕಾರಣಿಯಾಗಿ ತಾವು  ''ಶ್ರೀರಾಮಾಯಣ ಮಹಾನ್ವೇಷಣಂ'' ,''ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯಂ''  ಇಂತಹ ಮೇರು ಕೃತಿಗಳನ್ನು , ಸತ್ವಯುತ ಕವನ ಸಂಕಲನಗಳನ್ನು ,  ಚಲನಚಿತ್ರ ವಾಗಿ ರೂಪಿತವಾದ ಸಾಮಾಜಿಕ ಕಾದಂಬರಿಗಳನ್ನು ಕೊಟ್ಟು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದೀರಿ . 

ಸರಸ್ವತಿ ಸಮ್ಮಾನ್ , ದೇವರಾಜು ಅರಸು ಪ್ರಶಸ್ತಿ , ಬಸವ ಶಾಂತಿ ಪ್ರಶಸ್ತಿ ಯಂತಹ ಶ್ರೇಷ್ಠ ಪುರಸ್ಕಾರಗಳ ಜೊತೆಗೆ   ಮೈಸೂರು ವಿಶ್ವ ವಿದ್ಯಾಲಯ  , ಹೈದರಾಬಾದ್ ಕಾನೂನು ವಿಶ್ವ  ವಿದ್ಯಾಲಯ , ಮಂಗಳೂರುವಿಶ್ವ  ವಿದ್ಯಾಲಯ  ಮತ್ತು  ರಶಿಯನ್ ಅಕಾಡಮಿಯಿಂದ  ಗೌರವ ಡಾಕ್ಟರೇಟ್ ಪಡೆದಿರುವುದು  ತಮ್ಮ ವಿದ್ವತ್ತಿಗೆ ಸಾಕ್ಷಿಗಳಾಗಿವೆ 

 ತುಳುಕೂಟ ತನ್ನ ಐವತ್ತರ ಸಂಭ್ರಮ ''ಬಂಗಾರ್ದ ಪರ್ಬ''  ಆಚರಣೆಯ ಸಂದರ್ಭದಲ್ಲಿ ತಮ್ಮನ್ನು ಈ ವೇದಿಕೆಯಲ್ಲಿ ಸನ್ಮಾನಿಸಲು  ಹೆಮ್ಮೆ ಪಡುತ್ತದೆ. ತಮ್ಮ ಸಾಧನೆ  ಹೀಗೆ  ಮುಂದುವರಿಯಲಿ , ತುಳುನಾಡಿಗೆ , ಕರ್ನಾಟಕಕ್ಕೆ ಹಾಗೂ ದೇಶಕ್ಕೆ  ಅನನ್ಯ ಕೊಡುಗೆಯಾಗಿರುವ     ತಾವು   ನೂರ್ಕಾಲ ಅರೋಗ್ಯ ಪೂರ್ಣರಾಗಿ ಬಾಳಿ  ಮತ್ತಷ್ಟು ಸಾಧನೆಗೈಯಿರಿ ಎಂದು ಆ ಭಗವಂತನಲ್ಲಿ  ಪ್ರಾರ್ಥಿಸುತ್ತಾ  ಈ  ''ಸುವರ್ಣ ಸನ್ಮಾನ'' ಪತ್ರವನ್ನು  ಸರ್ವ ಮಹನೀಯರ ಸಮ್ಮುಖದಲ್ಲಿ  ತಮಗೆ ಸಮರ್ಪಿಸುತ್ತಿದ್ದೇವೆ. 

ದಿನಾಂಕ : 24-11-2023.

ಸ್ಥಳ :ಅರಮನೆ  ಮೈದಾನ ಬೆಂಗಳೂರು 

ಕೆ ವಿ ರಾಜೇಂದ್ರ ಕುಮಾರ್                   ಸುಂದರ್ ರಾಜ್  ರೈ                              ಅಜಿತ್ ಹೆಗ್ಡೆ ಕೆ 

ಗೌರವ ಅಧ್ಯಕ್ಷರು                                           ಅಧ್ಯಕ್ಷರು                            ಪ್ರಧಾನ ಕಾರ್ಯದರ್ಶಿ 

dr. p Dayanand pai

                                                   ತುಳುಕೂಟ ಬೆಂಗಳೂರು (ರಿ)

          ಸುವರ್ಣ ಮಹೋತ್ಸವದ  ಸಂದರ್ಭ  ತುಳುನಾಡಿನ ಸಾಧಕರಿಗೆ  ಗೌರವ ಪೂರ್ವಕ ಸನ್ಮಾನ 

                                          ಶೈಕ್ಶಣಿಕ  ಮತ್ತು ಸಾಂಸ್ಕೃತಿಕ  ಹರಿಕಾರ 

                                                          ಡಾ. ಪಿ. ದಯಾನಂದ್ ಪೈ 

                                                               ಅವರಿಗೆ  

                                                    ಸುವರ್ಣ ಸನ್ಮಾನ  ಪತ್ರ. 

