ಗುರುವಾರ, ಡಿಸೆಂಬರ್ 21, 2017

ಸಾಲಗಾರ...!

ಸಾಲಗಾರ...!

ಸಾವಿನ
ಸಮಯದಲ್ಲೂ
ಅವರು
ಸಾಲ ಮಾಡಿದರು...

ಕೊನೆಯುಸಿರು
ಎಳೆದವರು
ವಾಪಸು ಕೊಡಲಿಲ್ಲ!!

✍ಶಾಂತಾರಾಮ್ ಶೆಟ್ಟಿ
➖➖➖➖➖👻

ಅನಂತ!

ಅನಂತ!
➖➖➖➖🌚🌞
ರಾತ್ರಿ
ಇವತ್ತಿನ ಕೊನೆಯೇನಲ್ಲ
ನಾಳೆಯ ಮೊದಲು!

ಹಗಲು
ಇವತ್ತಿನ ಮೊದಲೇನಲ್ಲ
ನಿನ್ನೆಯ ಕೊನೆ!

ಹೀಗಿದ್ದೂ
ಹಗಲು ರಾತ್ರಿಗಳಿಗೆ
ಕೊನೆ
ಮೊದಲೆಂಬುದೇನೇ
ಇಲ್ಲ!!

✍ಶಾಂತಾರಾಮ್ ಶೆಟ್ಟಿ
➖➖➖➖🌚🌞

ಜೀವನ!

ಜೀವನ!
➖➖➖➖❓

ಮೊದಲ ಪುಟದಲಿ
ಹುಟ್ಟಿದೆ
ಕೊನೆಯ ಪುಟದಲಿ
ಸಾವಿದೆ....!

ನಡುವೆ
ಬರೆಯದ
ಖಾಲಿ ಪುಟ,
ದಿನಾ
ಹುಡುಕಾಟ.....

ಏನಿದೆ..
ಮುಂದೆ....ಏನಿದೆ❓

✍ ಶಾಂತಾರಾಮ್ ಶೆಟ್ಟಿ
  ➖➖➖➖➖😮

ಸ್ಥಿತ!!

ಸ್ಥಿತ!!
▪▪▪

ಹೆಂಡತಿ
ಕಳಕೊಂಡವನು...,
ಅವನದ್ದು
ಒಂದು
ರಾಮಾಯಣ...!

ಹೆಂಡತಿ ಮಕ್ಕಳ
ಮೋಹಕ್ಕೆ ಬಿದ್ದವನು
ಅವನದ್ದೋ....
ಇನ್ನೊಂದು
ಮಹಾಭಾರತ....!

ನಡುವೆ
ಜಂಜಾಟಗಳ
ಸಾಗರವ
ಹಾರಿ
ಮೀರಿ
ನಿಂತ
ಹನುಮಂತ!!
🐒🐒
✍🏽ಶಾಂತಾರಾಮ್ ಶೆಟ್ಟಿ

ವ್ಯಾಪಾರ!

ವ್ಯಾಪಾರ!

ಬದುಕಿದ್ದವರನ್ನು
ಬಿಟ್ಬಿಡಿ
ಸ್ವಾಮಿ...!

ಸತ್ರವರಿಗೂ
ನಮ್ಮಲ್ಲಿ
ಸೇವಾ ಸೌಲಭ್ಯವಿದೆ
ಎಂದನಂತೆ
ಶವಪೆಟ್ಟಿಗೆ ವ್ಯಾಪಾರಿ!




ಕಹಿ ಸತ್ಯ!

ಕಹಿ ಸತ್ಯ!
➖➖➖😗
ತಮ್ಮೊಳಗಿನ
ಕುರೂಪವನ್ನು
ಎತ್ತಿ
ತೋರಿದ್ದಕ್ಕೆ
ಕನ್ನಡಿಯ
ಮುಂದೆ
ಮುಖ
ಕಿವುಚಿದರು!!

✍ಶಾಂತಾರಾಮ್ ಶೆಟ್ಟಿ

ದಿಕ್ಕಾಪಾಲು!

