ತುಳುಕೂಟ ಬೆಂಗಳೂರು (ರಿ)
ಸುವರ್ಣ ಮಹೋತ್ಸವದ ಸಂದರ್ಭ ತುಳುನಾಡಿನ ಸಾಧಕರಿಗೆ ಗೌರವ ಪೂರ್ವಕ ಸನ್ಮಾನ
ಶೈಕ್ಷಣಿಕಾ , ಸಂಘಟನಾ,ಕ್ರೀಡಾ ಸ್ಪೂರ್ತಿ
ಡಾ. ಅತ್ತೂರು ಸದಾನಂದ ಶೆಟ್ಟಿ
ಅವರಿಗೆ
ಸುವರ್ಣ ಸನ್ಮಾನ ಪತ್ರ.
ತುಳುನಾಡಿನ ಸಂಘಟನಾ ಸ್ಪೂರ್ತಿ , ಕ್ರೀಡಾ ಶಕ್ತಿ , ಶೈಕ್ಷಣಿಕಾ ವಿಶ್ವ ರೂಪಿಯೆಂದೇ ನಾಮಾಂಕಿತರಾದವರು ಉಡುಪಿಯ ಅತ್ತೂರು ಸದಾನಂದ ಶೆಟ್ಟಿ .
ಉಡುಪಿಯ ಅಜ್ಜರಕಾಡಿನಲ್ಲಿ 20 ಸೆಪ್ಟೆಂಬರ್ 1941 ರಂದು ಜನಿಸಿದ ಸದಾನಂದ ಶೆಟ್ಟಿಯವರದ್ದು ಮೊದಲಿಂದಲೂ ಸಾಹಸಿ ಪ್ರವೃತ್ತಿಯ ಜೀವನ . ಜೀವ ವಿಮಾ ಉದ್ಯೋಗಿಯಾಗಿ ವೃತ್ತಿ ಆರಂಭಿಸಿ ಉದ್ಯಮಿಯಾಗಿ ಬದಲಾಗಿ ಹೋಟೆಲು ಮತ್ತು ಕ್ಯಾಟರಿಂಗ್ ಕ್ಷೇತ್ರದಲ್ಲಿ ಅದ್ವೀತಿಯ ಅಧಿಪತ್ಯ ಸ್ಥಾಪಿಸಿದವರು ತಾವು .
ಉದ್ಯಮ ಕ್ಷೇತ್ರದ ಯಶಸ್ಸಿನ ನಂತರ ತನ್ನ ಕಾರ್ಯಕ್ಷೇತ್ರವನ್ನು ವಿದ್ಯಾಕ್ಷೇತ್ರದತ್ತ ವಿಸ್ತರಿಸಿ ಶ್ರೀದೇವಿ ಎಜುಕೇಶನ್ ಟ್ರಸ್ಟ್ ಮೂಲಕ ಹೋಟೆಲ್ ಮ್ಯಾನೇಜುಮೆಂಟ್ , ನರ್ಸಿಂಗ್ , ಇಂಟೀರಿಯರ್ ಡಿಸೈನ್ , ಫ್ಯಾಷನ್ ಡಿಸೈನ್ ಮುಂತಾದ ಕ್ಷೇತ್ರದಲ್ಲಿ ಸಾವಿರಾರು ಪ್ರತಿಭೆಗಳನ್ನು ಹುಟ್ಟು ಹಾಕಿ ಸಮಾಜಕ್ಕೆ ಕೊಡುಗೆಯಾಗಿ ಇತ್ತವರು ನೀವು . ಬಂಟರ ಯಾನೆ ನಾಡವರ ಸಂಘ ದ ಅಧ್ಯಕ್ಷರಾಗಿ ಜಾಗತಿಕ ಬಂಟ ಸಮ್ಮೇಳನ ನಡೆಸಿ ಸಂಘಟನಾ ಕೌಶಲ್ಯ ಮೆರೆದವರು .
ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಹಲವಾರು ಸಮಾಜ ಮುಖಿ ಕಾರ್ಯಗಳನ್ನು ಕೈಗೊಂಡು ಜನಾನುರಾಗಿಯಾದವರು .
