ಈ ನಾಡ ಅಂದ..........ಈ ತಾಣ ಚಂದ ......
ಗುರುವಾರ, ಡಿಸೆಂಬರ್ 21, 2017
ಸಾಲಗಾರ...!
ಸಾಲಗಾರ...!
ಸಾವಿನ
ಸಮಯದಲ್ಲೂ
ಅವರು
ಸಾಲ ಮಾಡಿದರು...
ಕೊನೆಯುಸಿರು
ಎಳೆದವರು
ವಾಪಸು ಕೊಡಲಿಲ್ಲ!!
✍ಶಾಂತಾರಾಮ್ ಶೆಟ್ಟಿ
➖➖➖➖➖👻
ಅನಂತ!
ಅನಂತ!
➖➖➖➖🌚🌞
ರಾತ್ರಿ
ಇವತ್ತಿನ ಕೊನೆಯೇನಲ್ಲ
ನಾಳೆಯ ಮೊದಲು!
ಹಗಲು
ಇವತ್ತಿನ ಮೊದಲೇನಲ್ಲ
ನಿನ್ನೆಯ ಕೊನೆ!
ಹೀಗಿದ್ದೂ
ಹಗಲು ರಾತ್ರಿಗಳಿಗೆ
ಕೊನೆ
ಮೊದಲೆಂಬುದೇನೇ
ಇಲ್ಲ!!
✍ಶಾಂತಾರಾಮ್ ಶೆಟ್ಟಿ
➖➖➖➖🌚🌞
ಜೀವನ!
ಜೀವನ!
➖➖➖➖❓
ಮೊದಲ ಪುಟದಲಿ
ಹುಟ್ಟಿದೆ
ಕೊನೆಯ ಪುಟದಲಿ
ಸಾವಿದೆ....!
ನಡುವೆ
ಬರೆಯದ
ಖಾಲಿ ಪುಟ,
ದಿನಾ
ಹುಡುಕಾಟ.....
ಏನಿದೆ..
ಮುಂದೆ....ಏನಿದೆ❓
✍ ಶಾಂತಾರಾಮ್ ಶೆಟ್ಟಿ
➖➖➖➖➖😮
ಸ್ಥಿತ!!
ಸ್ಥಿತ!!
▪▪▪
ಹೆಂಡತಿ
ಕಳಕೊಂಡವನು...,
ಅವನದ್ದು
ಒಂದು
ರಾಮಾಯಣ...!
ಹೆಂಡತಿ ಮಕ್ಕಳ
ಮೋಹಕ್ಕೆ ಬಿದ್ದವನು
ಅವನದ್ದೋ....
ಇನ್ನೊಂದು
ಮಹಾಭಾರತ....!
ನಡುವೆ
ಜಂಜಾಟಗಳ
ಸಾಗರವ
ಹಾರಿ
ಮೀರಿ
ನಿಂತ
ಹನುಮಂತ!!
🐒🐒
✍🏽ಶಾಂತಾರಾಮ್ ಶೆಟ್ಟಿ
ವ್ಯಾಪಾರ!
ವ್ಯಾಪಾರ
!
ಬದುಕಿದ್ದವರನ್ನು
ಬಿಟ್ಬಿಡಿ
ಸ್ವಾಮಿ
...!
ಸತ್ರವರಿಗೂ
ನಮ್ಮಲ್ಲಿ
ಸೇವಾ
ಸೌಲಭ್ಯವಿದೆ
ಎಂದನಂತೆ
ಶವಪೆಟ್ಟಿಗೆ
ವ್ಯಾಪಾರಿ
!
ಕಹಿ ಸತ್ಯ!
ಕಹಿ ಸತ್ಯ!
➖➖➖😗
ತಮ್ಮೊಳಗಿನ
ಕುರೂಪವನ್ನು
ಎತ್ತಿ
ತೋರಿದ್ದಕ್ಕೆ
ಕನ್ನಡಿಯ
ಮುಂದೆ
ಮುಖ
ಕಿವುಚಿದರು!!
