ಈ ನಾಡ ಅಂದ..........ಈ ತಾಣ ಚಂದ ......
ಶುಕ್ರವಾರ, ಏಪ್ರಿಲ್ 28, 2017
ನಾಟಿ!(ನಟ್ಟಿ)
ನಾಟಿ!(ನಟ್ಟಿ)
🌾🌾🌾🌾
ಕಣ್ಣಲ್ಲಿ ಕಣ್ಣಿಟ್ಟು
ನೆಟ್ಟ
ನೋಟಕ್ಕೆ
ಹೃದಯದೊಳಗೆ
ಪ್ರ್ರೀತಿ
ಬೀಜ
ಮೊಳಕೆಯೊಡೆದು
ಹೂವಾಗಿ
ಅರಳಿದ್ದು !!
🌸🌸🌸🌸
✍🏻ಶಾಂತಾರಾಮ್ ಶೆಟ್ಟಿ
ಚಿ(ರಂ)ತನ!
ಚಿ(ರಂ)ತನ!
▪▪▪▪
ಬದುಕಿದ್ದವರಿಗೆ
ಸಾವಿನ
ಚಿಂತೆ
ಸಾವುಂಡವರಿಗೆ
ಸುಖ
ನಿದ್ರೆಯಂತೆ!
✍🏻ಶಾಂತಾರಾಮ್ ಶೆಟ್ಟಿ
ಯೋಧ!
ಯೋಧ!
🕴🏿🕴🏿🕴🏿🕴🏿
ಗೋರಿಯ
ಮೇಲೆ
ಕುಳಿತು
ಸಾವಿಗೇ
ಅವನು
ಬದುಕಿನ
ಪಾಠ
ಹೇಳಿಕೊಟ್ಟ!.
✍🏻 ಶಾಂತಾರಾಮ್ ಶೆಟ್ಟಿ
ಹಣೆಬರಹ!
ಹಣೆಬರಹ!
➖➖➖➖➖
ಬ್ರಹ್ಮ
ಹಣೆಬರಹನ
ಮೊಬೈಲಲ್ಲಿ
ಟೈಪು
ಮಾಡುತ್ತಿದ್ದ....!
ಬದುಕು ಬಂಗಾರವಾಗಲಿ!
Autotype...
ಬದುಕು ಬರಗಾಲವಾಗಲಿ!
ಎಂದು
ಸರಿಪಡಿಸಿತು..!!
✍🏻ಶಾಂತಾರಾಮ್ ಶೆಟ್ಟಿ
ಅಪ್ಪನ ಬಗ್ಗೆ ಒಂದಿಷ್ಟು.....
ಅಪ್ಪನ ಬಗ್ಗೆ ಒಂದಿಷ್ಟು.....
➖➖➖➖➖➖➖➖
1
ಅಪ್ಪನ ಕಣ್ಣಲ್ಲಿ
ಯಾವತ್ತೂ
ನೀರಿಲ್ಲ
ಅಪ್ಪ ನೋವು
ನುಂಗಿ
ಇಂಗಿದ ಬಾವಿ !
2
ನಾವು
ಅಳುವಾಗಲೆಲ್ಲಾ
ಅಪ್ಪ ಸಂತೈಸುತ್ತಿದ್ದ
ಅಪ್ಪ ಅಳುವುದಿಲ್ಲ
ಸಂತೈಸಲು
ಅಪ್ಪನಿಗೆ ಅಪ್ಪನಿಲ್ಲ !
3
ಅಪ್ಪ ಒಬ್ಬನೇ
ನಕ್ಕಿಲ್ಲ
ನಗುವಾಗ ನಗಿಸುತ್ತಿದ್ದ
ನೋವು ಹಂಚಲಿಲ್ಲ
ಮರೆಯಲ್ಲೇ
ನುಂಗಿದ್ದ !
4
ಅಮ್ಮನ ಕಣ್ಣೀರಿಗೆ
ಅಪ್ಪ ಕರಗುವ
ಮೌನಿಯಾಗಿ....