 ಸೃಷ್ಟಿಯ  ಶ್ರೇಷ್ಠ ತುಳುನಾಡಿನಲ್ಲಿ  8-2-1945  ಜನಿಸಿ  ಬೆಂಗಳೂರಿನಲ್ಲಿ  ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿ  ಸೆಂಚುರಿ ರಿಯಲ್  ಎಸ್ಟೇಟ್  ಸಂಸ್ಥೆಯನ್ನು ಹುಟ್ಟುಹಾಕಿ  ಯಶೋಗಾಥೆಯನ್ನು  ಬರೆದವರು ತಾವು . ಸಮಾಜಮುಖಿ  ನಡೆಯನ್ನು ಬೆಳೆಸಿಕೊಂಡು  ಶಿಕ್ಷಣ , ಸಾಮಾಜಿಕ, ಧಾರ್ಮಿಕ   ಅಭಿವೃದ್ಧಿಯಲ್ಲಿ  ಸಕ್ರಿಯನಾಗಿ  ಪಾಲ್ಗೊಂಡು  ಬಿ ಎಂ ಎಸ್  ಕಾಲೇಜು , ಭಾರತೀಯ ವಿದ್ಯಾಭವನ, ಮಂಗಳೂರು ಯೂನಿವರ್ಸಿಟಿ , ಮಣಿಪಾಲ ಯೂನಿವರ್ಸಿಟಿ , ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್  ಟೆಕ್ನಾಲಜಿ ಸುರತ್ಕಲ್  ಮುಂತಾದ ಹಲವು ಪ್ರತಿಷ್ಠಿತ  ವಿದ್ಯಾ ಸಂಸ್ಥೆಗಳ  ಜವಾಬ್ದಾರಿ ಸ್ಥಾನಗಳಲ್ಲಿ ದುಡಿದು  ಆ ಸಂಸ್ಥೆಗಳ  ಉಜ್ಜೀವನಕ್ಕೆ  ಕಾರಣರಾದವರು .  ಭಾಷಾ  ಪ್ರೇಮಿಯಾಗಿರುವ  ತಾವು ತುಳು ಕೊಂಕಣಿ ಸೇರಿದಂತೆ  ತುಳುನಾಡಿನ  ಹಲವಾರು  ಭಾಷೆಗಳ  ಸಾಂಸ್ಕೃತಿಕ  ಸಂರಕ್ಷಣೆಗೆ  ಬೆನ್ನೆಲುಬಾಗಿ ನಿಂತವರು. 

ಸಾಮಾಜಿಕ ಕಳಕಳಿಯ  ಸಲುವಾಗಿ ''ಕರ್ನಾಟಕ   ಉದ್ಯೋಗ ಅವಾರ್ಡ್''   ಮತ್ತು ''ಕರ್ನಾಟಕ ರಾಜ್ಯೋತ್ಸವ''  ಪುರಸ್ಕಾರಗಳನ್ನು  ಪಡೆದಿರುವ  ತಮಗೆ  ಶೈಕ್ಷಣಿಕ ಕ್ಷೇತ್ರದಲ್ಲಿನ  ಗಮನಾರ್ಹ ಕೊಡುಗೆಗಾಗಿ ಮಂಗಳೂರು ವಿಶ್ವ ವಿದ್ಯಾಲಯ  ಗೌರವ  ಡಾಕ್ಟರೇಟ್  ಪ್ರಾಪ್ತವಾದದ್ದು  ನಮಗೆಲ್ಲರಿಗೂ  ಅತ್ಯಂತ  ಸಂತೋಷದ   ವಿಷಯ.  

ತುಳುಕೂಟ ತನ್ನ ಐವತ್ತರ ಸಂಭ್ರಮ ''ಬಂಗಾರ್ದ ಪರ್ಬ''  ಆಚರಣೆಯ ಸಂದರ್ಭದಲ್ಲಿತಮ್ಮ ಈ ಎಲ್ಲಾ  ಸಾಧನೆ ಸಹಕಾರಗಳಿಗೆ  ತಮ್ಮನ್ನು ಈ ವೇದಿಕೆಯಲ್ಲಿ ಸನ್ಮಾನಿಸಲು  ಹೆಮ್ಮೆ ಪಡುತ್ತದೆ. ಸಾಮಾಜಿಕ ಕ್ಷೇತ್ರ , ಶೈಕ್ಷಣಿಕ ಮತ್ತು  ಧಾರ್ಮಿಕ  ಕ್ಷೇತ್ರದಲ್ಲಿ  ತಮ್ಮ  ಈ ಸೇವೆ   ಇಂತೆಯೇ  ಮುಂದುವರಿದು   ಮತ್ತಷ್ಟು ಸಾಧನೆಗೈಯುವಂತಾಗಲಿ  ಎಂದು ಆ ಭಗವಂತನಲ್ಲಿ  ಪ್ರಾರ್ಥಿಸುತ್ತಾ  ಈ  ''ಸುವರ್ಣ ಸನ್ಮಾನ'' ಪತ್ರವನ್ನು  ಸರ್ವ ಮಹನೀಯರ ಸಮ್ಮುಖದಲ್ಲಿ  ತಮಗೆ ಸಮರ್ಪಿಸುತ್ತಿದ್ದೇವೆ. 

ದಿನಾಂಕ : 24-11-2023.

ಸ್ಥಳ :ಅರಮನೆ  ಮೈದಾನ ಬೆಂಗಳೂರು 

ಕೆ ವಿ ರಾಜೇಂದ್ರ ಕುಮಾರ್                   ಸುಂದರ್ ರಾಜ್  ರೈ                              ಅಜಿತ್ ಹೆಗ್ಡೆ ಕೆ 

ಗೌರವ ಅಧ್ಯಕ್ಷರು                                           ಅಧ್ಯಕ್ಷರು                            ಪ್ರಧಾನ ಕಾರ್ಯದರ್ಶಿ 

sarvothama shetty

                                                       ತುಳುಕೂಟ ಬೆಂಗಳೂರು (ರಿ)

          ಸುವರ್ಣ ಮಹೋತ್ಸವದ  ಸಂದರ್ಭ  ತುಳುನಾಡಿನ ಸಾಧಕರಿಗೆ  ಗೌರವ ಪೂರ್ವಕ ಸನ್ಮಾನ 

                                     ತುಳು ಭಾಷೆ ಮತ್ತು ಸಂಸ್ಕೃತಿಯ  ಸಾಗರೋತ್ತರ  ರಾಯಭಾರಿ 

                                                    ಶ್ರೀ ಸರ್ವೋತ್ತಮ  ಶೆಟ್ಟಿ  ಅಬುಧಾಬಿ         

                                                                       ಅವರಿಗೆ  

                                                         ಸುವರ್ಣ ಸನ್ಮಾನ  ಪತ್ರ. 

