ಒಂದು ಕಾಲವಿತ್ತು ....
ನಾವು ಚಿಕ್ಕವರಾಗಿದ್ದಾಗ ಹಳ್ಳಿಯ ಬದುಕಲ್ಲಿ ಪೇಟೆಗೆ ಹೋಗಿ ಅಂಗಡಿಯಲ್ಲಿ ತರುವ ಮನೆಗೆ ಬೇಕಾದ ಸಾಮಾನು ಪದಾರ್ಥಗಳ ಪಟ್ಟಿ ಅಷ್ಟೇನೂ ದೊಡ್ಡದಿರುತ್ತಿರಲಿಲ್ಲ. ಹಳ್ಳಿಯ ಬದುಕು ಸ್ವಾವಲಂಬಿ ಬದುಕು. ಕುಡಿಯುವ ನೀರಿಗೆ ತಮ್ಮದೇ ಭಾವಿ , ಕೆರೆ ಕಟ್ಟೆ , ತರಕಾರಿಗೆ ಮನೆ ಹಿತ್ಲು , ಊಟಕ್ಕೆ ಭತ್ತ ರಾಗಿ ಬೆಳೆಯುವ ಗದ್ದೆಗಳು, ಪೂಜೆಗೆ ತೆಂಗಿನಕಾಯಿ -ಬಾಳೆ -ಎಳೆನೀರು-ಹೂವುಗಳು, ಧಾನ್ಯಕ್ಕೆ ಹೆಸರು ಹುರುಳಿ ಉದ್ದು, ಚಾ ಕಾಫಿಗೆ ಹಟ್ಟಿಯಲ್ಲಿದ್ದ ಗಂಗೆ-ಗೌರಿ ಹೀಗೆ ಎಲ್ಲಾನೂ ಮನೆ ಪರಿಸರದಲ್ಲೇ ದೊರಕಿಸಿಕೊಳ್ಳುತ್ತಿದ್ದುದರಿಂದ ಪೇಟೆಯ ಅಥವಾ ಇತರರ ಅವಲಂಬನೆ ತೀರಾ ಕಡಿಮೆ ... ಹೆಚ್ಚೆoದರೆ ಸಕ್ಕರೆ ಮೆಣಸು ಬೆಲ್ಲ ಉಪ್ಪು ಸೋಪು ಇಂತಹ ವಸ್ತುಗಳಿಗೆ ಮಾತ್ರ ಪೇಟೆಗೆ ಹೋಗುವ ಪ್ರಮೇಯ ಇತ್ತು ! ಅವಲಂಬನೆ ಕಡಿಮೆ ಆದಷ್ಟು ಭಿನ್ನಾಭಿಪ್ರಾಯಗಳು , ವಾದ- ವಿವಾದ,ತಿಕ್ಕಾಟಗಳಿಗೆ ಅವಕಾಶಗಳೂ ಕಡಿಮೆ ... ಆದರೆ ಬರ್ತಾ ಬರ್ತಾ ನಾವು ದುಡ್ಡಿನ ಸಂಪಾದನೆಯನ್ನು ಐಶ್ವರ್ಯ- ಶ್ರೀಮಂತಿಕೆ- ಅಭಿವೃದ್ಧಿ ಎಂದು ತಿಳಿದಾಗ ನೀರು ನಲ್ಲಿಯಲ್ಲಿ ಬಂತು, ಹಾಲು ಪ್ಲಾಸ್ಟಿಕ್ ಪೊಟ್ಟಣದಲ್ಲಿ ಬಂತು, ಅತಿ ಬೆಲೆಯ 30x40 ಚದರ ಮನೆಯಲ್ಲಿ ಹಿತ್ತಿಲೇ ಇಲ್ಲದೆ ಎಲ್ಲದಕ್ಕೂ ಕಾಸು ಕೊಟ್ಟು ಬೇರೆಯವರ ಕೃಪಾಕಟಾಕ್ಷದ ಮೋರೆ ನೋಡುವ ಪ್ರಸಂಗ ಬಂದಾಗ ಉದ್ಭವ ಆದದ್ದೇ ಈ ಕಾವೇರಿಯಂತಹ , ಕಸ ವಿಲೇವಾರಿಯಂತಹ ಪ್ರಸಂಗಗಳು !
