ಸೋಮವಾರ, ಫೆಬ್ರವರಿ 19, 2018

ಉನ್ಮಾದ!

ಉನ್ಮಾದ!
➖➖➖➖➖
ಈ ದೇಶ ನನ್ನದು
ನನ್ನ ದೇಹದೊಳು
ಹರಿಯುವ
ಹನಿ ಹನಿ
ರಕ್ತವೂ ನಿನ್ನದು !

ಕವಿ ಬರೆದ
ಗಾಯಕ ಹಾಡಿದ
ಜನ
ಕುಣಿದರು
ದಣಿದರು...!!

ಉನ್ಮತ್ತ ಮತಭಕ್ತ
ರಾಜಕಾರಣಿ
ಎದೆಸೀಳುವ
ತಲೆಕಡಿಯುವ
ಯುದ್ದೋನ್ಮಾದದ
ಪಂಥಾಹ್ವಾನ ನೀಡಿದ!

ಗಡಿಯಲ್ಲಿ
ಗುಂಡು ಎದೆಯೊಕ್ಕಿಸಿ
ರಕ್ತ ಬಸಿದುಕೊಂಡು
ವೈರಿಯ ಪ್ರಾಣ
ಕಸಿದುಕೊಂಡು
ಸತ್ತಿದ್ದು
ಸೈನಿಕ ಮಾತ್ರ!

ವೀರ ಸತ್ತಾಗ
ಹೆಂಡತಿ ಮಕ್ಕಳು
ಎದೆಬಿರಿದು ಅತ್ತಾಗ
ಲೆಕ್ಕಿಸಲಿಲ್ಲ-ಬಿಕ್ಕಿಸಲಿಲ್ಲ
ದು:ಖಿಸಲು
ಜನರೇ ಇಲ್ಲ !

ಉಗುರು ಕಚ್ಚುವ
ದೇಶಭಕ್ತರೆಲ್ಲರೂ
ಅತಂಕಿತರೇ
ದೇಶ ಗೆದ್ದರೆ ಸಾಕು
ಕೊನೆಯ ಬಾಲಲ್ಲಿ
ಗೆಲ್ಲಲು ಇನ್ನೂ
ಐದು ರನ್ನು ಬೇಕು!!.

✍🏽ಶಾಂತಾರಾಮ್ ಶೆಟ್ಟಿ 😕

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