✍ಶಾಂತಾರಾಮ್ ಶೆಟ್ಟಿ
ದಿಕ್ಕಾಪಾಲು!
ದಿಕ್ಕಾಪಾಲು!
➖➖➖
ಅಷ್ಟ ದಿಕ್ಕುಗಳಿಂದ
ಹರಿದು ಬಂದ
ಭಕ್ತಕೋಟಿಯ
ಬೇಡಿಕೆಗಳಿಗೆ
ದೇವರೇ
ದಿಕ್ಕೆಟ್ಟು ಓಡಿದ
ಜೀವಂತ !-ಇನ್ನೂ...!
ಜೀವಂತ !
➖➖➖➖➖
ಒಂದೇ
ಗುಂಡು ಸತ್ತಿದ್ದು
ಐದು ಗುಂಡುಗಳು
ಇನ್ನೂ
ಜೀವಂತ....!
ಸತ್ತ
ಗುಂಡೇ
ಸಾಯಿಸಿದ್ದು!!
✍ಶಾಂತಾರಾಮ್ ಶೆಟ್ಟಿ
➖➖➖➖➖➖
ಇನ್ನೂ...!
➖➖➖➖
ಆಸೆ
ಹೊತ್ತು ಸತ್ತವ
ಗೋರಿಯೊಳಗೆ
ಮಡದಿ ಮಕ್ಕಳಿಗೂ
ಜಾಗ ಕಾದಿರಿಸಿದ !
ಸತ್ತವನ
ಆಸೆ
ಇನ್ನೂ ಸತ್ತಿಲ್ಲ!!
✍ ಶಾಂತಾರಾಮ್ ಶೆಟ್ಟಿ
➖➖➖➖👻👻
ಪ್ರವಚನ! ➖➖➖🐣
ಪ್ರವಚನ
!
➖➖➖🐣
ಮೊಟ್ಟೆಯೊಳಗೇ
ಆಧ್ಯಾತ್ಮದ
ಪ್ರವಚನ
...!
ತರೆತರೆದು
ಒಳಗಿಂದ
ತೆರೆದರೆ
ಜೀವನ
ಮೆರೆಮೆರೆದು
ಹೊರಗಿಂದ
ಮುರಿದರೆ
ಮರಣ
!!
ಉರುವಲು!
ಉರುವಲು!
➖➖➖🔥🔥
ಎಂಥಾ
ಕಾವ್ಯದ
ಸುವಾಸನೆಯಿದೆ
ಹೆಂಡತಿ ಕೊಟ್ಟ
ಬೆಚ್ಚನೆ
ಕಾಫಿಯ ಹಬೆ
ಒಳಗೆ ?!
ಬಹುಷ:
ಇವತ್ತೂ
ಉರುವಲಾಗಿ
ಇಟ್ಟಿರಬೇಕು
ಒಂದು
ಕವನ ಸಂಕಲನ
ಒಲೆಗೆ !!
✍ಶಾಂತಾರಾಮ್ ಶೆಟ್ಟಿ
ಕಣ್ಕಟ್ಟು!!
ಕಣ್ಕಟ್ಟು!!
➖➖➖😎
ಇಂದಿಗೂ..
ಸುಂದರಾಂಗನನ್ನು
ಮನ್ಮಥನಿಗೂ...
ಸುಂದರಿಯನ್ನು
ರತಿಗೂ
ಹೋಲಿಸುವರು!
ಎಷ್ಟು
ಕಣ್ಕಟ್ಟು ನೋಡಿ
ಉಪಮೆಯಲ್ಲೂ?
ನೋಡದವರು
ನೋಡದವರಿಗೆ
ನೋಡದ್ದನ್ನು
ನೋಡಿದಂತೆಯೇ
ಕಣ್ಣೆದುರೇ
ಕಟ್ಟಿ
ಕೊಡುವರು
ಬಣ್ಣದ
ಕಾಮನ ಬಿಲ್ಲು!!
