ಭಾನುವಾರ, ಜುಲೈ 16, 2017

ಕೊಳ್ಳಿ!

ಕೊಳ್ಳಿ!
➖➖➖🔥🔥

ಎಲ್ಲಾ ಸುಟ್ಟು
ಬೂದಿಯಾಗಿ
ಆರಿದ
ನಂತರ
ಶಾಂತಿ ಮಂತ್ರ
ಜಪಿಸಿತು







ಬೆಂಕಿಕಡ್ಡಿ!


✍🏽ಶಾಂತಾರಾಮ್ ಶೆಟ್ಟಿ
➖➖➖➖➖🔥🔥

ಕುರುಡು!

ಕುರುಡು!
▪▪▪▪▪▪
ಹಠಕ್ಕೆಬಿದ್ದ
ಹರಿಶ್ಚಂದ್ರ
ಸತ್ಯದ
ಹಾದಿಯಲ್ಲೇನೋ
ಗೆದ್ದ!

ತನ್ನ ಸತ್ಯದ
ಶೂಲದಿಂದ
ತಿವಿ-ತಿವಿದು
ಹೆಂಡತಿ-ಮಗನ
ಹಿಂಸಿಸಿದ್ದ!

ಸತ್ಯ- ಹಿಂಸೆ
ಅಸತ್ಯ-ಅಹಿಂಸೆ
ಗಳ
ಕವಲುದಾರಿಯಲ್ಲಿ
ಏಗಲಾರದೆ
ಧರ್ಮ
ತೊಳಳಾಡಿದ್ದು
ಭೇಷ್
ಎಂದ ಹೊಗಳುಭಠರಿಗೆ
ಕಾಣಿಸಲೇ ಇಲ್ಲ.

✍🏽ಶಾಂತಾರಾಮ್ ಶೆಟ್ಟಿ
〰〰〰〰〰〰〰

ಸ್ವರ್ಗ!

ಸ್ವರ್ಗ!
=======
ಗಾಂಧಿ ಬುದ್ಧ
ಬಸವಣ್ಣನಂತ
ಸಜ್ಜನರೆಲ್ಲಾ
ಸ್ವರ್ಗದಲ್ಲಿದ್ದಾರೆ…,

ಅಜ್ಹಿ
ಮೊಮ್ಮಗನಿಗೆ
ನೋಡದೆ
ಹೇಳಿದ ಸುಳ್ಳು!

ಕೆಲವೊಮ್ಮೆ
ಸುಳ್ಳುಗಳೂ
ಭೂಮಿಯಲ್ಲಿ
ಸ್ವರ್ಗ ಸೃಷ್ಟಿಸುತ್ತವೆ!!.

ಶಾಂತಾರಾಮ್  ಶೆಟ್ಟಿ.
°°°°°°°°°°°°°°°°°°°°°

ಊರುಗೋಲು!

ಊರುಗೋಲು!
➿➿➿➿➿➿
ವೃದ್ಧಾಪ್ಯದಲ್ಲಿ
ಊರುಗೋಲಾಗುತ್ತಾರೆ
ಎಂದು
ಜೋಪಾನವಾಗಿ
ಸಾಕಿದ ಮಕ್ಕಳು!

ಊರುಗೋಲಾದದ್ದು
ಮಾತ್ರ
ಮೂಲೆಯಲ್ಲಿ
ಬಿಸಾಕಿದ ಕೋಲು!!

✍🏽ಶಾಂತಾರಾಮ್  ಶೆಟ್ಟಿ.
➖➖➖➖➖➖➖

ಗುರುವಾರ, ಜುಲೈ 13, 2017

ಬೇಳೆ!

ಬೇಳೆ!
➖➖➖➖

ಗ್ಯಾಸ್-ಕಟ್ಟಿಗೆ
ಯಾವ
ಬೆಂಕಿಯೂ
ಸಾಲುವುದಿಲ್ಲ.....

ಕೋಮು ದ್ವೇಷಾಗ್ನಿಯ
ಉರಿಯೇ
ಬೇಕು
ಸರಾಗವಾಗಿ
ಬೇಯಲು
ರಾಜಕೀಯ ಬೇಳೆ !


     ✍🏽ಶಾಂತಾರಾಮ್ ಶೆಟ್ಟಿ
🔪🔪🔪🔪🔪🔪🔪

ಅಂಧತ್ವ!

