ಸೋಮವಾರ, ಜನವರಿ 29, 2018

ದೇವರು!

ದೇವರು!
➖➖➖🙏
ಅಮ್ಮಾ....

ಯಾವತ್ತೂ
ದೇವರ
ನೆನೆಯುತ್ತಾ
ಹಾಡುತ್ತಾ
ಹೂ ಕಟ್ಟುತ್ತಿದ್ದಳು !

ದಿನಾ
ದರುಶನ
ಆಗುತ್ತಿದ್ದುದು
ನನಗೆ ಮಾತ್ರ !!

✍ಶಾಂತಾರಾಮ್ ಶೆಟ್ಟಿ

ವಿರೋಧಾಭಾಸ!

ವಿರೋಧಾಭಾಸ!
➖➖➖➖🤔

ನಾಡಿನ
ಹೆಣ್ಣಿನ
ಮಾನಾಪಮಾನದ
ಪ್ರಶ್ನೆ ಬಂದಾಗ
ಸುಮ್ಮನಿರಲು
ನಾವೇನು
ಬಳೆ
ತೊಟ್ಕೊಂಡಿದ್ದೇವಾ..?
ರಾಣಿ ಅಬ್ಬಕ್ಕ
ಮೆಟ್ಟಿದ
ಗಂಡು ನೆಲವಿದು !!

ಪರೋಕ್ಷವಾಗಿ
ಹೆಣ್ಣನ್ನು
ಜರೆದ
ಮನುವಾದಿಯೊಬ್ಬ,
ಬರೆದ
ಭಾಷಣದ...
ಅನುವಾದಿಯಾದ!!.

✍ಶಾಂತಾರಾಮ್ ಶೆಟ್ಟಿ
➖➖➖➖➖🤔

ಸೋಮವಾರ, ಜನವರಿ 22, 2018

ಮೊಸಳೆ-ಕಣ್ಣೀರು!

ಮೊಸಳೆ-ಕಣ್ಣೀರು!
===========🐊

ಎಲ್ಲಾ
ಕಣ್ಣೀರುಗಳು
ನಕಲಿಗಳಲ್ಲ
ಅಲ್ವಾ?

ಮೊಸಳೆಗಳಿಗೂ
ನೋವಿಲ್ವಾ? !!

✍ಶಾಂತಾರಾಮ್ ಶೆಟ್ಟಿ

ಪ್ರಾಣಿಗಳು!

ಪ್ರಾಣಿಗಳು!
========
ಆಸ್ತಿ,ಹಣಕ್ಕಾಗಿ
ಅಣ್ಣ-ತಮ್ಮಂದಿರು
ಹಾವು
ಮುಂಗುಸಿಯಂತೆ
ಕಾದಾಡುತ್ತಿದ್ದಾಗ....

ಮುಂಗುಸಿ
ಜೋಡಿ
ಸಹೋದರರು
ಒಗ್ಗಟ್ಟಾಗಿ
ಹಾವನ್ನು
ಹಿಡಿದು
ಹೊಡೆದು
ಸಾಯಿಸಿದವು!

ಪ್ರಾಣಿಗಳೇ
ಮಾನವಂತರು!!

✍ಶಾಂತಾರಾಮ್ ಶೆಟ್ಟಿ.
➖➖➖➖➖➖

ತೇಲಿಕೆಯ....!

ತೇಲಿಕೆಯ....!
➖➖➖➖
ಕಾಲ
ಕೈಯ
ಶರಧಿಯ
ಆಳದಲ್ಲಿ
ತಳಕಂಡು
ನೆಲೆ
ನಿಂತವರು
ಯಾರು?

ಮೂರು ದಿನದ
ಬದುಕಿನಲ್ಲಿ
ಮುಳುಗಿದವರು

ಸತ್ತಾಗ
ತೇಲಿದವರೇ
ಎಲ್ಲರೂ!!

✍ಶಾಂತಾರಾಮ್ ಶೆಟ್ಟಿ
➖➖➖➖➖🌹

ಅವಸ್ಥೆ!

 ಅವಸ್ಥೆ!
➖➖➖

ಗಾಂಧೀ ಜೀವನ
ಪಥ
ಸೆಮಿನಾರಿನಲ್ಲಿ
ಭಾಗವಹಿಸಿದ
ಎಲ್ಲರಿಗೂ
Cocktail Dinner
ವ್ಯವಸ್ಥೆ
ಏರ್ಪಡಿಸಲಾಗಿತ್ತು!!

✍ ಶಾಂತಾರಾಮ್ ಶೆಟ್ಟಿ
➖➖➖➖➖🥃

ಸಣ್ಣತನ!

ಸಣ್ಣತನ!
➖➖➖
ಕರೆಂಟು
ಹೋದಾಗ
ದೀಪದ ಬೆಳಕಿನ
ಸುತ್ತ ಕೂತು
ಅದರಡಿಯ
ಕತ್ತಲೆಯನ್ನು
ದೂರಿದರು!

✍ಶಾಂತಾರಾಮ್ ಶೆಟ್ಟಿ
➖➖➖➖➖🌚

ಕಪ್ಪು!▪▪▪

ಕಪ್ಪು!▪▪▪
============
ಕರಿ ಹಲಗೆಯ
ಮೇಲೆ ಮೂಡಿದ
ಬಿಳಿ ಅಕ್ಷರಗಳು
ಮಾತ್ರ
ನಮ್ಮನ್ನು
ಜ್ನಾನದ
ಕಕ್ಷೆಯಲ್ಲಿಟ್ಟು
ಮುಂದುವರಿಸಿದ್ದು!

ಕರಿಹಲಗೆ
ಇನ್ನೂ
ಅಲ್ಲೇ
ಹಾಗೆಯೇ ಇದೆ!!

✍ಶಾಂತಾರಾಮ್ ಶೆಟ್ಟಿ
➖➖➖▪▪▪

ಕಾರಣ!

ಕಾರಣ!
➖➖➖➖🌹
ಮುದುಕ
ಅಲ್ಲೇ
ಒರಗಿ ಕೂತಿರುವುದು
ವಯೋ ಸಹಜ
ಸುಸ್ತಿಂದ!

ಜನರ
ಭಾವಗಳು
ಬದಲಾಗಲು
ಕಾರಣ ಪಕ್ಕದಲ್ಲಿದ್ದ
wineshop!!

✍ಕುಡ್ಕ🥃.
➖➖➖➖