✍ಶಾಂತಾರಾಮ್ ಶೆಟ್ಟಿ
ಚುಟುಕಾಂಬರಿ!- ತಾಕತ್ತು!
ಚುಟುಕಾಂಬರಿ!
➖➖➖➖➖🗣
ಒಂದೋ ಎರಡೋ
ಮುತ್ತಿನಂತ
ಮಾತು ಹೆಂಡತಿಯದು....,
ಆಹಾ
ಎಂತಾ ಸೊಗಸು
ಚುಟುಕು
ಕವಿಯ ಬದುಕು !
ಕಾದಂಬರಿಕಾರನದ್ದೊ
ಮುಗಿಯದ ಗೋಳು
ಬೆಳಿಗ್ಗಿಂದ
ಸುರುವಾದರೆ ರಾತ್ರಿವರೆಗೆ
ಹೆಂಡತಿ ದಿನಾ ಬಿಡದೆ
ಬೈಯೋಳು!!
: ತಾಕತ್ತು!
➖➖➖
ಭಾಷೆ
ಬರದವರ
ನಡುವೆಯೂ
ದುಡ್ಡು
ಸಲೀಸಾಗಿ
ಮಾತಾಡಿತು!!
✍ಶಾಂತಾರಾಮ್ ಶೆಟ್ಟಿ
➖➖➖➖➖🤝🏾
ಲಾಲಸೆ!
ಲಾಲಸೆ!
➖➖➖
ಯಮನೂ
ಪಳಗಿದ
ರಾಜಕಾರಣಿ...!
ನರಕ-
ವಾದರೇನಂತೆ
ಅಧಿಕಾರ
ಬೇಕಂತೆ!!.
✍ಶಾಂತಾರಾಮ್ ಶೆಟ್ಟಿ
➖➖➖➖➖
ಜೀವಂತ!
ಜೀವಂತ!
➖➖➖➖🌿
ಬದುಕಿದವರೆಲ್ಲಾ
ಬದುಕಿದ್ದಾರಂತೇನೂ ಇಲ್ಲ...
ಜನರ ನಡುವೆ
ಗಡಿಬಿಡಿಯಲ್ಲಿ
ಉಸಿರಾಡುತ್ತಿದ್ದಾರೆ!
ಸತ್ತವರೆಲ್ಲಾ
ಸತ್ತಿದ್ದಾರಂತೇನೂ ಇಲ್ಲ
ಜನರ ನಡುವೆ
ನಾಡಿ-ನುಡಿಯಲ್ಲಿ
ಈಗಲೂ
ಉಸಿರಾಡುತ್ತಿದ್ದಾರೆ!!
✍ ಶಾಂತಾರಾಮ್ ಶೆಟ್ಟಿ
➖➖➖➖➖🌱
ಆಸ್ತಿ!
ಆಸ್ತಿ!
➖➖➖➖✨✨
ಆಕಾಶ...
ಅಪ್ಪ
ಬಿಟ್ಟು ಹೋದ ಆಸ್ತಿ!
ನಕ್ಷತ್ರಗಳು
ಅಮ್ಮ
ಎಣಿಸಲು ಹೇಳಿಕೊಟ್ಟ
ಕನಸುಗಳು...!
ಹಗಲು
ಆಯುವ
ಬದುಕಾದರೂ
ರಾತ್ರಿ
ನನ್ನದು
ಸುಂದರ
ಸ್ವಪ್ನ ಲೋಕ!!.
✍ಶಾಂತಾರಾಮ್ ಶೆಟ್ಟಿ.
Horror -ಕಾಮಿಡಿ!!
Horror -ಕಾಮಿಡಿ!!
➖➖➖➖➖😀
ಕನ್ನಡಿಯ
ಮುಂದೆ ನಿಂತು
ಕನ್ನಡಿಗ
ಕನ್ನಡಿಗೆ
Mirror
ಎಂದಾಗ
ಕನ್ನಡಿಯೊಳಗಿನ
ಪ್ರತಿಬಿಂಬಕ್ಕೆ
ಹೆಮ್ಮೆಯ ನಗು!!
