ಈ ನಾಡ ಅಂದ..........ಈ ತಾಣ ಚಂದ ......
ಭಾನುವಾರ, ಜುಲೈ 16, 2017
ಕೊಳ್ಳಿ!
ಕೊಳ್ಳಿ!
➖➖➖🔥🔥
ಎಲ್ಲಾ ಸುಟ್ಟು
ಬೂದಿಯಾಗಿ
ಆರಿದ
ನಂತರ
ಶಾಂತಿ ಮಂತ್ರ
ಜಪಿಸಿತು
ಬೆಂಕಿಕಡ್ಡಿ!
✍🏽ಶಾಂತಾರಾಮ್ ಶೆಟ್ಟಿ
➖➖➖➖➖🔥🔥
ಕುರುಡು!
ಕುರುಡು!
▪▪▪▪▪▪
ಹಠಕ್ಕೆಬಿದ್ದ
ಹರಿಶ್ಚಂದ್ರ
ಸತ್ಯದ
ಹಾದಿಯಲ್ಲೇನೋ
ಗೆದ್ದ!
ತನ್ನ ಸತ್ಯದ
ಶೂಲದಿಂದ
ತಿವಿ-ತಿವಿದು
ಹೆಂಡತಿ-ಮಗನ
ಹಿಂಸಿಸಿದ್ದ!
ಸತ್ಯ- ಹಿಂಸೆ
ಅಸತ್ಯ-ಅಹಿಂಸೆ
ಗಳ
ಕವಲುದಾರಿಯಲ್ಲಿ
ಏಗಲಾರದೆ
ಧರ್ಮ
ತೊಳಳಾಡಿದ್ದು
ಭೇಷ್
ಎಂದ ಹೊಗಳುಭಠರಿಗೆ
ಕಾಣಿಸಲೇ ಇಲ್ಲ.
✍🏽ಶಾಂತಾರಾಮ್ ಶೆಟ್ಟಿ
〰〰〰〰〰〰〰
ಸ್ವರ್ಗ!
ಸ್ವರ್ಗ!
=======
ಗಾಂಧಿ ಬುದ್ಧ
ಬಸವಣ್ಣನಂತ
ಸಜ್ಜನರೆಲ್ಲಾ
ಸ್ವರ್ಗದಲ್ಲಿದ್ದಾರೆ…,
ಅಜ್ಹಿ
ಮೊಮ್ಮಗನಿಗೆ
ನೋಡದೆ
ಹೇಳಿದ ಸುಳ್ಳು!
ಕೆಲವೊಮ್ಮೆ
ಸುಳ್ಳುಗಳೂ
ಭೂಮಿಯಲ್ಲಿ
ಸ್ವರ್ಗ ಸೃಷ್ಟಿಸುತ್ತವೆ!!.
ಶಾಂತಾರಾಮ್ ಶೆಟ್ಟಿ.
°°°°°°°°°°°°°°°°°°°°°
ಊರುಗೋಲು!
ಊರುಗೋಲು!
➿➿➿➿➿➿
ವೃದ್ಧಾಪ್ಯದಲ್ಲಿ
ಊರುಗೋಲಾಗುತ್ತಾರೆ
ಎಂದು
ಜೋಪಾನವಾಗಿ
ಸಾಕಿದ ಮಕ್ಕಳು!
ಊರುಗೋಲಾದದ್ದು
ಮಾತ್ರ
ಮೂಲೆಯಲ್ಲಿ
ಬಿಸಾಕಿದ ಕೋಲು!!
✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖➖
ಗುರುವಾರ, ಜುಲೈ 13, 2017
ಬೇಳೆ!
ಬೇಳೆ!
➖➖➖➖
ಗ್ಯಾಸ್-ಕಟ್ಟಿಗೆ
ಯಾವ
ಬೆಂಕಿಯೂ
ಸಾಲುವುದಿಲ್ಲ.....
ಕೋಮು ದ್ವೇಷಾಗ್ನಿಯ
ಉರಿಯೇ
ಬೇಕು
ಸರಾಗವಾಗಿ
ಬೇಯಲು
ರಾಜಕೀಯ ಬೇಳೆ !
✍🏽ಶಾಂತಾರಾಮ್ ಶೆಟ್ಟಿ
🔪🔪🔪🔪🔪🔪🔪
ಅಂಧತ್ವ!
