ಬುಧವಾರ, ಮಾರ್ಚ್ 1, 2017

ರಾಮಾಯಣ!

ರಾಮಾಯಣ!
🏹🏹🏹🏹🏹

ಸಾಗರದಾಚೆ
ಬಚ್ಚಿಟ್ಟ
ಹೆಂಡತಿಯ
ಹುಡುಕುವುದೇ
ಆಯ್ತು
ಶ್ರೀರಾಮನಿಗೆ....,

ರಗಳೆ
ರಾಮಾಯಣ!

ಸದಾ....
ತಾಪತ್ರಯ
ಸಾಕಾಯ್ತು
ಸಂಸಾರಿ
ಜನುಮ !

ಒಡೆಯನ
ಪಾಡು
ನೋಡಿಯೇ
ಬ್ರಹ್ಮಚಾರಿಯಾಗಿ
ಉಳಿದುಬಿಟ್ಟ
ಬುದ್ದಿವಂತ
ಹನುಮ !!
✍🏻: ಶಾಂತಾರಾಮ್ ಶೆಟ್ಟಿ .
🙉🙉🐒🐒🙉🙉

ಪ್ರಮಾದ!

ಪ್ರಮಾದ!
❌❌❌

ಪ್ರೀತಿ-ಪ್ರೇಮದ
ಭ್ರಮೆಯಲ್ಲಿ
ಕಡಲತಡಿಯ
ಮರಳ ಮೇಲೆ
ನಿನ್ನಕೈಯೊಳಗೆ
ನನ್ನ ಕೈಯಿಟ್ಟು
ಹಾಕಿದ ಹೆಜ್ಜೆಗಳ
ಗುರುತು,
ಛಲಹಿಡಿದು
ಅಲೆಗಳು
ಅಳಿಸಿಹಾಕಿದವು....!

ಬಹುಷ
ನಾವಿಟ್ಟ
ಹೆಜ್ಜೆಗಳಲ್ಲಿ
ಉನ್ಮಾದದ,
ಮದದ,
ಪ್ರಮಾದಗಳಿರಬೇಕು!

🐾🐾🐾🐾🐾👫

✍🏻 ಶಾಂತಾರಾಮ್ ಶೆಟ್ಟಿ

ಕವಿ ಕಲ್ಪನೆ!

ಕವಿ ಕಲ್ಪನೆ!
➖➖➖➖

ಕಲ್ಪನೆಯಲ್ಲೇ
ಕೂಸು
ಹೆಡೆದು
ಹಾಲುಣಿಸಿ
ಬೆಳೆಸಿ....,
ಅದರ ಜೊತೆ
ಆಟವಾಡಿ
ಬೆಳೆದು
ಕವಿಯಾದವನು
ನಾನು!!

ಕಾವ್ಯ
ನನ್ನ
ಕಲ್ಪನೆಯ
ಕೂಸು!!
🙋🏽‍♂
    ✍🏻ಶಾಂತಾರಾಮ್ ಶೆಟ್ಟಿ

ಉಗ್ರಪ್ರತಾಪಿ!

ಉಗ್ರಪ್ರತಾಪಿ!
➖➖➖➖➖

ಸಪ್ತಸಾಗರದ ಆಳಕ್ಕಿಳಿದು
ಮುತ್ತುಗಳ ಅಳೆದು
ಮಾಲೆಯ ಸುರಿದು ತರಲೆ?

ಏಳುಮಲೆಯ
ದಟ್ಟ ಪೊದರುಗಳ
ತರಿದು
ಹುಲಿಯ ಹಾಲನು ಹಿಂಡಿ ಬರಲೆ...?

ಹೇಳು ಪ್ರಿಯೆ...

ನಿನ್ನ ತುಟಿಯಂಚಿನಲಿ
ಸಂಪಿಗೆಯ
ಹೂ ನಗು ಕೊಂಕಲು
ಇಂದ್ರನನು ಗೆದ್ದು
ಸ್ವರ್ಗವನ್ನೇ ವರ್ಗಾಯಿಸಿ
ಧರೆಗೆಳೆಯಲೆ....?





ಕುಲ್ಲುಲೆಯೆ ಅಂಚಿ....,


ಸುರುಕು
ಕಜಿಪುಗು
ರಡ್ಡ್ ತಾರಾಯಿ
ಪಿರೆಲೆ!!
😜😜😜

✍🏻:ಶಾಂತಾರಾಮ್ ಶೆಟ್ಟಿ .

ಪಾಣಿಗ್ರಹಣ!




ಪಾಣಿಗ್ರಹಣ!
🤝🤝🤝🤝
ಚಂದಿರನೂರಿಂದ
ಜಾರಿ
ಹಾರಿ ಬಂದೆ
ನಿನ್ನ ಮುಡಿಗಿಡಲು
ನಕ್ಷತ್ರಗಳ ಆರಿಸಿ
ಕಿತ್ತು ತಂದೆ!

ಪ್ರೀತಿಗೆ...
"ಹೂಂ"ಕಾರವೇ
ಮಧುಚಂದ್ರ
"ಅಹಂ"ಕಾರವೇ
ಅರ್ಧಚಂದ್ರ!

ಗೆಳತಿ.....

ಕೈ ಕೊಡದೆ,
ಕೈ ಕೊಡು...
ಕೈ ನೀಡಿ,
ಕೈ ಹಿಡಿ !!.

✍🏻 ಶಾಂತಾರಾಮ್ ಶೆಟ್ಟಿ