ಕರ್ನಾಟಕ ರಾಜ್ಯದ  ಎರಡು ಪ್ರಮುಖ ಭಾಷೆಗಳಾದ ತುಳು ಮತ್ತು ಕನ್ನಡವನ್ನು  ಸಾಗರದಾಚೆಯ  ಕೊಲ್ಲಿ ಮತ್ತಿತರ  ರಾಷ್ಟ್ರಗಳಲ್ಲಿ ಪಸರಿಸಿದವರಲ್ಲಿ   ತಾವು ಅಗ್ರಮಾನ್ಯರು.  ಉಡುಪಿಯ ಪರೀಕ  ಎಂಬ ಸಣ್ಣ ಹಳ್ಳಿಯಲ್ಲಿ  ಜನಿಸಿ   ಪ್ರೌಢ ವಿದ್ಯಾಭ್ಯಾಸವನ್ನು ಮುಗಿಸಿ  ಜೀವನೋಪಾಯಕ್ಕಾಗಿ  ಮುಂಬೈ ನಗರ ಸೇರಿ ಅಲ್ಲಿಯೂ  ಛಲಬಿಡದೆ  ಕಲಿಕೆಯನ್ನು ಮುಂದುವರಿಸಿ  ವಾಣಿಜ್ಯ ಪದವಿ ಮುಗಿಸಿ   ಬ್ಯಾಂಕ್ ಉದ್ಯೋಗಿಯಾಗಿ  ನೆಲೆ ಕಂಡುಕೊಂಡವರು . 

ನಾಟಕ, ಕಲೆ ಮತ್ತು ಭಾಷೆಯ ಮೇಲಿನ ತಮ್ಮ  ಅಪ್ರತಿಮ ಪ್ರೀತಿ  ಅವಿರತ ದುಡಿಮೆಯ ನಡುವೆಯೂ  ಅವಿಚ್ಛಿನ್ನವಾಗಿ ನಡೆದು 1979 ರಲ್ಲಿ ಮುಂಬೈನಲ್ಲಿ ತಮ್ಮ ಕನಸಿನ  ''ಕಲಾಜಗತ್ತು'' ಎನ್ನುವಂತಹ  ಉನ್ನತ  ಸಾಂಸ್ಕೃತಿಕ  ಸಂಘದ ಸ್ಥಾಪನೆಗೆ ಕಾರಣವಾಯಿತು .  

ಜೀವನದಲ್ಲಿ ಮತ್ತಷ್ಟು ಸಾಧಿಸಬೇಕು  ಎನ್ನುವ  ''ಮಹತ್ವಾಕಾಂಕ್ಷೆ''  ತಮ್ಮನ್ನು ಸಾಗರದಾಚೆಯ  ಕೊಲ್ಲಿ ರಾಷ್ಟ್ರ ಅಬುದಾಭಿಗೆ  ಕರೆದೊಯ್ದು  ಸುಮಾರು ಇಪ್ಪತ್ತೈದು ವರ್ಷಗಳ ಸಾರ್ಥಕ  ಕಾಯಕ ಬದುಕನ್ನು ಕಲ್ಪಿಸಿಕೊಟ್ಟಿತು. ನಂತರದ ದಿನಗಳಲ್ಲಿ  ಸ್ವಂತ ಉಡಿಮೆಯನ್ನು ಸ್ಥಾಪಿಸಿ  ಅಲ್ಲಿಯೂ  ತಮ್ಮ ಯಶಸ್ಸಿನ  ನಾಗಾಲೋಟವನ್ನು  ತಾವು ಮುಂದುವರಿಸಿ ಸಾಂಸಾರಿಕ ಮತ್ತು ಸಾಮಾಜಿಕ ಜೀವನದಲ್ಲಿ  ತುಂಬು ಸಂತೃಪ್ತಿಯನ್ನು ಹೊಂದಿರುವಿರಿ. 

ಕಡಲಾಚೆಯೂ  ತನ್ನ ಮೂಲ ಸಂಘಟನಾ ಗುಣವನ್ನು  ಮುಂದುವರಿಸಿದ ತಾವು  ಕರ್ನಾಟಕ ಸಂಘ ಅಬುಧಾಬಿ ,  ಯು. ಎ. ಇ, ಬಂಟ ಸಂಘ, ಯು. ಎ. ಇ.  ತುಳುಕೂಟ  ನಮ್ಮ ತುಳುವೆರ್  ಸ್ಥಾಪನೆಯಲ್ಲಿ  ಪ್ರಮುಖ ಪಾತ್ರ ವಹಿಸಿದಿರಿ . 

