ಭಾನುವಾರ, ಫೆಬ್ರವರಿ 12, 2017

ಸ್ವರ್ಗದ ಬಾಗಿಲು

ಸ್ವರ್ಗದ ಬಾಗಿಲು
➖➖➖➖➖

ವೈಕುಂಠ ಏಕಾದಶಿ
ಇಂದು
ದೇವಸ್ಥಾನದ
ಮುಂದು
ಜನ
ಸಾಲು ಸಾಲು!

ಸ್ವರ್ಗದ ಬಾಗಿಲೇ
ತೆರೆದಿದೆ
ವೈಕುಂಠದಲ್ಲಿ
ಅಲ್ಲಿಲ್ಲವಂತೆ
ಈ ಪರಿ
ನೂಕು ನುಗ್ಗಲು.....!😜

ಅವಸರವೇನಿಲ್ಲ
ಜನಕ್ಕೆ
ಇಷ್ಟು ಬೇಗ
ಸತ್ತು
ಸ್ವರ್ಗ ಸೇರಲು!

ಜನ್ಮಭೂಮಿ
ಇದು
ಮನೆಯಿದೆ ,
ಮಡದಿ,ಮಕ್ಕಳು
ಹೇಳಿಲ್ಲವೇ
ಹಿರಿಯರು....
ಸ್ವರ್ಗಕ್ಕಿಂಲೂ
ಮಿಗಿಲು !

ಸಿಕ್ಕಿದ್ರೆಹೇಳಿ
ದಾರಿಯಲ್ಲಿ
ನರೇಂದ್ರನಿಗೆ
ಬಾಗಿಲಿಗೆ
ಬೀಗ
ಹಾಕಲು!.😂

✍🏻ಶಾಂತಾರಾಮ್ ಶೆಟ್ಟಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