ಅಂಧತ್ವ!
-------------
ಧರ್ಮಗುರುಗಳೆಲ್ಲಾ
ಸೇರಿ
ದೇವರ ಹೆಸರಲ್ಲಿ
ಮೊಣಕೈಗೆ
ಹಚ್ಚಿದ ಬೆಲ್ಲ
ಮನ ಮೈಗೆ
ಮೆತ್ತಿದ ಭಯವೆಲ್ಲ
ಭಕ್ತಾಂಧನಿಗೆ
ಪ್ರಸಾದವಾದದ್ದು
ಮರಣ
ಮೋಕ್ಷದಲ್ಲಿ!.
ಸ್ವರ್ಗದಲ್ಲಿ
ಭಕ್ತನಿಗೆ ಸೀಟು
ಕಾದಿರಿಸಿದವರಿಗೆ
ಆಸ್ಪತ್ರೆಯಲ್ಲಿ
ಆತನ
ನರಕಯಾತನೆ
ಕಾಣಲೇ ಇಲ್ಲ!!.
✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖➖➖
ಕುರಿಗಳು!
ಕುರಿಗಳು!
🐑🐑🐑
ಬರೇ ಓಟಿಗಾಗಿ
ಇಷ್ಟೆಲ್ಲಾ
ಎಂದು
ಗೊತ್ತಿದ್ದರೂ....,
ಅವರಿವರ
ಮಾತು ಕೇಳಿ
ದಿನಕ್ಕೊಂದು
ಹಸಿ ಹಸಿ
ಹೆಣ ಅಡ್ಡಬಿದ್ದರೆ!
ಒಪ್ಪಿಕೊಳ್ಳಲೇಬೇಕು
ನಾವೆಲ್ಲರೂ...
ಬುದ್ಧಿವಂತರ
ನಾಡಲ್ಲಿ
ಈಗಲೂ
ದಡ್ಡರಿದ್ದಾರೆ!!
✍🏽ಶಾಂತಾರಾಮ್ ಶೆಟ್ಟಿ
ಯೋಗ್ಯತೆ!
ಯೋಗ್ಯತೆ!
🐕.....................
ನಿಯತ್ತು
ಹಾಗಂದರೇನು ಗೊತ್ತಾ?
ಬಾಲ
ಅಲ್ಲಾಡಿಸುತ್ತಿದ್ದ
ನಾಯಿಯನ್ನೂ
ಬಿಡದೆ ನನ್ನದೊಂದು
ಕೊಂಕು !
ಅವಮಾನ
ಆಗಿರಬೇಕು....,
ನಾಯಿ
ಬೆನ್ನಿಡಿದು
ಬಿಡದೆ
ಬೊಗಳುತ್ತೆ
ಪ್ರಶ್ನಿಸುವುದಕ್ಕೂ
ಇರಬೇಕು
ಒಂದಿಷ್ಟು
ಯೋಗ್ಯತೆ!.
✍🏽ಶಾಂತಾರಾಮ್ ಶೆಟ್ಟಿ
................................🐕
ಬಂದ್!
ಬಂದ್!
〰〰〰
ಬಾಗಿಲು
ತಟ್ಟುತ್ತಿವೆ
ನಿನ್ನ ನೆನಪುಗಳು
ದಿನಾ ಬಂದು!
ಮನದೊಳಗೆ
ಮನೆಯೊಳಗೆ
ನೀನೇ
ಬಂದು....
ಮಾಡುಬಿಡು
ಬಾಗಿಲು ಬಂದು!!.
✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖
ಮರಣಭಯ!
ಮರಣಭಯ!
➖➖➖➖➖➖
ತಾನೂ....
ಮೊಟ್ಟೆ ಒಡೆದೇ
ಹೊರಬರುವುದಾದರೂ
ಕೋಳಿ ಮರಿಗೆ
ತನಗಿಂತ ಮೊದಲೇ
ಯಾರಾದರೂ ಒಡೆಯುವರೋ
ಅನ್ನುವ
ಚಿಂತೆ !!
✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖➖
ಶನಿವಾರ, ಜುಲೈ 8, 2017
ಮೂಲ!
ಮೂಲ!
