ಗುರುವಾರ, ಜುಲೈ 13, 2017

ಅಂಧತ್ವ!

ಅಂಧತ್ವ!
-------------
ಧರ್ಮಗುರುಗಳೆಲ್ಲಾ
ಸೇರಿ
ದೇವರ ಹೆಸರಲ್ಲಿ
ಮೊಣಕೈಗೆ
ಹಚ್ಚಿದ ಬೆಲ್ಲ
ಮನ ಮೈಗೆ
ಮೆತ್ತಿದ ಭಯವೆಲ್ಲ
ಭಕ್ತಾಂಧನಿಗೆ
ಪ್ರಸಾದವಾದದ್ದು
ಮರಣ
ಮೋಕ್ಷದಲ್ಲಿ!.

ಸ್ವರ್ಗದಲ್ಲಿ
ಭಕ್ತನಿಗೆ ಸೀಟು
ಕಾದಿರಿಸಿದವರಿಗೆ
ಆಸ್ಪತ್ರೆಯಲ್ಲಿ
ಆತನ
ನರಕಯಾತನೆ
ಕಾಣಲೇ ಇಲ್ಲ!!.

✍🏽ಶಾಂತಾರಾಮ್ ಶೆಟ್ಟಿ.
➖➖➖➖➖➖➖➖

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