ಗೋಡೆ ನೋಡುತ್ತಾ
ಸೋತು
ಒರಗುವ !.
5
ಅಪ್ಪನ ಮಾತಿಗೆ
ಮನೆ ತುಂಬಾ
ಮೌನ
ಅಪ್ಪನ ಮೌನಕ್ಕೆ
ಮನೆಯೇ
ಸ್ಮಶಾನ !.
6
ಅಪ್ಪನ ಸಾಧನೆಗೆ
ಅಮ್ಮನಿಗೂ
ಸನ್ಮಾನ
ಅಪ್ಪ ಸೋತಾಗ
ಅಮ್ಮನಿಗೂ..
ಅನುಮಾನ !
7
ಅಪ್ಪ ಗಂಧದ
ಕೊರಡು...
ಮನೆ ತುಂಬಾ
ಪರಿಮಳ
ತೇದು ತೇದು
ಸವೆದಿದ್ದು
ಯಾರಿಗೂ
ತಿಳಿಯಲಿಲ್ಲ!
8
ಅಪ್ಪನ ಏಟು
ನಮ್ಮ ತಪ್ಪಿಗೆ
ನೋವು ಮರೆಸಿದ್ದು
ಮದ್ದಲ್ಲ....
ಅಪ್ಪನ ಅಪ್ಪುಗೆ!
9
ಅಪ್ಪನ ಬಗ್ಗೆ
ಒಂದಿಷ್ಟು
ಸಣ್ಣವನ ಮಾತು
ಅಪ್ಪ
ಸಣ್ಣವನಲ್ಲ
ದೇವರಿಗೂ ಗೊತ್ತು!
10
ಅಪ್ಪಾ ....
ಲೋಕ ಮೆಚ್ಚದಿರಬಹುದು
ನಿನ್ನ.....
ನನಗಂತೂ
ನೀನು ಅಪರಂಜಿ
ಅಪ್ಪಟ
ಚಿನ್ನ !!.
✍🏻 ಶಾಂತಾರಾಮ್ ಶೆಟ್ಟಿ
ಹೊನ್ನ ಶೂಲ
ಹೊನ್ನ ಶೂಲ
👏🏻👏🏻👏🏻👏🏻👏🏻
ಹೊಗಳಿಕೆಗೆ ....
ಜೀವ
ಬಿಡುವವರಿದ್ದಾರೆ
ಈ ಜಗದಲ್ಲಿ !
ಚಪ್ಪಾಳೆ
ತಟ್ಟಿದವರಿಗೆಲ್ಲಾ
ರಕ್ತದಾನ
ಮಾಡಿತು
ಸೊಳ್ಳೆ !!.
✍🏻ಶಾಂತಾರಾಮ್ ಶೆಟ್ಟಿ
ರಾಗ ರೀತಿ!
ರಾಗ ರೀತಿ!
➖➖➖➖
ಕೋಗಿಲೆ
ಹಾಡಿದಾಗ
ಎಲ್ಲರೂ ಬರೆದರು
ಅತ್ತಿದ್ದು
ಯಾರೂ
ಬರೆಯಲಿಲ್ಲ....!
ಕುಹೂ ರಾಗ
ಕುಸುರಾಗ
ಆಗಬಾರದೆಂದಿಲ್ಲ
ನೋವಿಗೆ
ಜತೆಗಾರರು
ಬೆರಳೆಣಿಕೆಯವರು!!
✍🏻ಶಾಂತಾರಾಮ್ ಶೆಟ್ಟಿ
▪▪▪▪▪▪▪
ಮಂಗಳವಾರ, ಏಪ್ರಿಲ್ 4, 2017
ಅಪ್ಪಾ!
ಅಪ್ಪಾ!
👨🏾⚕👨🏾⚕👨🏾⚕
ಅಮ್ಮ ನನ್ನ
ಒಂಭತ್ತು ತಿಂಗಳು
ಹೊತ್ತು ನಡೆಯುವಾಗ
ಒಳಗಿಂದ
ನೋಡುತ್ತಿದ್ದೆ...
