ಬೇಕೂಫ !!
▪▪▪▪
ನ್ಯಾಯ ಕೊಡಿ
ಬಡವನ
ಆರ್ತನಾದ.... !
ನಾಲ್ಕು
ಗೋಡೆಯ
ನಡುವೆ
ಕಣ್ಣಿಗೆ ಕಪ್ಪು ಬಟ್ಟೆ
ಕಟ್ಟಿದ
ನ್ಯಾಯ ದೇವತೆಯ
ತಕ್ಕಡಿಯ
ತೂಗಿ-ಕೂಗಿ
ಕೇಳಿತು !
ಇದ್ದರೆ...,
ಕೊಡಬಹುದಿತ್ತೇನೋ?
ತಕ್ಕಡಿಯೇ
ಖಾಲಿ !
ನ್ಯಾಯ ಎಲ್ಲಿ ?
ಅದು
ಸಿರಿವಂತನ
ಜೇಬಿನಲ್ಲಿ !
ನ್ಯಾಯ
ಕೇಳೋದಕ್ಕೂ
ಅಧಿಕಾರ
ಅಂತಸ್ತು
ಬೇಕಪ್ಪಾ !
ಬಡವನಿಗದು
ಗೊತ್ತಿಲ್ಲ
ಪಾಪ....,
ಬೇಕೂಫ !!
✍🏾ಶಾಂತಾರಾಮ್ ಶೆಟ್ಟಿ.
🔘🔘🔘🔘🔘🔘
▪▪▪▪
ನ್ಯಾಯ ಕೊಡಿ
ಬಡವನ
ಆರ್ತನಾದ.... !
ನಾಲ್ಕು
ಗೋಡೆಯ
ನಡುವೆ
ಕಣ್ಣಿಗೆ ಕಪ್ಪು ಬಟ್ಟೆ
ಕಟ್ಟಿದ
ನ್ಯಾಯ ದೇವತೆಯ
ತಕ್ಕಡಿಯ
ತೂಗಿ-ಕೂಗಿ
ಕೇಳಿತು !
ಇದ್ದರೆ...,
ಕೊಡಬಹುದಿತ್ತೇನೋ?
ತಕ್ಕಡಿಯೇ
ಖಾಲಿ !
ನ್ಯಾಯ ಎಲ್ಲಿ ?
ಅದು
ಸಿರಿವಂತನ
ಜೇಬಿನಲ್ಲಿ !
ನ್ಯಾಯ
ಕೇಳೋದಕ್ಕೂ
ಅಧಿಕಾರ
ಅಂತಸ್ತು
ಬೇಕಪ್ಪಾ !
ಬಡವನಿಗದು
ಗೊತ್ತಿಲ್ಲ
ಪಾಪ....,
ಬೇಕೂಫ !!
✍🏾ಶಾಂತಾರಾಮ್ ಶೆಟ್ಟಿ.
🔘🔘🔘🔘🔘🔘
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