ಕ್ರೀಡೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ತಾವು ಸ್ವತಃ ಕ್ರೀಡಾಳುವಾಗಿ ಸತತ ಐವತ್ತು ವರ್ಷಗಳ ಕಾಲ ಟೆನಿಸ್ ಆಟವನ್ನು ಆಡಿಕೊಂಡು ಇತರರಿಗೆ ಸ್ಪೂರ್ತಿಯಾದವರು . ಕ್ರೀಡೆಯನ್ನು ನಿತ್ಯ ಜೀವನದ ಒಂದು ಭಾಗವಾಗಿ ಬೆಳೆಸಿಕೊಳ್ಳುವ ಸಲುವಾಗಿ ಸ್ಪೋರ್ಟ್ಸ್ ಪ್ರಮೋಟರ್ಸ್ ಕ್ಲಬ್ ಮಂಗಳೂರು , ಕಬಡ್ಡಿ ಅಸೋಸಿಯೇಷನ್, ಬ್ಯಾಡ್ಮಿಂಟನ್ , ಬಾಸ್ಕೆಟ್ ಬಾಲ್ , ಬ್ಯಾಡ್ಮಿಂಟನ್ ಅಸೋಸಿಯೇಷನ್ ಮತ್ತು ಮಂಗಳ ಅಥ್ಲೆಟಿಕ್ಸ್ ಮಂಗಳೂರು ಸಂಸ್ಥೆಗಳ ಅಧ್ಯಕ್ಷರಾಗಿ ಅವಿರತ ದುಡಿದು ಕ್ರೀಡೆಯನ್ನು ಪ್ರಚುರ ಪಡಿಸಿದವರು .
1998ರಲ್ಲಿ ಬ್ಯಾಂಕಾಕ್ ನಲ್ಲಿ ನಡೆದ ಏಷಿಯನ್ ಗೇಮ್ಸ್ ನಲ್ಲಿ Technical Observer ಆಗಿ ಕರ್ನಾಟಕ ಸರಕಾರದಿಂದ ಆಯ್ಕೆ ಮತ್ತು 2000 ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡು ಕ್ರೀಡಾ ಪ್ರೀತಿಯನ್ನು ಮೆರೆದವರು .
ತಮ್ಮ ಈ ಎಲ್ಲಾ ಸಾಧನೆಗಳಿಗೆ ಮುಕುಟಪ್ರಾಯವಾಗಿ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ , 1977ರಲ್ಲಿ ಇಂಡಿಯಾ ಪ್ರಿಯದರ್ಶಿನಿ ಪುರಸ್ಕಾರ , 1990ರಲ್ಲಿ ಪಂಡಿತ್ ಜವಾಹರ್ಲಾಲ್ ನೆಹರು ಎಕ್ಸಾಲೆನ್ಸಿ ಅವಾರ್ಡ್ ಹೀಗೆ ಹಲವಾರು ಪುರಸ್ಕಾರಗಳು ದೊರೆತಿರುವುದು ನಮಗೆಲ್ಲ ಹೆಮ್ಮೆಯ ವಿಷಯ
ತುಳುಕೂಟ ಬೆಂಗಳೂರು ತನ್ನ ಸುವರ್ಣ ಸಂಭ್ರಮದ ''ಬಂಗಾರ್ದ ಪರ್ಬ'' ಆಚರಣೆಯ ಸಂದರ್ಭದಲ್ಲಿ ತಮ್ಮನ್ನು ಈ ಸ್ಮರಣೀಯ ವೇದಿಕೆಯಲ್ಲಿ ಸನ್ಮಾನಿಸಲು ಸಂತೋಷ ಪಡುತ್ತದೆ. ಶೈಕ್ಷಣಿಕ , ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮ ಈ ಸೇವೆ ಇನ್ನೂ ಮುಂದುವರಿದು ತುಳುನಾಡಿಗೆ ಮತ್ತಷ್ಟು ಮೆರಗು ತರುವಂತಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತಾ ಈ ''ಸುವರ್ಣ ಸನ್ಮಾನ'' ಪತ್ರವನ್ನು ಸರ್ವ ಮಹನೀಯರ ಸಮ್ಮುಖದಲ್ಲಿ ತಮಗೆ ಅಭಿಮಾನ ಪೂರ್ವಕವಾಗಿ ಸಮರ್ಪಿಸುತ್ತಿದ್ದೇವೆ.
ದಿನಾಂಕ : 24-11-2023.
ಸ್ಥಳ :ಅರಮನೆ ಮೈದಾನ ಬೆಂಗಳೂರು
ಕೆ ವಿ ರಾಜೇಂದ್ರ ಕುಮಾರ್ ಸುಂದರ್ ರಾಜ್ ರೈ ಅಜಿತ್ ಹೆಗ್ಡೆ ಕೆ
ಗೌರವ ಅಧ್ಯಕ್ಷರು ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