ಇಂಡಿಯನ್ ಸೋಶಿಯಲ್ ಅಂಡ್ ಕಲ್ಚರ್ ಸೆಂಟರ್  ಅಧ್ಯಕ್ಷರಾಗಿ ಸತತ 55 ವರ್ಷಗಳ ಕಾಲ  ಅವಿರೋಧವಾಗಿ ಆಯ್ಕೆ ಆಗಿರುವುದು ತಮ್ಮ ಜನಪ್ರಿಯತೆ  ಮತ್ತು ಸಂಘಟನಾ ಸಾಮರ್ಥ್ಯಕ್ಕೆ  ಸಾಕ್ಷಿ . 

ಪ್ರಥಮ  ಬಾರಿಗೆ    2018ರಲ್ಲಿ  ವಿದೇಶದಲ್ಲಿ    ತುಳು ವಿಶ್ವ ಸಮ್ಮೇಳನ ಮತ್ತು ರಾಷ್ಟ್ರಕವಿ ಕುವೆಂಪು  ಹೆಸರಲ್ಲಿ ಕನ್ನಡ ವಿಶ್ವ ಸಮ್ಮೇಳನ ನಡೆಸಿ  ಕರ್ನಾಟಕದ ಹೆಸರನ್ನು   ವಿಶ್ವ ಭೂಪಟದಲ್ಲಿ  ರಾರಾಜಿಸಿದ ಕೀರ್ತಿ ತಮ್ಮದು . 

ಶೈಕ್ಷಣಿಕಾಗಿ , ಸಾಂಸ್ಕೃತಿಕವಾಗಿ   ವಿಶ್ವದಲ್ಲಿ  ತಾವು ನಡೆಸಿದ  ಸಮಾಜಮುಖಿ ಕಾರ್ಯಕ್ರಮಗಳಿಗಾಗಿ  ತಮಗೆ ಅರ್ಹವಾಗಿಯೆ  ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ತೌಳವ ಶ್ರೀ  ಪ್ರಶಸ್ತಿ , ಬಲಿಯೇಂದ್ರ ಪ್ರಶಸ್ತಿ   ಗೌರವ ಡಾಕ್ಟರೇಟ್     ಹೀಗೆ  ಅಗಣಿತ  ಪುರಸ್ಕಾರಗಳು ತಮ್ಮ  ಮಡಿಲೊಳಗೆ  ಅಡಗಿರುವುದು  ತುಳುವರಾದ ನಮಗೆಲ್ಲ  ವಿಶೇಷ ಹೆಮ್ಮೆ 

ತುಳುಕೂಟ ಬೆಂಗಳೂರು ತನ್ನ ಐವತ್ತರ ಸಂಭ್ರಮ ''ಬಂಗಾರ್ದ ಪರ್ಬ''  ಆಚರಣೆಯ ಸಂದರ್ಭದಲ್ಲಿ ತಮ್ಮ ಈ ಎಲ್ಲಾ  ಸಾಧನೆ ಸಹಕಾರಗಳಿಗೆ  ತಮ್ಮನ್ನು ಈ ಸ್ಮರಣೀಯ ವೇದಿಕೆಯಲ್ಲಿ ಸನ್ಮಾನಿಸಲು  ಸಂತೋಷ  ಪಡುತ್ತದೆ. ಸಾಮಾಜಿಕ ಕ್ಷೇತ್ರ , ಶೈಕ್ಷಣಿಕ ಮತ್ತು  ಧಾರ್ಮಿಕ  ಕ್ಷೇತ್ರದಲ್ಲಿ  ತಮ್ಮ  ಈ ಸೇವೆ   ಇನ್ನೂ  ಮುಂದುವರಿದು  ತುಳುನಾಡಿಗೆ   ಮತ್ತಷ್ಟು  ಮೆರಗು ತರುವಂತಾಗಲಿ  ಎಂದು ಆ ಭಗವಂತನಲ್ಲಿ  ಪ್ರಾರ್ಥಿಸುತ್ತಾ  ಈ  ''ಸುವರ್ಣ ಸನ್ಮಾನ'' ಪತ್ರವನ್ನು  ಸರ್ವ ಮಹನೀಯರ ಸಮ್ಮುಖದಲ್ಲಿ  ತಮಗೆ ಅಭಿಮಾನ ಪೂರ್ವಕವಾಗಿ ಸಮರ್ಪಿಸುತ್ತಿದ್ದೇವೆ. 

ದಿನಾಂಕ : 24-11-2023.

ಸ್ಥಳ :ಅರಮನೆ  ಮೈದಾನ ಬೆಂಗಳೂರು 

ಕೆ ವಿ ರಾಜೇಂದ್ರ ಕುಮಾರ್                   ಸುಂದರ್ ರಾಜ್  ರೈ                              ಅಜಿತ್ ಹೆಗ್ಡೆ ಕೆ 

ಗೌರವ ಅಧ್ಯಕ್ಷರು                                           ಅಧ್ಯಕ್ಷರು                            ಪ್ರಧಾನ ಕಾರ್ಯದರ್ಶಿ 

divakar poojary

                                                      ತುಳುಕೂಟ ಬೆಂಗಳೂರು (ರಿ)

          ಸುವರ್ಣ ಮಹೋತ್ಸವದ  ಸಂದರ್ಭ  ತುಳುನಾಡಿನ ಸಾಧಕರಿಗೆ  ಗೌರವ ಪೂರ್ವಕ ಸನ್ಮಾನ 

                                     ಶ್ರೀ. ದಿವಾಕರ ಅಣ್ಣಯ್ಯ ಪೂಜಾರಿ  ಕತಾರ್ 

                                                                          ಅವರಿಗೆ  

                                                             ಸುವರ್ಣ ಸನ್ಮಾನ  ಪತ್ರ.   ಡಾ. ಮಾರ್ಪಾಡಿ ವೀರಪ್ಪ ಮೊಯಿಲಿ  

ಉಡುಪಿ ಉದ್ಯಾವರ ಪಡುಬಿದ್ರಿ ಮೂಲದವರಾದ  ತಾವು  7 ಏಪ್ರಿಲ್ 1959 ಮುಂಬೈಯಲ್ಲಿ ಜನಿಸಿ   ಮುಂಬೈನಲ್ಲಿ ವಾಣಿಜ್ಯ ಪದವಿ ಪಡೆದು  ಉದ್ಯೋಗ ಅರಸಿ    ಕೊಲ್ಲಿ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದವರು.   ದುಬೈ ಮತ್ತು ಕತಾರ್  ದೇಶಗಳಲ್ಲಿ  ಸುಮಾರು 37 ವರ್ಷಗಳ ಸುಧೀರ್ಘ ಅವಧಿಯಲ್ಲಿ ಕೆಲಸದ ನಡುವೆ   ತನ್ನ ಮಾತೃ ಭಾಷೆ ತುಳುವಿನ ಉಳಿವಿಗಾಗಿ ವಿಶೇಷ ಒಲವು  ಹೊಂದಿ ಕಾರ್ಯ ಪ್ರವೃತ್ತರಾದವರು . 

ತುಳು ಭಾಷೆಯನ್ನು, ಸಂಸ್ಕೃತಿಯನ್ನು   ಕೊಲ್ಲಿ  ದೇಶಗಳಲ್ಲಿ  ಉಳಿಸುವ ಸಲುವಾಗಿ  ತುಳುಕೂಟ ಕತಾರ್ ಇದರ ಅಧ್ಯಕ್ಷ ಸ್ಥಾನವನ್ನು 2002ರಿಂದ 2004 ಮತ್ತು 2006 ರಿಂದ 2008 ರವರೆಗೆ  ಎರಡು ಸಾರಿ  ಆಯ್ಕೆಯಾಗಿ ಅಲಂಕರಿಸಿ ತುಳು ಕಲಾವಿದರನ್ನು ಪ್ರೋತ್ಸಾಹಿಸಿದವರು. 

ಪರಿಸರ ಪ್ರಿಯರಾಗಿರುವ ತಾವು  Qatar Green and Clean ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು  ತನಗೆ ಅನ್ನ  ನೀಡಿದ ದೇಶದ  ನಾಗರೀಕ ಜವಾಬ್ದಾರಿಯನ್ನು  ಪೂರೈಸಿ ಪ್ರಶಂಶೆಗೆ   ಒಳಗಾದವರು . ಸಾಂಸ್ಕೃತಿಕ  ಚಟುವಟಿಕೆಗಳ ನಡುವೆ  ರಕ್ತ ದಾನ  ಮತ್ತು  Anti  Doping commission ನಲ್ಲಿ Anti Doping Officer ಆಗಿ ಕಾರ್ಯ ನಿರ್ವಹಿಸಿ  ಸಾಮಾಜಿಕ ಕಳಕಳಿ ತೋರ್ಪಡಿಸಿದವರು.  

ಹಲವಾರು ಅಂತಾರಾಷ್ಟ್ರೀಯ ಮಟ್ಟದ ಉನ್ನತ ಪ್ರಶಸ್ತಿಗಳನ್ನು  ಮುಡಿಗೇರಿಸಿಕೊಂಡ  ಅತ್ಯಂತ  ಸರಳ ಮತ್ತು  ಸಜ್ಜನ ನಡವಳಿಕೆಯ ತಮ್ಮನ್ನು   ತುಳುಕೂಟ ಬೆಂಗಳೂರಿನ  ಸುವರ್ಣ ಸಂಭ್ರಮದ   ''ಬಂಗಾರ್ದ ಪರ್ಬ''  ಆಚರಣೆಯ ಸಂದರ್ಭದಲ್ಲಿ   ತಮ್ಮನ್ನು ಈ ಸ್ಮರಣೀಯ ವೇದಿಕೆಯಲ್ಲಿ ಸನ್ಮಾನಿಸಲು  ಸಂತೋಷ  ಪಡುತ್ತದೆ. ಸಾಮಾಜಿಕ  ,  ಸಾಂಸ್ಕೃತಿಕ  ಕ್ಷೇತ್ರದಲ್ಲಿ  ತಮ್ಮ  ಈ ಸೇವೆ   ಇನ್ನೂ  ಮುಂದುವರಿದು  ತುಳುನಾಡಿಗೆ   ಮತ್ತಷ್ಟು  ಮೆರಗು ತರುವಂತಾಗಲಿ  ಎಂದು ಆ ಭಗವಂತನಲ್ಲಿ  ಪ್ರಾರ್ಥಿಸುತ್ತಾ  ಈ  ''ಸುವರ್ಣ ಸನ್ಮಾನ'' ಪತ್ರವನ್ನು  ಸರ್ವ ಮಹನೀಯರ ಸಮ್ಮುಖದಲ್ಲಿ  ತಮಗೆ ಅಭಿಮಾನ ಪೂರ್ವಕವಾಗಿ ಸಮರ್ಪಿಸುತ್ತಿದ್ದೇವೆ. 

ದಿನಾಂಕ : 24-11-2023.

