ಭಾನುವಾರ, ಜುಲೈ 16, 2017

ಕುರುಡು!

ಕುರುಡು!
▪▪▪▪▪▪
ಹಠಕ್ಕೆಬಿದ್ದ
ಹರಿಶ್ಚಂದ್ರ
ಸತ್ಯದ
ಹಾದಿಯಲ್ಲೇನೋ
ಗೆದ್ದ!

ತನ್ನ ಸತ್ಯದ
ಶೂಲದಿಂದ
ತಿವಿ-ತಿವಿದು
ಹೆಂಡತಿ-ಮಗನ
ಹಿಂಸಿಸಿದ್ದ!

ಸತ್ಯ- ಹಿಂಸೆ
ಅಸತ್ಯ-ಅಹಿಂಸೆ
ಗಳ
ಕವಲುದಾರಿಯಲ್ಲಿ
ಏಗಲಾರದೆ
ಧರ್ಮ
ತೊಳಳಾಡಿದ್ದು
ಭೇಷ್
ಎಂದ ಹೊಗಳುಭಠರಿಗೆ
ಕಾಣಿಸಲೇ ಇಲ್ಲ.

✍🏽ಶಾಂತಾರಾಮ್ ಶೆಟ್ಟಿ
〰〰〰〰〰〰〰

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