ಹಳ್ಳಿಗಳಲ್ಲಿ ಪ್ಲಾಸ್ಟಿಕ್ ಗಾಜು ಇಂತಹ ಕೆಲವೇ ಕೆಲವು ವಸ್ತುಗಳನ್ನು ಹೊರತು ಪಡಿಸಿದರೆ , ಮೊಟ್ಟೆಯ ಹೊರ ಕವಚ , ಹಣ್ಣು - ತರಕಾರಿಗಳ ಸಿಪ್ಪೆ , ಸತ್ತ ಪ್ರಾಣಿಗಳು ಯಾವುದೂ ಕಸವಾಗಿ ಸಮಸ್ಯೆಯಾಗೋದಿಲ್ಲ. ಬದಲಾಗಿ ಉಪಯುಕ್ತ ಗೊಬ್ಬರವಾಗಿ ಮಾರ್ಪಾಡಾಗುತಿತ್ತು . ಆಧುನಿಕ ಸೌಲಭ್ಯ ಜೀವನ ಶೈಲಿಯಲ್ಲಿ ಇವೆಲ್ಲವೂ ಸಮಸ್ಯೆಗಳೇ . ಕಸ ವಿಲೇವಾರಿಗೆ ಬರುವ ಕಾರ್ಪೋರೇಶನ್ ಗಾಡಿ ಎರಡು ದಿನ ಬಂದಿಲ್ಲ ವಾದರೆ ಮನೆ ಕೊಳೆತು ನಾರುವ ಸ್ಮಶಾನ !
ಹಿಂದೆ ತುಂಬಾ ಮಳೆ ಬರ್ತಿತ್ತು- ಈಗ ಹಾಗಿಲ್ಲ ! ಮೊದಲು ಬೇಕಾದಷ್ಟಿತ್ತು-ಈಗಿನ ಸ್ಥಿತಿಗತಿ ಅವರಿಗೆ ಅರ್ಥ ಆಗ್ತಾ ಇಲ್ಲ , ನಮಗೇ ಇಲ್ಲ ಇನ್ನು ಅವ್ರಿಗೆ ಎಲ್ಲಿಂದ ಇಂತಹ ಸೋಗಲಾಡಿತನದ ಮಾನವ ನಿರ್ಮಿತ ಸಮಸ್ಯೆಗಳಿಗೆ ನಾವು ಎಲ್ಲವನ್ನು ಹಿತವಾಗುವಷ್ಟು ನೀಡಿರುವ ಪ್ರಕೃತಿಯನ್ನು ದೂರುವುದು ಎಷ್ಟು ಸರಿ ? ಅದರ ಬದಲಿಗೆ ಹಿಂದೆಗೂ-ಈಗಿಗೂ ಏನು ವ್ಯತ್ಯಾಸವಾಯ್ತು ? ! ಆಗ ಮಳೆ ಬರ್ತಿದ್ರೆ-ಈಗ್ಯಾಕೆ ಬರ್ತಿಲ್ಲ? . ಬದಲಿ ವ್ಯವಸ್ಥೆಗಳೇನು? . ಹೀಗೆ ಆದ್ರೆ ಮುಂದಕ್ಕೇನು? ಹೀಗೆಲ್ಲಾ ಯೋಚನೆ ಮಾಡುವ ಜನಸಂಖ್ಯೆ ಹಾಗೆಯೆ ದಿವ್ಯ ದೂರದರ್ಶಿತ್ವ ಇರುವ ನಾಯಕತ್ವ ಕೊರತೆಯೇ ನಮ್ಮನ್ನು ಈ ಸ್ಥಿತಿಗೆ ತಂದಿಟ್ಟದ್ದು !
ಹಿರಿಯರ ನಂಬಿಕೆಗಳನ್ನೆಲ್ಲ ಮೂಢನಂಬಿಕೆಗಳು ಎಂದು ನಮ್ಮ ಮೂಗಿನ ನೇರಕ್ಕೆ ಸಾರ ಸಗಾಟಾಗಿ ಸಾಗ ಹಾಕುವ ನಾವು ಕನಿಷ್ಠ ನಮ್ಮ ಬುದ್ಧಿವಂತ ನಂಬಿಕೆಗಳನ್ನಾದರೂ ವೈಜ್ಞಾನಿಕವಾಗಿ ಬಲ ಪಡಿಸಲಾಗದೆ ಸೋತು ಸೊರಗಿ ಈಗ ಅಸಾಹಾಯಕರಾಗಿ ಮೈ ಪರಚಿ ಕೊಳ್ಳುವಂತಾಗಿದೆ !