ಅಮ್ಮನ ಕೈಯೊಳಗೆ
ಕೈಯಿಟ್ಟು...
ಮೆಲ್ಲಗೆ
ನಡೆಸಿದಾತ ನೀನು!,
ಒಂಬತ್ತು ವರ್ಷ
ತನ್ನ ಹೆಗಲ ಮೇಲೆತ್ತಿ
ಸುತ್ತಿ ಕುಣಿಸಿ
ಆಡಿಸಿದದವನು...
ಯಾರ
ಬೆಂಗಿಲ್ಲದೆ-ಹಂಗಿಲ್ಲದೆ!
ಅಪ್ಪಾ ...ನೀನು...
ಕಷ್ಟಕ್ಕೆ ಕೈ ಕೊಟ್ಟವನು
ಅಷ್ಟಕ್ಜೇ...
ಕೈ ಬಿಡದವನು !
✍🏻ಶಾಂತಾರಾಮ್ ಶೆಟ್ಟಿ
➖➖➖➖➖➖➖➖
ಪ್ರೇಮಕವಿ!!
ಪ್ರೇಮಕವಿ!!
➖➖➖➖➖
ಯುವಕವಿ...
ಅದ್ಭುತ
ಅಮರ ಪ್ರೇಮ ಕಾವ್ಯ
ಬರೆದ....!
ಕಾವ್ಯದ ಗುಂಗಿನಲಿ
ಮದುವೆಯಾಗುವುದ
ಮರೆತೇ ಹೋದ!!
✍🏻ಶಾಂತಾರಾಮ್ ಶೆಟ್ಟಿ
😜➖➖➖➖➖
ನಂಟು!
ನಂಟು!
🔁🔁🔁
ದುರ್ಯೋಧನ
ಬಿದ್ದನೆಂದು
ನಕ್ಕಳು
ದ್ರೌಪದಿ.....
ಮಹಾಭಾರತವಾಯ್ತು!
ರಾವಣ
ಕದ್ದೊಯ್ದನೆಂದು
ಅತ್ತಳು ಸೀತೆ....
ರಾಮಾಯಣವಾಯ್ತು!
ಹೆಣ್ಣು
ಅತ್ತಾಗಲೂ
ನಕ್ಕಾಗಲೂ
ಅರ್ಥವಾಗದವರು
ಅಂಟಂಟು
ಅಂದರು
ಈ
ನಂಟು!
ಮಾಯೆದುಲಾಯಿದ
ಬದ್ಕ್....,
ಈ....
ಒಂಜಿ
ನಮೂನೆ
ಮಾಯಣ
ಮಾಯಣ!!
😀
✍🏾: ಶಾಂತಾರಾಮ್ ಶೆಟ್ಟಿ
🍁🍁🍁🍁🍁🍁🍁🍁
ರಾಕ್ಷಸರು!!
ರಾಕ್ಷಸರು!!
👹👹👹👹
ಹೋದಲೆಲ್ಲಾ
ನಾರದರು
ಮಾಡಿದ್ದೇನು?
ಬರೇ .....
ಬತ್ತಿ ಇಟ್ಟದ್ದು
ಮಾರಾಯ್ರೆ !
ರಾಗ-ದ್ವೇಷದ
ತುಪ್ಪ ಸುರಿದು
ಬೆಂಕಿ ಇಟ್ಟು
ಯಮನ
ಉರುಳಿಗೆ
ಕೊರಳು
ಒಡ್ಡಿ
ಎಳೀ.... ಎಳೀ
ಎಂದವರು
ಅವರೇ....?
ಇಲ್ಲಾ....!!
ಎಲ್ಲಾ...
ನಮ್ಮವರೇ....
ನಮ್ಮೊಳಗಿನ
ರಾಕ್ಷಸರೇ!!
✍🏾ಶಾಂತಾರಾಮ್ ಶೆಟ್ಟಿ
➖➖➖➖➖➖
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)