➖➖➖➖
🦋🦋🦋
ರೇಷ್ಮೆಯ
ಹುಳು
ಚಿಟ್ಟೆಯಾಗಿ
ಹಾರಾಡುವ
ಕನಸು ಹೊತ್ತು
ಆಸೆಯ ಬಲೆಯೊಳಗೆ
ಗೂಡು ಕಟ್ಟುವುದ
ಬುದ್ಧ ನೋಡಿದ್ದ .....
ಬಿಸಿ ನೀರಿಗೆ ಬಿದ್ದು
ವಿಲವಿಲ ಒದ್ದಾಡಿ
ಸಾಯುವುದ ನೋಡಿ
ಆಸೆಯೇ
ದು:ಖದ ಮೂಲ
ಎಂದಿದ್ದ !!.
✍🏽ಶಾಂತಾರಾಮ್ ಶೆಟ್ಟಿ🦋
➖➖➖➖➖➖➖
ಪೆದ್ದ!!.
ಪೆದ್ದ!!.
➖➖➖
ಮದುವೆಯಾಗಿ
ಮನೆ ಬಿಟ್ಟು
ಹೋಗಿ
ಮರದಡಿಯಲ್ಲಿ
ಕೂತು
ಅವನು
ಬುದ್ಧನಾದದ್ದು....
ಮರದಡಿಯಲ್ಲಿಯೇ
ಅವಳ
ಜೊತೆ ಕೂತು
ಪ್ರೀತಿಯ ಮಾತು!
ಮನೆ ಬಿಟ್ಟು
ಹೋಗಿ
ಮದುವೆಯಾಗಿ
ನಾನು
ಪೆದ್ದನಾದದ್ದು !!
🤡
✍🏽ಶಾಂತಾರಾಮ್ ಶೆಟ್ಟಿ
➖➖➖➖➖➖➖
(ಎಂಚಿನಾ ಕರ್ಮಯೆ.....🤡)
ಅನ್ನಬ್ರಹ್ಮ!
ಅನ್ನಬ್ರಹ್ಮ!
🌱🌱🌱🌱
ಕರಿಹಲಗೆಯ
ಮೇಲೆ
ಕಲಿಸಲಾಗದ
ಹಸಿವಿನ
ಅಕ್ಷರಗಳನ್ನು
ರೈತ
ನೇಗಿಲ ಗೆರೆಗಳಲ್ಲಿ
ಗೀಚಿದ !!
✍🏽ಶಾಂತಾರಾಮ್ ಶೆಟ್ಟಿ
➖➖➖➖➖➖➖
ಗುರುವಾರ, ಜುಲೈ 6, 2017
(ಅಪ)ನಂಬಿಕೆ!
(ಅಪ)ನಂಬಿಕೆ!
➖➖➖➖➖
ನಂಬಿಕೆಯದೇನೂ
ತಪ್ಪಿರಲಿಲ್ಲ
ಮಾತಿನೊಂದಿಗೆ
ಸುತ್ತಿಕೊಂಡಿತ್ತು
ಅಷ್ಟೇ....
ದಾರಿ ತಪ್ಪಿದ್ದು
ಮಾತು!.
ಇಂದು ಬೆಳಿಗ್ಯೆ
ಅಪಹಾಸ್ಯಕ್ಕೆ
ಹೆದರಿ
ನಂಬಿಕೆ
ಆತ್ಮಹತ್ಯೆ
ಮಾಡಿಕೊಂಡಿತ್ತು!!.
✍🏽 ಶಾಂತಾರಾಮ್ ಶೆಟ್ಟಿ
➖➖➖〰〰〰〰〰
ಕನ್ನಡಿಗ!
ಕನ್ನಡಿಗ!
➖➖➖➖
ನೀವು ಕನ್ನಡದವರಾ?
ಕನ್ನಡಿಗನೊಬ್ಬ
ಕನ್ನಡಿಗನನ್ನು
ಕನ್ನಡಿ ಹಿಡಿದು
ಬೆಂಗಳೂರೆಲ್ಲ
ಹುಡುಕಿದ...
ಕೊನೆಗೂ ಒಬ್ಬ
ಸಿಕ್ಕಿ...
ಎಸ್... ಐಯಾಮ್ ಕನ್ನಡಿಗ
ಅಂದ
ಹೆಮ್ಮೆಯಿಂದ!!
✍🏽ಶಾಂತಾರಾಮ್ ಶೆಟ್ಟಿ 🤡
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)