ಕೊರತೆ ಕಾಡಿದಾಗ ಬದಲಿ ವ್ಯವಸ್ಥೆಯನ್ನು ಹುಡುಕಿಕೊಂಡು ಬದುಕಿ ಮೆರೆದ ಪ್ರಾಣಿ ಮಾನವ. ಕೆರೆಗಳ ಪುನರುಜ್ಜೀವನ , ಸೊರಗಿದ ನದಿಗಳ ಜಲ ಜೀವ ಪೂರಣ, ಮಲಿನವಾಗದಂತೆ ಸಂರಕ್ಷಣೆ , ಪೋಲಾಗದಂತೆ ವೈಜ್ಞಾನಿಕ ನಿರ್ವಹಣೆ , ಮಳೆ ನೀರಿನ ಸಾರ್ಥಕ ಸಂರಕ್ಷಣೆ ಇಂತದ್ದನ್ನೆಲ್ಲಾ ಮಾಡಿದ್ದರೆ ನೀರನ್ನು ಹಿಡಿದಿಟ್ಟು ಕೊಳ್ಳುವ ಗುಣವಿರುವ ಮಣ್ಣಿನ ಬಯಲು ಸೀಮೆಗೆ ಕಾವೇರಿಯ ನೀರಿನ ಬಳಕೆಯ ಅಗತ್ಯ ಕನಿಷ್ಠವಾಗುತ್ತಿತ್ತು ! ಆದರೆ ಇದನ್ನೆಲ್ಲಾ ತಲೆಗೆ ತುಂಬಿಸಿಕೊಂಡು ಜೀವ ತೇಯುವ ವಿಶ್ವೇಶ್ವರಯ್ಯ ರನ್ನು ನಾವು ಈಗ ಹುಡುಕುವುದಾದ್ರೂ ಎಲ್ಲಿಂದ ?
ನೀರಿನ ಕೊರತೆಗೆ ಕಾರಣಗಳನ್ನು ಹುಡುಕಿಕೊಂಡು ಒಬ್ಬ ಹಳ್ಳಿಯ ಅವಿದ್ಯಾವಂತ ಪ್ರಗತಿ ಪರ ರೈತ ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶವನ್ನು ಸೇರಿಸಿಕೊಂಡು ನೀರು ಇಂಗುವಿಕೆಯನ್ನು ಹೇರಳಗೊಳಿಸಿ ವಿಜ್ಞಾನಿಗಳಿಗೆ ಸವಾಲು ಹಾಕುವ ದೊಡ್ಡ ಬಳ್ಳಾಪುರದ ನಾರಾಯಣ ರೆಡ್ಡಿ ಯವರಲ್ಲಿ ಇರುವ ಇಚ್ಚಾಶಕ್ತಿಯ ಕನಿಷ್ಠ ಒಂದಂಶ ನಮ್ಮ ರಾಜಕೀಯ ನಾಯಕರಲ್ಲಿ ಇದ್ದಿದ್ದರೆ ಇಂದು ನಾವು ತಮಿಳುನಾಡಿಗೆ ''ಇಕ್ಕಳಮ್ಮ ತಗೋ...ಜಾಸ್ತಿನೇ ಇಟ್ಕೋ'' ಅನ್ನುವ ಮೇಲ್ಮಟ್ಟಕ್ಕೆ ಮುಟ್ಟುತ್ತಿದ್ದೆವು !
ವಿದ್ಯೆಯಿಲ್ಲದ ವಿದ್ಯಾಮಂತ್ರಿ , ಗದ್ದೆಗಿಳಿಯದ ಕೃಷಿ ಮಂತ್ರಿ ಇಂತವರಿಂದ ಯಾವ ಘನಂಧಾರಿ ವಿಸ್ಮಯಗಳನ್ನು ಜನ ಸಾಮಾನ್ಯ ತಾನು ನಿರೀಕ್ಷಿಸ ಬಹುದು !
ನಮ್ಮನ್ನು ನಾವು ಬದಲಾಯಿಸಿಕೊಂಡು , ಜೀವನ ಶೈಲಿಯಲ್ಲಿ ಅತಿ ಸೌಲಭ್ಯಗಳನ್ನು ತ್ಯಜಿಸಿ ಪ್ರಾಕೃತಿಕವಾಗಿ ಬದುಕುವುದರಿಂದ ಮೇಲಿನ ಬಹಳಷ್ಟು ಸಮಸ್ಯೆಗಳು 'ಸಮಸ್ಯೆ' ಅನ್ನಿಸದೆಯೇ ಜೀವನ ಸರಳವಾಗುವುದು ಖಂಡಿತ !