ಅಂಧತ್ವ!
-------------
ಧರ್ಮಗುರುಗಳೆಲ್ಲಾ
ಸೇರಿ
ದೇವರ ಹೆಸರಲ್ಲಿ
ಮೊಣಕೈಗೆ
ಹಚ್ಚಿದ ಬೆಲ್ಲ
ಮನ ಮೈಗೆ
ಮೆತ್ತಿದ ಭಯವೆಲ್ಲ
ಭಕ್ತಾಂಧನಿಗೆ
ಪ್ರಸಾದವಾದದ್ದು
ಮರಣ
ಮೋಕ್ಷದಲ್ಲಿ!.

ಸ್ವರ್ಗದಲ್ಲಿ
ಭಕ್ತನಿಗೆ ಸೀಟು
ಕಾದಿರಿಸಿದವರಿಗೆ
ಆಸ್ಪತ್ರೆಯಲ್ಲಿ
ಆತನ
ನರಕಯಾತನೆ
ಕಾಣಲೇ ಇಲ್ಲ!!.

✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖➖➖

ಕುರಿಗಳು!

ಕುರಿಗಳು!
🐑🐑🐑

ಬರೇ ಓಟಿಗಾಗಿ
ಇಷ್ಟೆಲ್ಲಾ
ಎಂದು
ಗೊತ್ತಿದ್ದರೂ....,

ಅವರಿವರ
ಮಾತು ಕೇಳಿ
ದಿನಕ್ಕೊಂದು
ಹಸಿ ಹಸಿ
ಹೆಣ ಅಡ್ಡಬಿದ್ದರೆ!


ಒಪ್ಪಿಕೊಳ್ಳಲೇಬೇಕು
ನಾವೆಲ್ಲರೂ...
ಬುದ್ಧಿವಂತರ
ನಾಡಲ್ಲಿ
ಈಗಲೂ
ದಡ್ಡರಿದ್ದಾರೆ!!

✍🏽ಶಾಂತಾರಾಮ್  ಶೆಟ್ಟಿ

ಯೋಗ್ಯತೆ!

ಯೋಗ್ಯತೆ!
🐕.....................

ನಿಯತ್ತು
ಹಾಗಂದರೇನು ಗೊತ್ತಾ?

ಬಾಲ
ಅಲ್ಲಾಡಿಸುತ್ತಿದ್ದ
ನಾಯಿಯನ್ನೂ
ಬಿಡದೆ ನನ್ನದೊಂದು
ಕೊಂಕು !

ಅವಮಾನ
ಆಗಿರಬೇಕು....,

ನಾಯಿ
ಬೆನ್ನಿಡಿದು
ಬಿಡದೆ
ಬೊಗಳುತ್ತೆ

ಪ್ರಶ್ನಿಸುವುದಕ್ಕೂ
ಇರಬೇಕು
ಒಂದಿಷ್ಟು
ಯೋಗ್ಯತೆ!.

✍🏽ಶಾಂತಾರಾಮ್  ಶೆಟ್ಟಿ
................................🐕

ಬಂದ್!

ಬಂದ್!
〰〰〰

ಬಾಗಿಲು
ತಟ್ಟುತ್ತಿವೆ
ನಿನ್ನ ನೆನಪುಗಳು
ದಿನಾ ಬಂದು!

ಮನದೊಳಗೆ
ಮನೆಯೊಳಗೆ
ನೀನೇ
ಬಂದು....

ಮಾಡುಬಿಡು
ಬಾಗಿಲು ಬಂದು!!.

✍🏽ಶಾಂತಾರಾಮ್  ಶೆಟ್ಟಿ.
➖➖➖➖➖➖

ಮರಣಭಯ!


ಮರಣಭಯ!
➖➖➖➖➖➖

ತಾನೂ....
ಮೊಟ್ಟೆ ಒಡೆದೇ
ಹೊರಬರುವುದಾದರೂ
ಕೋಳಿ ಮರಿಗೆ
ತನಗಿಂತ ಮೊದಲೇ
ಯಾರಾದರೂ ಒಡೆಯುವರೋ
ಅನ್ನುವ
ಚಿಂತೆ !!

✍🏽ಶಾಂತಾರಾಮ್  ಶೆಟ್ಟಿ.
➖➖➖➖➖➖➖

ಶನಿವಾರ, ಜುಲೈ 8, 2017

ಮೂಲ!