ದಿಕ್ಕಾಪಾಲು!
➖➖➖
ಅಷ್ಟ ದಿಕ್ಕುಗಳಿಂದ
ಹರಿದು ಬಂದ
ಭಕ್ತಕೋಟಿಯ
ಬೇಡಿಕೆಗಳಿಗೆ
ದೇವರೇ
ದಿಕ್ಕೆಟ್ಟು ಓಡಿದ 

ಜೀವಂತ !-ಇನ್ನೂ...!

ಜೀವಂತ !
➖➖➖➖➖
ಒಂದೇ
ಗುಂಡು ಸತ್ತಿದ್ದು
ಐದು ಗುಂಡುಗಳು
ಇನ್ನೂ
ಜೀವಂತ....!

ಸತ್ತ
ಗುಂಡೇ
ಸಾಯಿಸಿದ್ದು!!

✍ಶಾಂತಾರಾಮ್ ಶೆಟ್ಟಿ
➖➖➖➖➖➖


ಇನ್ನೂ...!
➖➖➖➖
ಆಸೆ
ಹೊತ್ತು ಸತ್ತವ
ಗೋರಿಯೊಳಗೆ
ಮಡದಿ ಮಕ್ಕಳಿಗೂ
ಜಾಗ ಕಾದಿರಿಸಿದ !

ಸತ್ತವನ
ಆಸೆ
ಇನ್ನೂ ಸತ್ತಿಲ್ಲ!!

✍ ಶಾಂತಾರಾಮ್ ಶೆಟ್ಟಿ
➖➖➖➖👻👻

ಪ್ರವಚನ! ➖➖➖🐣

ಪ್ರವಚನ!
➖➖➖🐣

ಮೊಟ್ಟೆಯೊಳಗೇ
ಆಧ್ಯಾತ್ಮದ
ಪ್ರವಚನ...!

ತರೆತರೆದು
ಒಳಗಿಂದ
ತೆರೆದರೆ
ಜೀವನ

ಮೆರೆಮೆರೆದು
ಹೊರಗಿಂದ
ಮುರಿದರೆ

ಮರಣ!!

ಉರುವಲು!

ಉರುವಲು!
➖➖➖🔥🔥

ಎಂಥಾ
ಕಾವ್ಯದ
ಸುವಾಸನೆಯಿದೆ
ಹೆಂಡತಿ ಕೊಟ್ಟ
ಬೆಚ್ಚನೆ
ಕಾಫಿಯ ಹಬೆ
ಒಳಗೆ ?!

ಬಹುಷ:
ಇವತ್ತೂ
ಉರುವಲಾಗಿ
ಇಟ್ಟಿರಬೇಕು
ಒಂದು
ಕವನ ಸಂಕಲನ
ಒಲೆಗೆ !!

✍ಶಾಂತಾರಾಮ್ ಶೆಟ್ಟಿ

ಕಣ್ಕಟ್ಟು!!

ಕಣ್ಕಟ್ಟು!!
➖➖➖😎
ಇಂದಿಗೂ..
ಸುಂದರಾಂಗನನ್ನು
ಮನ್ಮಥನಿಗೂ...
ಸುಂದರಿಯನ್ನು
ರತಿಗೂ 
ಹೋಲಿಸುವರು!

ಎಷ್ಟು
ಕಣ್ಕಟ್ಟು ನೋಡಿ
ಉಪಮೆಯಲ್ಲೂ?

ನೋಡದವರು
ನೋಡದವರಿಗೆ
ನೋಡದ್ದನ್ನು
ನೋಡಿದಂತೆಯೇ
ಕಣ್ಣೆದುರೇ
ಕಟ್ಟಿ
ಕೊಡುವರು
ಬಣ್ಣದ
ಕಾಮನ ಬಿಲ್ಲು!!

✍ಶಾಂತಾರಾಮ್ ಶೆಟ್ಟಿ

ಚುಟುಕಾಂಬರಿ!- ತಾಕತ್ತು!