ಸ್ಥಳ :ಅರಮನೆ  ಮೈದಾನ ಬೆಂಗಳೂರು 

ಕೆ ವಿ ರಾಜೇಂದ್ರ ಕುಮಾರ್                   ಸುಂದರ್ ರಾಜ್  ರೈ                              ಅಜಿತ್ ಹೆಗ್ಡೆ ಕೆ 

ಗೌರವ ಅಧ್ಯಕ್ಷರು                                           ಅಧ್ಯಕ್ಷರು                            ಪ್ರಧಾನ ಕಾರ್ಯದರ್ಶಿ 

dr.sadananda shetty

                                                        ತುಳುಕೂಟ ಬೆಂಗಳೂರು (ರಿ)

          ಸುವರ್ಣ ಮಹೋತ್ಸವದ  ಸಂದರ್ಭ  ತುಳುನಾಡಿನ ಸಾಧಕರಿಗೆ  ಗೌರವ ಪೂರ್ವಕ ಸನ್ಮಾನ 

                                                       ಶೈಕ್ಷಣಿಕಾ  , ಸಂಘಟನಾ,ಕ್ರೀಡಾ  ಸ್ಪೂರ್ತಿ 

                                                           ಡಾ. ಅತ್ತೂರು   ಸದಾನಂದ ಶೆಟ್ಟಿ 

                                                                          ಅವರಿಗೆ  

                                                             ಸುವರ್ಣ ಸನ್ಮಾನ  ಪತ್ರ.  


 ತುಳುನಾಡಿನ  ಸಂಘಟನಾ ಸ್ಪೂರ್ತಿ , ಕ್ರೀಡಾ ಶಕ್ತಿ , ಶೈಕ್ಷಣಿಕಾ ವಿಶ್ವ ರೂಪಿಯೆಂದೇ  ನಾಮಾಂಕಿತರಾದವರು  ಉಡುಪಿಯ ಅತ್ತೂರು  ಸದಾನಂದ ಶೆಟ್ಟಿ . 

ಉಡುಪಿಯ  ಅಜ್ಜರಕಾಡಿನಲ್ಲಿ   20 ಸೆಪ್ಟೆಂಬರ್ 1941 ರಂದು ಜನಿಸಿದ  ಸದಾನಂದ ಶೆಟ್ಟಿಯವರದ್ದು ಮೊದಲಿಂದಲೂ  ಸಾಹಸಿ  ಪ್ರವೃತ್ತಿಯ ಜೀವನ .  ಜೀವ ವಿಮಾ  ಉದ್ಯೋಗಿಯಾಗಿ  ವೃತ್ತಿ ಆರಂಭಿಸಿ  ಉದ್ಯಮಿಯಾಗಿ ಬದಲಾಗಿ   ಹೋಟೆಲು ಮತ್ತು  ಕ್ಯಾಟರಿಂಗ್  ಕ್ಷೇತ್ರದಲ್ಲಿ  ಅದ್ವೀತಿಯ   ಅಧಿಪತ್ಯ ಸ್ಥಾಪಿಸಿದವರು ತಾವು . 

ಉದ್ಯಮ ಕ್ಷೇತ್ರದ  ಯಶಸ್ಸಿನ ನಂತರ  ತನ್ನ ಕಾರ್ಯಕ್ಷೇತ್ರವನ್ನು  ವಿದ್ಯಾಕ್ಷೇತ್ರದತ್ತ  ವಿಸ್ತರಿಸಿ  ಶ್ರೀದೇವಿ  ಎಜುಕೇಶನ್ ಟ್ರಸ್ಟ್ ಮೂಲಕ  ಹೋಟೆಲ್ ಮ್ಯಾನೇಜುಮೆಂಟ್ , ನರ್ಸಿಂಗ್ , ಇಂಟೀರಿಯರ್ ಡಿಸೈನ್ , ಫ್ಯಾಷನ್ ಡಿಸೈನ್  ಮುಂತಾದ ಕ್ಷೇತ್ರದಲ್ಲಿ  ಸಾವಿರಾರು ಪ್ರತಿಭೆಗಳನ್ನು ಹುಟ್ಟು ಹಾಕಿ ಸಮಾಜಕ್ಕೆ  ಕೊಡುಗೆಯಾಗಿ ಇತ್ತವರು ನೀವು . ಬಂಟರ  ಯಾನೆ ನಾಡವರ ಸಂಘ ದ   ಅಧ್ಯಕ್ಷರಾಗಿ ಜಾಗತಿಕ ಬಂಟ ಸಮ್ಮೇಳನ ನಡೆಸಿ  ಸಂಘಟನಾ ಕೌಶಲ್ಯ ಮೆರೆದವರು .

ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನದ  ಅಧ್ಯಕ್ಷರಾಗಿ  ಹಲವಾರು ಸಮಾಜ ಮುಖಿ ಕಾರ್ಯಗಳನ್ನು  ಕೈಗೊಂಡು  ಜನಾನುರಾಗಿಯಾದವರು .  