ಅದಕ್ಕೆ ಇಚ್ಚಾಶಕ್ತಿ, ಜವಾಬ್ಧಾರಿಯ ನಡೆ ಬೇಕು , ಭಂಡ ಜೀವನದ ಅಭಿಮಾನ ಕಡಿಮೆಯಾಗಬೇಕು !
ಕೊನೆಗೊಂದು ಮಾತು
ನಮ್ಮಲ್ಲಿ ನಂಬಿಕೆಯಿಟ್ಟು ಭವಿಷ್ಯವಿದೆಯೆಂದು ಈ ಸುಂದರ ವಸುಂಧರೆಗೆ ಕಾಲಿಟ್ಟ ನಮ್ಮ ಮುಂದಿನ ಪೀಳಿಗೆಗೆ ನಾವು ಬದುಕುವ ಉತ್ತಮ ವಾತಾವರಣವನ್ನು ಬಿಟ್ಟು ಕೊಟ್ಟು ಹೋಗಲು ಆಗುವುದಿಲ್ಲವೆಂದಾದರೆ ಮಕ್ಕಳನ್ನು ಹುಟ್ಟಿಸುವುದನ್ನು ನಿಲ್ಲಿಸುವುದು ಒಳಿತು !
ನರಕಕ್ಕೆ ದಾರಿ ತೋರಿಸುವ ಪಾಪಕಾರ್ಯವಾದರೂ ತಪ್ಪುತ್ತೆ !!
ಸಮಯವಿದ್ದರೆ ನಾರಾಯಣ ರೆಡ್ಡಿಯವರ ಜೀವ ಸತ್ವದ ನಾಲ್ಕು ಮಾತುಗಳನ್ನಾದರೂ ಕೇಳಿ .....
https://youtu.be/nknxV4IVkVE
ಶಾಂತಾರಾಮ್ ಶೆಟ್ಟಿ
ನಾವು ಚಿಕ್ಕವರಾಗಿದ್ದಾಗ ಹಳ್ಳಿಯ ಬದುಕಲ್ಲಿ ಪೇಟೆಗೆ ಹೋಗಿ ಅಂಗಡಿಯಲ್ಲಿ ತರುವ ಮನೆಗೆ ಬೇಕಾದ ಸಾಮಾನು ಪದಾರ್ಥಗಳ ಪಟ್ಟಿ ಅಷ್ಟೇನೂ ದೊಡ್ಡದಿರುತ್ತಿರಲಿಲ್ಲ. ಹಳ್ಳಿಯ ಬದುಕು ಸ್ವಾವಲಂಬಿ ಬದುಕು. ಕುಡಿಯುವ ನೀರಿಗೆ ತಮ್ಮದೇ ಭಾವಿ , ಕೆರೆ ಕಟ್ಟೆ , ತರಕಾರಿಗೆ ಮನೆ ಹಿತ್ಲು , ಊಟಕ್ಕೆ ಭತ್ತ ರಾಗಿ ಬೆಳೆಯುವ ಗದ್ದೆಗಳು, ಪೂಜೆಗೆ ತೆಂಗಿನಕಾಯಿ -ಬಾಳೆ -ಎಳೆನೀರು-ಹೂವುಗಳು, ಧಾನ್ಯಕ್ಕೆ ಹೆಸರು ಹುರುಳಿ ಉದ್ದು, ಚಾ ಕಾಫಿಗೆ ಹಟ್ಟಿಯಲ್ಲಿದ್ದ ಗಂಗೆ-ಗೌರಿ ಹೀಗೆ ಎಲ್ಲಾನೂ ಮನೆ ಪರಿಸರದಲ್ಲೇ ದೊರಕಿಸಿಕೊಳ್ಳುತ್ತಿದ್ದುದರಿಂದ ಪೇಟೆಯ ಅಥವಾ ಇತರರ ಅವಲಂಬನೆ ತೀರಾ ಕಡಿಮೆ ... ಹೆಚ್ಚೆoದರೆ ಸಕ್ಕರೆ ಮೆಣಸು ಬೆಲ್ಲ ಉಪ್ಪು ಸೋಪು ಇಂತಹ ವಸ್ತುಗಳಿಗೆ ಮಾತ್ರ ಪೇಟೆಗೆ ಹೋಗುವ ಪ್ರಮೇಯ ಇತ್ತು ! ಅವಲಂಬನೆ ಕಡಿಮೆ ಆದಷ್ಟು ಭಿನ್ನಾಭಿಪ್ರಾಯಗಳು , ವಾದ- ವಿವಾದ,ತಿಕ್ಕಾಟಗಳಿಗೆ ಅವಕಾಶಗಳೂ ಕಡಿಮೆ ... ಆದರೆ ಬರ್ತಾ ಬರ್ತಾ ನಾವು ದುಡ್ಡಿನ ಸಂಪಾದನೆಯನ್ನು ಐಶ್ವರ್ಯ- ಶ್ರೀಮಂತಿಕೆ- ಅಭಿವೃದ್ಧಿ ಎಂದು ತಿಳಿದಾಗ ನೀರು ನಲ್ಲಿಯಲ್ಲಿ ಬಂತು, ಹಾಲು ಪ್ಲಾಸ್ಟಿಕ್ ಪೊಟ್ಟಣದಲ್ಲಿ ಬಂತು, ಅತಿ ಬೆಲೆಯ 30x40 ಚದರ ಮನೆಯಲ್ಲಿ ಹಿತ್ತಿಲೇ ಇಲ್ಲದೆ ಎಲ್ಲದಕ್ಕೂ ಕಾಸು ಕೊಟ್ಟು ಬೇರೆಯವರ ಕೃಪಾಕಟಾಕ್ಷದ ಮೋರೆ ನೋಡುವ ಪ್ರಸಂಗ ಬಂದಾಗ ಉದ್ಭವ ಆದದ್ದೇ ಈ ಕಾವೇರಿಯಂತಹ , ಕಸ ವಿಲೇವಾರಿಯಂತಹ ಪ್ರಸಂಗಗಳು !
ಹಳ್ಳಿಗಳಲ್ಲಿ ಪ್ಲಾಸ್ಟಿಕ್ ಗಾಜು ಇಂತಹ ಕೆಲವೇ ಕೆಲವು ವಸ್ತುಗಳನ್ನು ಹೊರತು ಪಡಿಸಿದರೆ , ಮೊಟ್ಟೆಯ ಹೊರ ಕವಚ , ಹಣ್ಣು - ತರಕಾರಿಗಳ ಸಿಪ್ಪೆ , ಸತ್ತ ಪ್ರಾಣಿಗಳು ಯಾವುದೂ ಕಸವಾಗಿ ಸಮಸ್ಯೆಯಾಗೋದಿಲ್ಲ. ಬದಲಾಗಿ ಉಪಯುಕ್ತ ಗೊಬ್ಬರವಾಗಿ ಮಾರ್ಪಾಡಾಗುತಿತ್ತು . ಆಧುನಿಕ ಸೌಲಭ್ಯ ಜೀವನ ಶೈಲಿಯಲ್ಲಿ ಇವೆಲ್ಲವೂ ಸಮಸ್ಯೆಗಳೇ . ಕಸ ವಿಲೇವಾರಿಗೆ ಬರುವ ಕಾರ್ಪೋರೇಶನ್ ಗಾಡಿ ಎರಡು ದಿನ ಬಂದಿಲ್ಲ ವಾದರೆ ಮನೆ ಕೊಳೆತು ನಾರುವ ಸ್ಮಶಾನ !