ಚುಟುಕಾಂಬರಿ!
➖➖➖➖➖🗣
ಒಂದೋ ಎರಡೋ
ಮುತ್ತಿನಂತ
ಮಾತು ಹೆಂಡತಿಯದು....,

ಆಹಾ
ಎಂತಾ ಸೊಗಸು
ಚುಟುಕು
ಕವಿಯ ಬದುಕು !

ಕಾದಂಬರಿಕಾರನದ್ದೊ
ಮುಗಿಯದ ಗೋಳು
ಬೆಳಿಗ್ಗಿಂದ
ಸುರುವಾದರೆ ರಾತ್ರಿವರೆಗೆ
ಹೆಂಡತಿ ದಿನಾ ಬಿಡದೆ
ಬೈಯೋಳು!!




: ತಾಕತ್ತು!
➖➖➖
ಭಾಷೆ
ಬರದವರ
ನಡುವೆಯೂ
ದುಡ್ಡು
ಸಲೀಸಾಗಿ
ಮಾತಾಡಿತು!!

✍ಶಾಂತಾರಾಮ್ ಶೆಟ್ಟಿ
➖➖➖➖➖🤝🏾

ಲಾಲಸೆ!

ಲಾಲಸೆ!
➖➖➖
ಯಮನೂ
ಪಳಗಿದ
ರಾಜಕಾರಣಿ...!

ನರಕ-
ವಾದರೇನಂತೆ

ಅಧಿಕಾರ
ಬೇಕಂತೆ!!.

✍ಶಾಂತಾರಾಮ್  ಶೆಟ್ಟಿ
➖➖➖➖➖

ಜೀವಂತ!

ಜೀವಂತ!
➖➖➖➖🌿
ಬದುಕಿದವರೆಲ್ಲಾ
ಬದುಕಿದ್ದಾರಂತೇನೂ ಇಲ್ಲ...

ಜನರ ನಡುವೆ
ಗಡಿಬಿಡಿಯಲ್ಲಿ
ಉಸಿರಾಡುತ್ತಿದ್ದಾರೆ!

ಸತ್ತವರೆಲ್ಲಾ
ಸತ್ತಿದ್ದಾರಂತೇನೂ ಇಲ್ಲ

ಜನರ ನಡುವೆ
ನಾಡಿ-ನುಡಿಯಲ್ಲಿ
ಈಗಲೂ
ಉಸಿರಾಡುತ್ತಿದ್ದಾರೆ!!

✍ ಶಾಂತಾರಾಮ್ ಶೆಟ್ಟಿ
➖➖➖➖➖🌱

ಆಸ್ತಿ!

ಆಸ್ತಿ!
➖➖➖➖✨✨

ಆಕಾಶ..‌.
ಅಪ್ಪ
ಬಿಟ್ಟು ಹೋದ ಆಸ್ತಿ!

ನಕ್ಷತ್ರಗಳು
ಅಮ್ಮ
ಎಣಿಸಲು ಹೇಳಿಕೊಟ್ಟ
ಕನಸುಗಳು...!

ಹಗಲು
ಆಯುವ
ಬದುಕಾದರೂ 
ರಾತ್ರಿ
ನನ್ನದು
ಸುಂದರ
ಸ್ವಪ್ನ ಲೋಕ!!.

✍ಶಾಂತಾರಾಮ್ ಶೆಟ್ಟಿ.

Horror -ಕಾಮಿಡಿ!!

Horror -ಕಾಮಿಡಿ!!
➖➖➖➖➖😀

ಕನ್ನಡಿಯ
ಮುಂದೆ ನಿಂತು
ಕನ್ನಡಿಗ
ಕನ್ನಡಿಗೆ
Mirror
ಎಂದಾಗ
ಕನ್ನಡಿಯೊಳಗಿನ
ಪ್ರತಿಬಿಂಬಕ್ಕೆ
ಹೆಮ್ಮೆಯ ನಗು!!