ಕ್ರೀಡೆಯನ್ನು  ಅತಿಯಾಗಿ ಪ್ರೀತಿಸುತ್ತಿದ್ದ  ತಾವು ಸ್ವತಃ ಕ್ರೀಡಾಳುವಾಗಿ ಸತತ  ಐವತ್ತು ವರ್ಷಗಳ ಕಾಲ  ಟೆನಿಸ್ ಆಟವನ್ನು  ಆಡಿಕೊಂಡು ಇತರರಿಗೆ ಸ್ಪೂರ್ತಿಯಾದವರು . ಕ್ರೀಡೆಯನ್ನು ನಿತ್ಯ  ಜೀವನದ ಒಂದು ಭಾಗವಾಗಿ ಬೆಳೆಸಿಕೊಳ್ಳುವ ಸಲುವಾಗಿ ಸ್ಪೋರ್ಟ್ಸ್ ಪ್ರಮೋಟರ್ಸ್  ಕ್ಲಬ್ ಮಂಗಳೂರು , ಕಬಡ್ಡಿ ಅಸೋಸಿಯೇಷನ್, ಬ್ಯಾಡ್ಮಿಂಟನ್ , ಬಾಸ್ಕೆಟ್ ಬಾಲ್ , ಬ್ಯಾಡ್ಮಿಂಟನ್ ಅಸೋಸಿಯೇಷನ್ ಮತ್ತು ಮಂಗಳ ಅಥ್ಲೆಟಿಕ್ಸ್   ಮಂಗಳೂರು  ಸಂಸ್ಥೆಗಳ ಅಧ್ಯಕ್ಷರಾಗಿ  ಅವಿರತ  ದುಡಿದು ಕ್ರೀಡೆಯನ್ನು ಪ್ರಚುರ ಪಡಿಸಿದವರು  . 

1998ರಲ್ಲಿ  ಬ್ಯಾಂಕಾಕ್ ನಲ್ಲಿ ನಡೆದ ಏಷಿಯನ್  ಗೇಮ್ಸ್ ನಲ್ಲಿ  Technical  Observer  ಆಗಿ ಕರ್ನಾಟಕ ಸರಕಾರದಿಂದ  ಆಯ್ಕೆ ಮತ್ತು 2000 ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡು  ಕ್ರೀಡಾ ಪ್ರೀತಿಯನ್ನು  ಮೆರೆದವರು . 

ತಮ್ಮ  ಈ  ಎಲ್ಲಾ   ಸಾಧನೆಗಳಿಗೆ   ಮುಕುಟಪ್ರಾಯವಾಗಿ ಶಿವಮೊಗ್ಗ ಕುವೆಂಪು  ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ , 1977ರಲ್ಲಿ ಇಂಡಿಯಾ ಪ್ರಿಯದರ್ಶಿನಿ  ಪುರಸ್ಕಾರ , 1990ರಲ್ಲಿ ಪಂಡಿತ್ ಜವಾಹರ್ಲಾಲ್ ನೆಹರು ಎಕ್ಸಾಲೆನ್ಸಿ ಅವಾರ್ಡ್  ಹೀಗೆ ಹಲವಾರು  ಪುರಸ್ಕಾರಗಳು   ದೊರೆತಿರುವುದು  ನಮಗೆಲ್ಲ  ಹೆಮ್ಮೆಯ ವಿಷಯ 

 ತುಳುಕೂಟ ಬೆಂಗಳೂರು  ತನ್ನ   ಸುವರ್ಣ ಸಂಭ್ರಮದ   ''ಬಂಗಾರ್ದ ಪರ್ಬ''  ಆಚರಣೆಯ ಸಂದರ್ಭದಲ್ಲಿ  ತಮ್ಮನ್ನು ಈ ಸ್ಮರಣೀಯ ವೇದಿಕೆಯಲ್ಲಿ ಸನ್ಮಾನಿಸಲು  ಸಂತೋಷ  ಪಡುತ್ತದೆ. ಶೈಕ್ಷಣಿಕ ,  ಸಾಂಸ್ಕೃತಿಕ  ಕ್ಷೇತ್ರದಲ್ಲಿ  ತಮ್ಮ  ಈ ಸೇವೆ   ಇನ್ನೂ  ಮುಂದುವರಿದು  ತುಳುನಾಡಿಗೆ   ಮತ್ತಷ್ಟು  ಮೆರಗು ತರುವಂತಾಗಲಿ  ಎಂದು ಆ ಭಗವಂತನಲ್ಲಿ  ಪ್ರಾರ್ಥಿಸುತ್ತಾ  ಈ  ''ಸುವರ್ಣ ಸನ್ಮಾನ'' ಪತ್ರವನ್ನು  ಸರ್ವ ಮಹನೀಯರ ಸಮ್ಮುಖದಲ್ಲಿ  ತಮಗೆ ಅಭಿಮಾನ ಪೂರ್ವಕವಾಗಿ ಸಮರ್ಪಿಸುತ್ತಿದ್ದೇವೆ. 

ದಿನಾಂಕ : 24-11-2023.

ಸ್ಥಳ :ಅರಮನೆ  ಮೈದಾನ ಬೆಂಗಳೂರು 

ಕೆ ವಿ ರಾಜೇಂದ್ರ ಕುಮಾರ್                   ಸುಂದರ್ ರಾಜ್  ರೈ                              ಅಜಿತ್ ಹೆಗ್ಡೆ ಕೆ 

ಗೌರವ ಅಧ್ಯಕ್ಷರು                                           ಅಧ್ಯಕ್ಷರು                            ಪ್ರಧಾನ ಕಾರ್ಯದರ್ಶಿ 

abdulla maadumoole.

                                             ತುಳುಕೂಟ ಬೆಂಗಳೂರು (ರಿ)

ಸುವರ್ಣ ಮಹೋತ್ಸವದ  ಸಂದರ್ಭ  ತುಳುನಾಡಿನ ಸಾಧಕರಿಗೆ  ಗೌರವ ಪೂರ್ವಕ ಸನ್ಮಾನ 

                                           ಅಬುಧಾಬಿಯ ಹೆಮ್ಮೆಯ ತುಳುವ  

                                                 ಅಬ್ದುಲ್ಲಾ ಮಾದುಮೂಲೆ 

                                                            ಅವರಿಗೆ  

                                                 ಸುವರ್ಣ ಸನ್ಮಾನ  ಪತ್ರ. 