ಹಿಂದೆ ತುಂಬಾ ಮಳೆ ಬರ್ತಿತ್ತು- ಈಗ ಹಾಗಿಲ್ಲ ! ಮೊದಲು ಬೇಕಾದಷ್ಟಿತ್ತು-ಈಗಿನ ಸ್ಥಿತಿಗತಿ ಅವರಿಗೆ ಅರ್ಥ ಆಗ್ತಾ ಇಲ್ಲ , ನಮಗೇ ಇಲ್ಲ ಇನ್ನು ಅವ್ರಿಗೆ ಎಲ್ಲಿಂದ ಇಂತಹ ಸೋಗಲಾಡಿತನದ ಮಾನವ ನಿರ್ಮಿತ ಸಮಸ್ಯೆಗಳಿಗೆ ನಾವು ಎಲ್ಲವನ್ನು ಹಿತವಾಗುವಷ್ಟು ನೀಡಿರುವ ಪ್ರಕೃತಿಯನ್ನು ದೂರುವುದು ಎಷ್ಟು ಸರಿ ? ಅದರ ಬದಲಿಗೆ ಹಿಂದೆಗೂ-ಈಗಿಗೂ ಏನು ವ್ಯತ್ಯಾಸವಾಯ್ತು ? ! ಆಗ ಮಳೆ ಬರ್ತಿದ್ರೆ-ಈಗ್ಯಾಕೆ ಬರ್ತಿಲ್ಲ? . ಬದಲಿ ವ್ಯವಸ್ಥೆಗಳೇನು? . ಹೀಗೆ ಆದ್ರೆ ಮುಂದಕ್ಕೇನು? ಹೀಗೆಲ್ಲಾ ಯೋಚನೆ ಮಾಡುವ ಜನಸಂಖ್ಯೆ ಹಾಗೆಯೆ ದಿವ್ಯ ದೂರದರ್ಶಿತ್ವ ಇರುವ ನಾಯಕತ್ವ ಕೊರತೆಯೇ ನಮ್ಮನ್ನು ಈ ಸ್ಥಿತಿಗೆ ತಂದಿಟ್ಟದ್ದು !
ಹಿರಿಯರ ನಂಬಿಕೆಗಳನ್ನೆಲ್ಲ ಮೂಢನಂಬಿಕೆಗಳು ಎಂದು ನಮ್ಮ ಮೂಗಿನ ನೇರಕ್ಕೆ ಸಾರ ಸಗಾಟಾಗಿ ಸಾಗ ಹಾಕುವ ನಾವು ಕನಿಷ್ಠ ನಮ್ಮ ಬುದ್ಧಿವಂತ ನಂಬಿಕೆಗಳನ್ನಾದರೂ ವೈಜ್ಞಾನಿಕವಾಗಿ ಬಲ ಪಡಿಸಲಾಗದೆ ಸೋತು ಸೊರಗಿ ಈಗ ಅಸಾಹಾಯಕರಾಗಿ ಮೈ ಪರಚಿ ಕೊಳ್ಳುವಂತಾಗಿದೆ !
ಕೊರತೆ ಕಾಡಿದಾಗ ಬದಲಿ ವ್ಯವಸ್ಥೆಯನ್ನು ಹುಡುಕಿಕೊಂಡು ಬದುಕಿ ಮೆರೆದ ಪ್ರಾಣಿ ಮಾನವ. ಕೆರೆಗಳ ಪುನರುಜ್ಜೀವನ , ಸೊರಗಿದ ನದಿಗಳ ಜಲ ಜೀವ ಪೂರಣ, ಮಲಿನವಾಗದಂತೆ ಸಂರಕ್ಷಣೆ , ಪೋಲಾಗದಂತೆ ವೈಜ್ಞಾನಿಕ ನಿರ್ವಹಣೆ , ಮಳೆ ನೀರಿನ ಸಾರ್ಥಕ ಸಂರಕ್ಷಣೆ ಇಂತದ್ದನ್ನೆಲ್ಲಾ ಮಾಡಿದ್ದರೆ ನೀರನ್ನು ಹಿಡಿದಿಟ್ಟು ಕೊಳ್ಳುವ ಗುಣವಿರುವ ಮಣ್ಣಿನ ಬಯಲು ಸೀಮೆಗೆ ಕಾವೇರಿಯ ನೀರಿನ ಬಳಕೆಯ ಅಗತ್ಯ ಕನಿಷ್ಠವಾಗುತ್ತಿತ್ತು ! ಆದರೆ ಇದನ್ನೆಲ್ಲಾ ತಲೆಗೆ ತುಂಬಿಸಿಕೊಂಡು ಜೀವ ತೇಯುವ ವಿಶ್ವೇಶ್ವರಯ್ಯ ರನ್ನು ನಾವು ಈಗ ಹುಡುಕುವುದಾದ್ರೂ ಎಲ್ಲಿಂದ ?