✍ಶಾಂತಾರಾಮ್ ಶೆಟ್ಟಿ.
➖➖➖➖➖🌱

ಬಾಂಧವ್ಯ!

ಬಾಂಧವ್ಯ!

ನೊಂದವರ
ನೋವಿಗೆ
ನೋಯುವವರಿಲ್ಲ
ಅನ್ನುವ
ನೋವು 😢
ನೋವಿಗೂ ಇದೆ!


ನೋವೂ
ನಮ್ಮೊಳಗಿನವನೇ
ಬಿಟ್ಟಿರಲಾಗದವ..,

ನಲಿವಿನಂತೆ😀
ನೋವಿಗೂ
ಬಂಧುಗಳು
ನಾವು-ನೀವು!!.

✍🏽ಶಾಂತಾರಾಮ್ ಶೆಟ್ಟಿ
➖➖➖➖➖🌹❣

ಬದ್ಧ!

ಬದ್ಧ!
☘☘☘☘

ಬುದ್ಧನ ಕುರಿತು
ಕೊರೆದವರೆಲ್ಲಾ
ಬುದ್ಧನಿಗೆ
ಬದ್ಧರಲ್ಲ......!

ಆಸೆ ದು:ಖದ ಮೂಲ
ಎಂದು
ಜರಿದ
ಪ್ರವಚನಕಾರರು
ಸಂಭಾವನೆ
ಕಡಿಮೆಯಾಯಿತೆಂದು
ಎತ್ತಿದರಂತೆ
ಸಂಘಟಕರಲ್ಲಿ
ತಕರಾರು!!

✍🏽ಶಾಂತಾರಾಮ್ ಶೆಟ್ಟಿ 😳
➖➖➖➖➖➖➖

ವರ್ತಮಾನ!

ವರ್ತಮಾನ!
➖➖➖➖➖➖
ಸಜ್ಜನ ಸಾತ್ವಿಕರಿಗೆ
ಭೂಮಿ ಮೇಲೆ
ಇಂದು
ಕಷ್ಟಗಳಿರಬಹುದು
ನಾಳೆ
ಮೇಲೆ
ಸ್ವರ್ಗ ಕಾದಿದೆ!

ಅನುಭೋಗಕ್ಕೆ
ಒಂದಿಷ್ಟು
ಪುಣ್ಯದ ಮಿತಿ....!

ವರ್ತಮಾನದಲ್ಲಿ
ಬದುಕುವ
ಸುಳ್ಳರಿಗೆ ಕಳ್ಳರಿಗೆ
ಲೂಟಿಗಾರರಿಗೆ
ನಾಳೆಗಳಲ್ಲಿ
ನಂಬಿಕೆಯಿಲ್ಲ....!

ಇಂದೇ
ಭೂಮಿಯಲ್ಲೆ
ಸ್ವರ್ಗಸೃಷ್ಟಿಯಾಗಿದೆ
ಉದ್ಘಾಟನೆಗೆ
ಇಂದ್ರನೇ
ಮುಖ್ಯ ಅತಿಥಿ!!.

✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖👻.

ಮಂಗಳವಾರ, ಡಿಸೆಂಬರ್ 5, 2017

ಭವಿಷ್ಯ!


➖➖➖➖🌚
ಗಂಡ-ಹೆಂಡತಿ
ತುಂಬಾ
ಅನ್ಯೋನ್ಯವಾಗಿದ್ದರು!

ಇತ್ತೀಚೆಗೆ
ಬೀದಿಯ
ಮೂರನೇ ಮನೇಲಿ
ಶನಿಯೊಬ್ಬ
ವಕ್ಕರಿಸಿದ್ದಾನೆ!!

✍🏻ಶಾಂತಾರಾಮ್ ಶೆಟ್ಟಿ
➖➖➖➖➖🌚

(ಸು)ಮ್ಮನೆ!

(ಸು)ಮ್ಮನೆ!
➖➖➖💀
ಬದುಕು
ಹುಡುಕಿ ಹೊರಟ
ಎಲ್ಲರ
ಕೈಯಲ್ಲೂ....