ಬಂಟವಾಳ ತಾಲೂಕಿನ ಗಡಿನಾಡು ಪ್ರದೇಶದಲ್ಲಿ  ಹುಟ್ಟಿ  ತನ್ನ ಕರ್ಮ ಕ್ಷೇತ್ರವನ್ನು  ಕೊಲ್ಲಿಯ ದೇಶ  ಅಬುಧಾಬಿಗೆ  ವಿಸ್ತರಿಸಿ  ಲೆಕ್ಕ ಪರಿಶೋಧಕರಾಗಿ  ವೃತ್ತಿ ಜೀವನ ಆರಂಭಿಸಿದ  ತಾವು  ಅಮೆರಿಕಾ ಇಂಗ್ಲೆಂಡ್ ನಂತಹ ದೇಶಗಳಲ್ಲಿ  ವಿದ್ಯಾರ್ಜನೆ ಗೈದು ಕೊಲ್ಲಿಯಲ್ಲಿ  ವಿದ್ಯಾಕ್ಷೇತ್ರ , ವಾಣಿಜ್ಯ ಕ್ಷೇತ್ರಗಳಲ್ಲಿ ಸೇವೆಗೈದು  ಹೆಸರಾಗಿರುವಿರಿ . 

 ಅಬುಧಾಬಿ ಇನ್ವೆಸ್ಟ್ಮೆಂಟ್  ಅಥಾರಿಟಿ  , ಇತಿಹಾದ್  ಏರ್ವೇಸ್  ಇಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ದುಡಿದು  ಸಮಾಜದ  ಸಂತೋಷಗಳಿಗೆ,ಸಂಕಷ್ಟಗಳಿಗೆ  ಸದಾ ಸ್ಪಂದಿಸುತ್ತಾ  ಬಂದು ತಮ್ಮನ್ನು ಸಕ್ರಿಯವಾಗಿ ಸಮಾಜ  ಕಾರ್ಯಗಳಲ್ಲಿ ತೊಡಗಿಕೊಂಡವರು . ಈ ಎಲ್ಲಾ ಮಹತ್ಕಾರಣಗಳಿಂದ  ತಮಗೆ ಅರ್ಹವಾಗಿಯೇ  ಕರ್ನಾಟಕ ಸರಕಾರದ  ಜಿಲ್ಲಾ ರಾಜ್ಯೋತ್ಸವ , ಗಡಿನಾಡ ರಾಜ್ಯೋತ್ಸವ , ದುಬೈ ಬ್ಯಾರೀಸ್ ಫೋರಮ್ ನ  ಬ್ಯಾರೀಸ್ ಪರ್ಸನಾಲಿಟಿ  ಆಫ್ ದಿ ಇಯರ್  ಪುರಸ್ಕಾರಗಳು  ಬೆನ್ನತ್ತಿ  ಬಂದಿವೆ  ಎಂದು  ಹೇಳಲು ಸಂತೋಷವಾಗುತ್ತದೆ 

ತುಳು ಭಾಷೆಗೆ , ಸಂಸ್ಥೆಗಳಿಗೆ  ಸದಾ ಆಶ್ರಯದಾತರಾಗಿ ಮುಂಚೂಣಿಯಲ್ಲಿ ನಿಂತಿರುವ ತಮ್ಮನ್ನು ತುಳುಕೂಟ ತನ್ನ ಐವತ್ತರ ಸಂಭ್ರಮ ಬಂಗಾರ್ದ ಪರ್ಬ  ಆಚರಣೆಯ ಸಂದರ್ಭದಲ್ಲಿ ಅದರಪೂರ್ವಕವಾಗಿ ಸ್ಮರಿಸಿಕೊಳ್ಳುತ್ತದೆ . 

 ತಮ್ಮ ಸಾಧನೆ  ಹೀಗೆ  ಮುಂದುವರಿಯಲಿ , ತುಳುನಾಡಿಗೆ , ಕರ್ನಾಟಕಕ್ಕೆ ಹಾಗೂ ದೇಶಕ್ಕೆ ಆಸ್ತಿಯಾಗಿರುವ  ತಾವು   ನೂರ್ಕಾಲ ಅರೋಗ್ಯ ಪೂರ್ಣರಾಗಿ ಬಾಳಿ  ನಮಗೆಲ್ಲ  ಆದರ್ಶರಾಗಿರಿ ಎಂದು ಆ ಭಗವಂತನಲ್ಲಿ  ಪ್ರಾರ್ಥಿಸುತ್ತಾ  ಈ  ''ಸುವರ್ಣ ಸನ್ಮಾನ'' ಪತ್ರವನ್ನು  ಸರ್ವ ಮಹನೀಯರ ಸಮ್ಮುಖದಲ್ಲಿ  ತಮಗೆ ಸಮರ್ಪಿಸುತ್ತಿದ್ದೇವೆ. 

ದಿನಾಂಕ : 24-11-2023.

ಸ್ಥಳ :ಅರಮನೆ  ಮೈದಾನ ಬೆಂಗಳೂರು 

ಕೆ ವಿ ರಾಜೇಂದ್ರ ಕುಮಾರ್                   ಸುಂದರ್ ರಾಜ್  ರೈ                              ಅಜಿತ್ ಹೆಗ್ಡೆ ಕೆ 

ಗೌರವ ಅಧ್ಯಕ್ಷರು                                           ಅಧ್ಯಕ್ಷರು                            ಪ್ರಧಾನ ಕಾರ್ಯದರ್ಶಿ