ಮಂಗಳವಾರ, ಆಗಸ್ಟ್ 15, 2017

ಆತ್ಮಹತ್ಯೆ!

ಆತ್ಮಹತ್ಯೆ!
➖➖➖➖

ದಿನಾ
ಸೊಂಪಾಗಿ
ನೆರಳೀಯುತ್ತಿದ್ದ
ಆಲದ ಮರ
ಇಂದೇಕೋ
ಅವನ
ಜಾತಿ ಕೇಳಿತು!


ಧರ್ಮಾಂಧತೆ
ಮೇರೆ ಮೀರಿ
ಮರವೇರಿ
ಬಾಯಿಗೆ ಬೆರಳಿಟ್ಟು
ನಿಶ್ಯಬ್ಧವಾಗಿ
ರೆಂಬೆಯಲಿ
ನೆಲೆಸಿತ್ತು

ಮರದ
ಕೊಂಬೆ
ನಡುನೆತ್ತಿಗೆ ಬಿದ್ದು
ದೇಹ ಬಿಡಿ
ಆತ್ಮ
ಕೂಡಾ ಸತ್ತಿತು!!.

✍🏽ಶಾಂತಾರಾಮ್ ಶೆಟ್ಟಿ 😐
➖➖➖➖➖➖➖

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