ಮಂಗಳವಾರ, ಏಪ್ರಿಲ್ 4, 2017

ರಾಕ್ಷಸರು!!

ರಾಕ್ಷಸರು!!
👹👹👹👹

ಹೋದಲೆಲ್ಲಾ
ನಾರದರು
ಮಾಡಿದ್ದೇನು?
ಬರೇ .....
ಬತ್ತಿ ಇಟ್ಟದ್ದು
ಮಾರಾಯ್ರೆ !

ರಾಗ-ದ್ವೇಷದ
ತುಪ್ಪ ಸುರಿದು
ಬೆಂಕಿ ಇಟ್ಟು
ಯಮನ
ಉರುಳಿಗೆ
ಕೊರಳು
ಒಡ್ಡಿ
ಎಳೀ.... ಎಳೀ
ಎಂದವರು
ಅವರೇ....?

ಇಲ್ಲಾ....!!

ಎಲ್ಲಾ...
ನಮ್ಮವರೇ....
ನಮ್ಮೊಳಗಿನ
ರಾಕ್ಷಸರೇ!!

✍🏾ಶಾಂತಾರಾಮ್ ಶೆಟ್ಟಿ
➖➖➖➖➖➖

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