✍ಶಾಂತಾರಾಮ್ ಶೆಟ್ಟಿ.
➖➖➖➖➖🌱
ಬಾಂಧವ್ಯ!
ಬಾಂಧವ್ಯ!
ನೊಂದವರ
ನೋವಿಗೆ
ನೋಯುವವರಿಲ್ಲ
ಅನ್ನುವ
ನೋವು 😢
ನೋವಿಗೂ ಇದೆ!
ನೋವೂ
ನಮ್ಮೊಳಗಿನವನೇ
ಬಿಟ್ಟಿರಲಾಗದವ..,
ನಲಿವಿನಂತೆ😀
ನೋವಿಗೂ
ಬಂಧುಗಳು
ನಾವು-ನೀವು!!.
✍🏽ಶಾಂತಾರಾಮ್ ಶೆಟ್ಟಿ
➖➖➖➖➖🌹❣
ಬದ್ಧ!
ಬದ್ಧ!
☘☘☘☘
ಬುದ್ಧನ ಕುರಿತು
ಕೊರೆದವರೆಲ್ಲಾ
ಬುದ್ಧನಿಗೆ
ಬದ್ಧರಲ್ಲ......!
ಆಸೆ ದು:ಖದ ಮೂಲ
ಎಂದು
ಜರಿದ
ಪ್ರವಚನಕಾರರು
ಸಂಭಾವನೆ
ಕಡಿಮೆಯಾಯಿತೆಂದು
ಎತ್ತಿದರಂತೆ
ಸಂಘಟಕರಲ್ಲಿ
ತಕರಾರು!!
✍🏽ಶಾಂತಾರಾಮ್ ಶೆಟ್ಟಿ 😳
➖➖➖➖➖➖➖
ವರ್ತಮಾನ!
ವರ್ತಮಾನ!
➖➖➖➖➖➖
ಸಜ್ಜನ ಸಾತ್ವಿಕರಿಗೆ
ಭೂಮಿ ಮೇಲೆ
ಇಂದು
ಕಷ್ಟಗಳಿರಬಹುದು
ನಾಳೆ
ಮೇಲೆ
ಸ್ವರ್ಗ ಕಾದಿದೆ!
ಅನುಭೋಗಕ್ಕೆ
ಒಂದಿಷ್ಟು
ಪುಣ್ಯದ ಮಿತಿ....!
ವರ್ತಮಾನದಲ್ಲಿ
ಬದುಕುವ
ಸುಳ್ಳರಿಗೆ ಕಳ್ಳರಿಗೆ
ಲೂಟಿಗಾರರಿಗೆ
ನಾಳೆಗಳಲ್ಲಿ
ನಂಬಿಕೆಯಿಲ್ಲ....!
ಇಂದೇ
ಭೂಮಿಯಲ್ಲೆ
ಸ್ವರ್ಗಸೃಷ್ಟಿಯಾಗಿದೆ
ಉದ್ಘಾಟನೆಗೆ
ಇಂದ್ರನೇ
ಮುಖ್ಯ ಅತಿಥಿ!!.
✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖👻.
ಮಂಗಳವಾರ, ಡಿಸೆಂಬರ್ 5, 2017
ಭವಿಷ್ಯ!
➖➖➖➖🌚
ಗಂಡ-ಹೆಂಡತಿ
ತುಂಬಾ
ಅನ್ಯೋನ್ಯವಾಗಿದ್ದರು!
ಇತ್ತೀಚೆಗೆ
ಬೀದಿಯ
ಮೂರನೇ ಮನೇಲಿ
ಶನಿಯೊಬ್ಬ
ವಕ್ಕರಿಸಿದ್ದಾನೆ!!
✍🏻ಶಾಂತಾರಾಮ್ ಶೆಟ್ಟಿ
➖➖➖➖➖🌚
(ಸು)ಮ್ಮನೆ!
(ಸು)ಮ್ಮನೆ!
➖➖➖💀
ಬದುಕು
ಹುಡುಕಿ ಹೊರಟ
ಎಲ್ಲರ
ಕೈಯಲ್ಲೂ....