ನೀರಿನ ಕೊರತೆಗೆ ಕಾರಣಗಳನ್ನು ಹುಡುಕಿಕೊಂಡು ಒಬ್ಬ ಹಳ್ಳಿಯ ಅವಿದ್ಯಾವಂತ ಪ್ರಗತಿ ಪರ ರೈತ ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶವನ್ನು ಸೇರಿಸಿಕೊಂಡು ನೀರು ಇಂಗುವಿಕೆಯನ್ನು ಹೇರಳಗೊಳಿಸಿ ವಿಜ್ಞಾನಿಗಳಿಗೆ ಸವಾಲು ಹಾಕುವ ದೊಡ್ಡ ಬಳ್ಳಾಪುರದ ನಾರಾಯಣ ರೆಡ್ಡಿ ಯವರಲ್ಲಿ ಇರುವ ಇಚ್ಚಾಶಕ್ತಿಯ ಕನಿಷ್ಠ ಒಂದಂಶ ನಮ್ಮ ರಾಜಕೀಯ ನಾಯಕರಲ್ಲಿ ಇದ್ದಿದ್ದರೆ ಇಂದು ನಾವು ತಮಿಳುನಾಡಿಗೆ ''ಇಕ್ಕಳಮ್ಮ ತಗೋ...ಜಾಸ್ತಿನೇ ಇಟ್ಕೋ'' ಅನ್ನುವ ಮೇಲ್ಮಟ್ಟಕ್ಕೆ ಮುಟ್ಟುತ್ತಿದ್ದೆವು !
ವಿದ್ಯೆಯಿಲ್ಲದ ವಿದ್ಯಾಮಂತ್ರಿ , ಗದ್ದೆಗಿಳಿಯದ ಕೃಷಿ ಮಂತ್ರಿ ಇಂತವರಿಂದ ಯಾವ ಘನಂಧಾರಿ ವಿಸ್ಮಯಗಳನ್ನು ಜನ ಸಾಮಾನ್ಯ ತಾನು ನಿರೀಕ್ಷಿಸ ಬಹುದು !
ನಮ್ಮನ್ನು ನಾವು ಬದಲಾಯಿಸಿಕೊಂಡು , ಜೀವನ ಶೈಲಿಯಲ್ಲಿ ಅತಿ ಸೌಲಭ್ಯಗಳನ್ನು ತ್ಯಜಿಸಿ ಪ್ರಾಕೃತಿಕವಾಗಿ ಬದುಕುವುದರಿಂದ ಮೇಲಿನ ಬಹಳಷ್ಟು ಸಮಸ್ಯೆಗಳು 'ಸಮಸ್ಯೆ' ಅನ್ನಿಸದೆಯೇ ಜೀವನ ಸರಳವಾಗುವುದು ಖಂಡಿತ !
ಅದಕ್ಕೆ ಇಚ್ಚಾಶಕ್ತಿ, ಜವಾಬ್ಧಾರಿಯ ನಡೆ ಬೇಕು , ಭಂಡ ಜೀವನದ ಅಭಿಮಾನ ಕಡಿಮೆಯಾಗಬೇಕು !
ಕೊನೆಗೊಂದು ಮಾತು
ನಮ್ಮಲ್ಲಿ ನಂಬಿಕೆಯಿಟ್ಟು ಭವಿಷ್ಯವಿದೆಯೆಂದು ಈ ಸುಂದರ ವಸುಂಧರೆಗೆ ಕಾಲಿಟ್ಟ ನಮ್ಮ ಮುಂದಿನ ಪೀಳಿಗೆಗೆ ನಾವು ಬದುಕುವ ಉತ್ತಮ ವಾತಾವರಣವನ್ನು ಬಿಟ್ಟು ಕೊಟ್ಟು ಹೋಗಲು ಆಗುವುದಿಲ್ಲವೆಂದಾದರೆ ಮಕ್ಕಳನ್ನು ಹುಟ್ಟಿಸುವುದನ್ನು ನಿಲ್ಲಿಸುವುದು ಒಳಿತು !
ನರಕಕ್ಕೆ ದಾರಿ ತೋರಿಸುವ ಪಾಪಕಾರ್ಯವಾದರೂ ತಪ್ಪುತ್ತೆ !!
ಸಮಯವಿದ್ದರೆ ನಾರಾಯಣ ರೆಡ್ಡಿಯವರ ಜೀವ ಸತ್ವದ ನಾಲ್ಕು ಮಾತುಗಳನ್ನಾದರೂ ಕೇಳಿ .....
https://youtu.be/nknxV4IVkVE
ಶಾಂತಾರಾಮ್ ಶೆಟ್ಟಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