ಮೂಲ!
➖➖➖➖
🦋🦋🦋
ರೇಷ್ಮೆಯ
ಹುಳು
ಚಿಟ್ಟೆಯಾಗಿ
ಹಾರಾಡುವ
ಕನಸು ಹೊತ್ತು
ಆಸೆಯ ಬಲೆಯೊಳಗೆ
ಗೂಡು ಕಟ್ಟುವುದ
ಬುದ್ಧ ನೋಡಿದ್ದ .....

ಬಿಸಿ ನೀರಿಗೆ ಬಿದ್ದು
ವಿಲವಿಲ ಒದ್ದಾಡಿ
ಸಾಯುವುದ ನೋಡಿ



ಆಸೆಯೇ
ದು:ಖದ ಮೂಲ

ಎಂದಿದ್ದ !!.

✍🏽ಶಾಂತಾರಾಮ್ ಶೆಟ್ಟಿ🦋
➖➖➖➖➖➖➖

ಪೆದ್ದ!!.

ಪೆದ್ದ!!.
➖➖➖
ಮದುವೆಯಾಗಿ
ಮನೆ ಬಿಟ್ಟು
ಹೋಗಿ
ಮರದಡಿಯಲ್ಲಿ
ಕೂತು
ಅವನು
ಬುದ್ಧನಾದದ್ದು....

ಮರದಡಿಯಲ್ಲಿಯೇ
ಅವಳ
ಜೊತೆ ಕೂತು
ಪ್ರೀತಿಯ ಮಾತು!

ಮನೆ ಬಿಟ್ಟು
ಹೋಗಿ
ಮದುವೆಯಾಗಿ
ನಾನು
ಪೆದ್ದನಾದದ್ದು !!
🤡
✍🏽ಶಾಂತಾರಾಮ್  ಶೆಟ್ಟಿ
➖➖➖➖➖➖➖
(ಎಂಚಿನಾ ಕರ್ಮಯೆ.....🤡)

ಅನ್ನಬ್ರಹ್ಮ!

ಅನ್ನಬ್ರಹ್ಮ!
🌱🌱🌱🌱

ಕರಿಹಲಗೆಯ
ಮೇಲೆ
ಕಲಿಸಲಾಗದ
ಹಸಿವಿನ
ಅಕ್ಷರಗಳನ್ನು
ರೈತ
ನೇಗಿಲ ಗೆರೆಗಳಲ್ಲಿ
ಗೀಚಿದ !!

✍🏽ಶಾಂತಾರಾಮ್  ಶೆಟ್ಟಿ
➖➖➖➖➖➖➖

ಗುರುವಾರ, ಜುಲೈ 6, 2017

(ಅಪ)ನಂಬಿಕೆ!

(ಅಪ)ನಂಬಿಕೆ!
➖➖➖➖➖

ನಂಬಿಕೆಯದೇನೂ
ತಪ್ಪಿರಲಿಲ್ಲ
ಮಾತಿನೊಂದಿಗೆ
ಸುತ್ತಿಕೊಂಡಿತ್ತು
ಅಷ್ಟೇ....

ದಾರಿ ತಪ್ಪಿದ್ದು
ಮಾತು!.

ಇಂದು ಬೆಳಿಗ್ಯೆ
ಅಪಹಾಸ್ಯಕ್ಕೆ
ಹೆದರಿ
ನಂಬಿಕೆ
ಆತ್ಮಹತ್ಯೆ
ಮಾಡಿಕೊಂಡಿತ್ತು!!.

✍🏽 ಶಾಂತಾರಾಮ್ ಶೆಟ್ಟಿ
➖➖➖〰〰〰〰〰

ಕನ್ನಡಿಗ!

ಕನ್ನಡಿಗ!
➖➖➖➖

ನೀವು ಕನ್ನಡದವರಾ?
ಕನ್ನಡಿಗನೊಬ್ಬ
ಕನ್ನಡಿಗನನ್ನು
ಕನ್ನಡಿ ಹಿಡಿದು
ಬೆಂಗಳೂರೆಲ್ಲ
ಹುಡುಕಿದ...

ಕೊನೆಗೂ ಒಬ್ಬ
ಸಿಕ್ಕಿ...
ಎಸ್... ಐಯಾಮ್ ಕನ್ನಡಿಗ
ಅಂದ
ಹೆಮ್ಮೆಯಿಂದ!!

✍🏽ಶಾಂತಾರಾಮ್ ಶೆಟ್ಟಿ 🤡