ಸಾವಿನ ವಿಳಾಸ!!.

✍🏻ಶಾಂತಾರಾಮ್ ಶೆಟ್ಟಿ.
➖➖➖➖➖👻

ಪ(ಬ)ರಿಕಲ್ಪನೆ

ಪ(ಬ)ರಿಕಲ್ಪನೆ!
➖➖➖➖🐝

ಕವಿ
ಕಲ್ಪನೆಯಲ್ಲಿ...,

ಮಧು ಹೀರಿ
ಮಾಯವಾದ
ಮೋಸಗಾರ
ದುಂಬಿ..!

ಹೂವು
ಮಾತ್ರ
ತಲೆಯಲ್ಲಾಡಿಸಿ
ನಗುತಿತ್ತು
ಮನದುಂಬಿ!!

✍ಶಾಂತಾರಾಮ್ ಶೆಟ್ಟಿ

ಮಿತಿ!.

ಮಿತಿ!.
➖➖➖🐸
ಬಾವಿಯೊಳಗಿನ
ಕಪ್ಪೆಯೂ
ಖುಷ್-
ಖುಷಿಯಾಗಿತ್ತು,..!

ಸಂತೋಷಕ್ಕೆ
ಜ್ಞಾನದ
ಪರಿಮಿತಿ
ಇದ್ದಂಗಿಲ್ಲ !!.

✍ಶಾಂತಾರಾಮ್ ಶೆಟ್ಟಿ
➖➖➖➖➖🐸

(ಸ್ವ)ಭಾವ!

(ಸ್ವ)ಭಾವ!
➖➖➖🌿

ಮರಿ
ಕೋಗಿಲೆ
ತಾಯಿಗಾಗಿ
ಅತ್ತರೂ...

ಕವಿಯ
ಕಿವಿಗದು
ವಸಂತ-ಗಾನ!!

✍ಶಾಂತಾರಾಮ್ ಶೆಟ್ಟಿ
➖➖➖➖➖🌿

ನೀರು !!

ನೀರು !!
➖➖➖😢
ಸಾಲ ಮಾಡಿ
ಬಾವಿ ತೋಡಿ...


ರೈತನ
ಕಣ್ಣಲ್ಲಿ
ಧಾರಾಕಾರ ನೀರು !

✍ಶಾಂತಾರಾಮ್ ಶೆಟ್ಟಿ.

ಸಾವಾ(ಸ)! ➖➖➖

ಸಾವಾ(ಸ)!
➖➖➖
ಎಂತಾ...
ಟ್ರಾಜಿಡಿ ನೋಡಿ!

ಉಪ್ಪಿನ ಸಹವಾಸ
ಮಾಡಿ
ಚಿರುಟಿ- ಮುರುಟಿ
ಹೋಯ್ತು
ಚೆಂದದ
ಮಾವಿನ ಮಿಡಿ!!.

✍ಶಾಂತಾರಾಮ್ ಶೆಟ್ಟಿ.

ಶ್ರವಣ ದೋಷ!

ಶ್ರವಣ ದೋಷ!
➖➖➖➖👂🏾
ನೀರು
ತುಂಬಿಸುತ್ತಿದ್ದ
ಶಬ್ದ
ಪ್ರಾಣಿಯ
ಚಲನದಂತೆ
ಕೇಳಿಸಿತಂತೆ !

ಶ್ರವಣ ಕುಮಾರನ
ಸಾಯುಸುವ ಮೊದಲೇ
ದಶರಥನಿಗೆ
ಶ್ರವಣ ದೋಷವಿತ್ತಂತೆ !!

✍ ಶಾಂತಾರಾಮ್ ಶೆಟ್ಟಿ
➖➖➖➖👂🏾

ಕಾರಣ!

ಕಾರಣ!
➖➖➖❓

ಮುದುಕ
ಅಲ್ಲೇ
ಒರಗಿ ಕೂತಿರುವುದು
ವಯೋ ಸಹಜ
ಸುಸ್ತಿಂದ!