ಸಾವಿನ ವಿಳಾಸ!!.
✍🏻ಶಾಂತಾರಾಮ್ ಶೆಟ್ಟಿ.
➖➖➖➖➖👻
ಪ(ಬ)ರಿಕಲ್ಪನೆ
ಪ(ಬ)ರಿಕಲ್ಪನೆ!
➖➖➖➖🐝
ಕವಿ
ಕಲ್ಪನೆಯಲ್ಲಿ...,
ಮಧು ಹೀರಿ
ಮಾಯವಾದ
ಮೋಸಗಾರ
ದುಂಬಿ..!
ಹೂವು
ಮಾತ್ರ
ತಲೆಯಲ್ಲಾಡಿಸಿ
ನಗುತಿತ್ತು
ಮನದುಂಬಿ!!
✍ಶಾಂತಾರಾಮ್ ಶೆಟ್ಟಿ
ಮಿತಿ!.
ಮಿತಿ!.
➖➖➖🐸
ಬಾವಿಯೊಳಗಿನ
ಕಪ್ಪೆಯೂ
ಖುಷ್-
ಖುಷಿಯಾಗಿತ್ತು,..!
ಸಂತೋಷಕ್ಕೆ
ಜ್ಞಾನದ
ಪರಿಮಿತಿ
ಇದ್ದಂಗಿಲ್ಲ !!.
✍ಶಾಂತಾರಾಮ್ ಶೆಟ್ಟಿ
➖➖➖➖➖🐸
(ಸ್ವ)ಭಾವ!
(ಸ್ವ)ಭಾವ!
➖➖➖🌿
ಮರಿ
ಕೋಗಿಲೆ
ತಾಯಿಗಾಗಿ
ಅತ್ತರೂ...
ಕವಿಯ
ಕಿವಿಗದು
ವಸಂತ-ಗಾನ!!
✍ಶಾಂತಾರಾಮ್ ಶೆಟ್ಟಿ
➖➖➖➖➖🌿
ನೀರು !!
ನೀರು !!
➖➖➖😢
ಸಾಲ ಮಾಡಿ
ಬಾವಿ ತೋಡಿ...
ರೈತನ
ಕಣ್ಣಲ್ಲಿ
ಧಾರಾಕಾರ ನೀರು !
✍ಶಾಂತಾರಾಮ್ ಶೆಟ್ಟಿ.
ಸಾವಾ(ಸ)! ➖➖➖
ಸಾವಾ(ಸ)!
➖➖➖
ಎಂತಾ...
ಟ್ರಾಜಿಡಿ ನೋಡಿ!
ಉಪ್ಪಿನ ಸಹವಾಸ
ಮಾಡಿ
ಚಿರುಟಿ- ಮುರುಟಿ
ಹೋಯ್ತು
ಚೆಂದದ
ಮಾವಿನ ಮಿಡಿ!!.
✍ಶಾಂತಾರಾಮ್ ಶೆಟ್ಟಿ.
ಶ್ರವಣ ದೋಷ!
ಶ್ರವಣ ದೋಷ!
➖➖➖➖👂🏾
ನೀರು
ತುಂಬಿಸುತ್ತಿದ್ದ
ಶಬ್ದ
ಪ್ರಾಣಿಯ
ಚಲನದಂತೆ
ಕೇಳಿಸಿತಂತೆ !
ಶ್ರವಣ ಕುಮಾರನ
ಸಾಯುಸುವ ಮೊದಲೇ
ದಶರಥನಿಗೆ
ಶ್ರವಣ ದೋಷವಿತ್ತಂತೆ !!
✍ ಶಾಂತಾರಾಮ್ ಶೆಟ್ಟಿ
➖➖➖➖👂🏾
ಕಾರಣ!
ಕಾರಣ!
➖➖➖❓
ಮುದುಕ
ಅಲ್ಲೇ
ಒರಗಿ ಕೂತಿರುವುದು
ವಯೋ ಸಹಜ
ಸುಸ್ತಿಂದ!
