ಶನಿವಾರ, ನವೆಂಬರ್ 19, 2016

ಸ್ಥಿತಿ!!

ಸ್ಥಿತಿ!!
➖➖➖
ನ್ಯಾಯಾಧೀಶರಿಗೇ
ಲಂಚ ಕೊಟ್ಟು
ಗೆದ್ದ
ಸುಳ್ಳು
ಸತ್ಯದ
ಹೆಗಲ ಮೇಲೇರಿ
ಕುಳಿತು
ಕೈಎತ್ತಿ ಮುಗಿದು
ಸತ್ಯಮೇವ ಜಯತೆ
ಎಂದು
ಬೀಗಿತು!!

ಬೀದಿಯ
ಕೊನೆಯಲ್ಲಿ
ತಂಬೂರಿ
ಹಿಡಿದ
ದಾಸಯ್ಯ
ಹಾಡಿದರು
ಸತ್ಯವಂತರಿಗಿದು
ಕಾಲವಲ್ಲ!

ನಾಯಿ
ಅಟ್ಟಿಸಿಕೊಂಡು
ಬೊಗಳಿತು!!
😕😕
✍🏾:ಶಾಂತಾರಾಮ್ ಶೆಟ್ಟಿ.
     🔘🔘🔘🔘🔘⁠⁠⁠⁠

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