ಜನರ
ಭಾವಗಳು
ಬದಲಾಗಲು ಕಾರಣ
ಪಕ್ಕದಲ್ಲಿದ್ದ
wineshop!!

✍ ಶಾಂತಾರಾಮ್ ಶೆಟ್ಟಿ

ಕಾಲ!

ಕಾಲ!
➖➖➖🕐
ಆ ಕಲ್ಲು
ದಿನಾ ಶಿಲ್ಪಿಯ
ದಾರಿ
ಕಾಯುತ್ತಿತ್ತು...

ಮೂರ್ತಿ
ದೇವರಾಗಿದೆ
ಈಗ...

ಶಿಲ್ಪಿ
ಧರ್ಮ ದರ್ಶನದ
ಸರತಿಯಲ್ಲಿ
ಕಾಯುತ್ತಿದ್ದಾನೆ!!

✍ ಶಾಂತಾರಾಮ್ ಶೆಟ್ಟಿ

ಉರಿ !

ಉರಿ !
➖➖🌞

ಇಬ್ಬನಿಗೆ
ಇನ್ನಷ್ಟು ಹೊತ್ತು
ಅವಳ
ಕೆಂದುಟಿಯ
ಮೇಲಿರುವಾಸೆಯಿತ್ತು!

ರವಿ ಕಿರಣ
ಕಿಚ್ಚಿಂದ
ಜಾಡಿಸಿದ
ಒದ್ದೋಡಿಸಿದ!!

✍ಶಾಂತಾರಾಮ್ ಶೆಟ್ಟಿ
➖➖➖➖➖🌞

ಬೇಕಿತ್ತನಾ

 ಬೇಕಿತ್ತನಾ❓
➖➖➖➖💔

ಮದುವೆಯಾದ
ಮೇಲೂ
ದಿನಾ  ಬಾಯಲ್ಲಿ
ಸಾಹಿತ್ಯ ಕಾದಂಬರಿ
ಕವನ-ಕಲ್ಪನಾ...!

ಮೂರೇ ತಿಂಗಳಲ್ಲಿ
ಕೊಟ್ಟು ಬಿಟ್ಟಳು
ಕವಿಯ ಹೆಂಡತಿ
ವಿಚ್ಛೇದನ !!

✍ ಶಾಂತಾರಾಮ್ ಶೆಟ್ಟಿ
➖➖➖➖😢💔

ಬಣ್ಣದ ಲೋಕ!

ಬಣ್ಣದ ಲೋಕ!
➖➖➖➖➖
ಪುರಾಣಕಾಲ
ದಿಂದಲೂ
ಇದ್ದದ್ದೇ
ವರ್ಣಭೇದ...,

ಬೆಳ್ಳಗಿರುವರು
ಒಳ್ಳೆಯವರು-ಸುರರು,
ಕಳ್ಳರು-ಅಸುರರು
ಕರ್ರಗಿರುವರು!

ಬೆಳ್ಳಗಿರುವವರ
ಕಳ್ಳತನ-ಸುಳ್ಳುತನ
ಬಯಲಾಗಲೇ ಇಲ್ಲ....

ಎಲ್ಲಾ
ಪಾಪಗಳನ್ನು
ಪಾಪ....
ಮಸಿ ನುಂಗಿತೇನೋ?

✍ಶಾಂತಾರಾಮ್ ಶೆಟ್ಟಿ

ಪ್ರವಚನ!


➖➖➖🐣

ಮೊಟ್ಟೆಯೊಳಗೇ
ಆಧ್ಯಾತ್ಮದ
ಪ್ರವಚನ...!

ತರೆತರೆದು
ಒಳಗಿಂದ
ತೆರೆದರೆ
ಜೀವನ

ಮೆರೆಮೆರೆದು
ಹೊರಗಿಂದ
ಮುರಿದರೆ
ಮರಣ!!

✍ಶಾಂತಾರಾಮ್ ಶೆಟ್ಟಿ