ಜನರ
ಭಾವಗಳು
ಬದಲಾಗಲು ಕಾರಣ
ಪಕ್ಕದಲ್ಲಿದ್ದ
wineshop
!!
✍ ಶಾಂತಾರಾಮ್ ಶೆಟ್ಟಿ
ಕಾಲ!
ಕಾಲ!
➖➖➖🕐
ಆ ಕಲ್ಲು
ದಿನಾ ಶಿಲ್ಪಿಯ
ದಾರಿ
ಕಾಯುತ್ತಿತ್ತು...
ಮೂರ್ತಿ
ದೇವರಾಗಿದೆ
ಈಗ...
ಶಿಲ್ಪಿ
ಧರ್ಮ ದರ್ಶನದ
ಸರತಿಯಲ್ಲಿ
ಕಾಯುತ್ತಿದ್ದಾನೆ!!
✍ ಶಾಂತಾರಾಮ್ ಶೆಟ್ಟಿ
ಉರಿ !
ಉರಿ !
➖➖🌞
ಇಬ್ಬನಿಗೆ
ಇನ್ನಷ್ಟು ಹೊತ್ತು
ಅವಳ
ಕೆಂದುಟಿಯ
ಮೇಲಿರುವಾಸೆಯಿತ್ತು!
ರವಿ ಕಿರಣ
ಕಿಚ್ಚಿಂದ
ಜಾಡಿಸಿದ
ಒದ್ದೋಡಿಸಿದ!!
✍ಶಾಂತಾರಾಮ್ ಶೆಟ್ಟಿ
➖➖➖➖➖🌞
ಬೇಕಿತ್ತನಾ
ಬೇಕಿತ್ತನಾ❓
➖➖➖➖💔
ಮದುವೆಯಾದ
ಮೇಲೂ
ದಿನಾ ಬಾಯಲ್ಲಿ
ಸಾಹಿತ್ಯ ಕಾದಂಬರಿ
ಕವನ-ಕಲ್ಪನಾ...!
ಮೂರೇ ತಿಂಗಳಲ್ಲಿ
ಕೊಟ್ಟು ಬಿಟ್ಟಳು
ಕವಿಯ ಹೆಂಡತಿ
ವಿಚ್ಛೇದನ !!
✍ ಶಾಂತಾರಾಮ್ ಶೆಟ್ಟಿ
➖➖➖➖😢💔
ಬಣ್ಣದ ಲೋಕ!
ಬಣ್ಣದ ಲೋಕ!
➖➖➖➖➖
ಪುರಾಣಕಾಲ
ದಿಂದಲೂ
ಇದ್ದದ್ದೇ
ವರ್ಣಭೇದ...,
ಬೆಳ್ಳಗಿರುವರು
ಒಳ್ಳೆಯವರು-ಸುರರು,
ಕಳ್ಳರು-ಅಸುರರು
ಕರ್ರಗಿರುವರು!
ಬೆಳ್ಳಗಿರುವವರ
ಕಳ್ಳತನ-ಸುಳ್ಳುತನ
ಬಯಲಾಗಲೇ ಇಲ್ಲ....
ಎಲ್ಲಾ
ಪಾಪಗಳನ್ನು
ಪಾಪ....
ಮಸಿ ನುಂಗಿತೇನೋ?
✍ಶಾಂತಾರಾಮ್ ಶೆಟ್ಟಿ
ಪ್ರವಚನ!
➖➖➖🐣
ಮೊಟ್ಟೆಯೊಳಗೇ
ಆಧ್ಯಾತ್ಮದ
ಪ್ರವಚನ...!
ತರೆತರೆದು
ಒಳಗಿಂದ
ತೆರೆದರೆ
ಜೀವನ
ಮೆರೆಮೆರೆದು
ಹೊರಗಿಂದ
ಮುರಿದರೆ
ಮರಣ!!
✍ಶಾಂತಾರಾಮ್ ಶೆಟ್ಟಿ
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)